Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾಂಡುರಂಗ ವಿಠಲಕ್ಕೆ ತೋತಾಪುರಿ ಭಟ್ಟ ಎಂಟ್ರಿ!
ಎಂ ಎಸ್ ನರಸಿಂಹಮೂರ್ತಿಯವರ ಸಂಭಾಷಣೆಯ ಚತುರತೆ ಪ್ರೇಕ್ಷಕರನ್ನು ಹಿಡಿದಿಡುವ ಪ್ರಮುಖ ಅಂಶಗಳಲ್ಲಿ ಒಂದು. ಮಧ್ಯಮವರ್ಗದ ತಾಪತ್ರಯ, ತೊಂದರೆಗಳು, ಪೇಚಿಗೆ ಸಿಲುಕುವ ಸನ್ನಿವೇಶಗಳನ್ನು ನವಿರಾದ ಹಾಸ್ಯದಲ್ಲಿ ಎಂಎಸ್ಎನ್ ನಗಿಸುತ್ತಾರೆ.
ಜಹಂಗೀರ್ (ಪಾಂಡುರಂಗ), ಸುಜಯ್ ಶಾಸ್ತ್ರಿ (ವಿಠಲ), ಪಿ ಡಿ ಸತೀಶ್ (ಪದ್ದು ), ಅಪೇಕ್ಷಾ (ಜಾಜಿ), ಶ್ರೀಲಕ್ಷ್ಮಿ(ಪಲ್ಲು), ಬಿ ಜಯಮ್ಮ(ಅಮ್ಮ), ಮೇಘಶ್ರೀ ಭಾಗವತರ್(ಚಂಪಾ) ಪಾತ್ರಗಳು ಜನರಿಗೆ ಅಷ್ಟೊಂಡು ಇಷ್ಟವಾಗಿವೆ ಎಂದರೆ ಇದಕ್ಕೆ ಕಾರಣ ಎಂಎಸ್ಎನ್ ಅವರ ಚಾಕಚಕ್ಯತೆ. ಈಗ ಈ ಪಾತ್ರಗಳ ಜೊತೆಗೆ ಮತ್ತೊಂದು ಪಾತ್ರ ಎಂಟ್ರಿಯಾಗಿದೆ. ಅದೇ ಅಡುಗೆ ಭಟ್ಟರ ಪಾತ್ರ.
ಭಟ್ಟರು ಎಂದರೆ ತೋತಾಪುರಿ ಪುಳಿಮೊಟ್ಟೆ ಭೀಮೇಶ್ವರ ಭಟ್ಟ. ಈ ಪಾತ್ರದಲ್ಲಿ ಸಿಹಿ ಕಹಿ ಚಂದ್ರು ಕಾಣಿಸಲಿದ್ದಾರೆ. ಈಗಾಗಲೆ ಏಳೆಂಟು ಸಂಚಿಕೆಗಳಿಂದ ಕಾಣಿಸುತ್ತಿದ್ದ ಭಟ್ಟರು ವೀಕ್ಷಕರಿಗೆ ಸಖತ್ ಇಷ್ಟವಾಗಿದ್ದಾರೆ. ಪಾಂಡುರಂಗ ಪಾತ್ರದಲ್ಲಿ ನಟ ಜಹಂಗೀರ್ ವೀಕ್ಷಕರನ್ನು ಸೆಳೆಯುತ್ತಿದ್ದರು.
ಈಗ ಸಿಹಿಕಹಿ ಚಂದ್ರು ಅವರ ಭಟ್ಟ ಪಾತ್ರಗೂ ಪಾಂಡುರಂಗ ಪಾತ್ರಗಳ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಇನ್ನು ಪಲ್ಲು, ಜಾಜಿ ಹಾಗೂ ಪದ್ದು ರಂಜಿಸಲು ಇದ್ದೇ ಇದ್ದಾರೆ. ಪಾಂಡುರಂಗ ವಿಠಲ ಪ್ರಸಾರ ಸಮಯ: ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10ಕ್ಕೆ ಜೀ ಕನ್ನಡಲ್ಲಿ. (ಒನ್ಇಂಡಿಯಾ ಕನ್ನಡ)