ಬದುಕು ಜಟಕಾ ಬಂಡಿ ಕಟಕಟೆಯಲ್ಲಿ ನಟಿ ರಂಜಿತಾ
ಕನ್ನಡಿಗರ ಕಣ್ಮಣಿ ಜೀ ಕನ್ನಡದಲ್ಲಿ ಇತ್ತೀಗಷ್ಟೇ ಪ್ರಾರಂಭಗೊಂಡು ಜನಪ್ರಿಯ ಆಗುತ್ತಿರುವ 'ಬದುಕುಜಟಕಾ ಬಂಡಿ' ಕಾರ್ಯಕ್ರಮದಲ್ಲಿ ಖ್ಯಾತ ತಮಿಳು ನಟಿ ರಂಜಿತಾ ಕಾಣಿಸಿಕೊಳ್ಳಲಿದ್ದಾರೆ. ನಿತ್ಯಾನಂದಸ್ವಾಮಿ ಜತೆಗಿನ ರಾಸಲೀಲೆಯ ಪ್ರಮುಖ ಪಾತ್ರದಾರಿ ಎಂದೇ ಬಿಂಬಿತವಾಗಿರುವ ರಂಜಿತಾ ಇದುವರೆಗೂ ಕಣ್ಮರೆಯಾಗಿದ್ದು ಇತ್ತೀಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಜೀ ಕನ್ನಡ ಅವರನ್ನು 'ಬದುಕು ಜಟಕಾ ಬಂಡಿ' ಕಾರ್ಯಕ್ರಮಕ್ಕೆ ಕರೆತಂದು ರಾಸಲೀಸೆ ಪ್ರಕರಣದ ಬಗ್ಗೆ ಮಾತನಾಡಿಸಿದೆ. ರಂಜಿತಾ ನಿತ್ಯಾನಂದ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ ಎಂಬ ಆರೋಪ ಎದುರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ರಂಜಿತ ತನ್ನ ಇಡೀ ಕಥಾನಕವನ್ನು 'ಬದುಕು ಜಟಕಾಬಂಡಿ' ಕಾರ್ಯಕ್ರಮದಲ್ಲಿ ತೆರೆದಿಟ್ಟಿದ್ದಾಳೆ.
ತನ್ನ ಮೇಲಿರುವ ರಾಸಲೀಲೆಯ ಆರೋಪ ಸತ್ಯಕ್ಕೆ ದೂರವಾದ್ದುದ್ದು ಎಂದೇ ವಾದಿಸುತ್ತಿರುವ ಆಕೆ ತನ್ನ ಮೇಲಿನ ಆರೋಪಕ್ಕೆ ಕಣ್ಣೀರಿನಧಾರೆ ಹರಿಸಿದ ಘಟನೆ 'ಬದುಕು ಜಟಕಾಬಂಡಿ'ಯಲ್ಲಿ ನಡೆಯಿತು. ರಂಜಿತಾ ಪಾಲ್ಗೊಂಡ ಸಂಚಿಕೆಯಲ್ಲಿ ಮಾಜಿ ಲೋಕಸಭಾ ಸದಸ್ಯೆ ತೇಜಸ್ವಿನಿ ರಮೇಶ್, ನಟಿ ಸುಧಾ ಬೆಳವಾಡಿ ಹಾಗೂ ಬಿ.ಯು. ಗೀತಾ ಪಾಲ್ಗೊಂಡು ರಂಜಿತಾ ಮೇಲಿರುವ ಆರೋಪದ ಕುರಿತು ಸತ್ಯಾಂಶವನ್ನು ಹೊರಗೆಳೆಯುವ ಪ್ರಯತ್ನ ಮಾಡಿದ್ದಾರೆ.
ಬದುಕು ಜಟಕಾಬಂಡಿಯ ನಿರೂಪಕಿ ಮಾಳವಿಕಾ ಕೂಡಾ ನಿತ್ಯಾನಂದಸ್ವಾಮಿಯ ಅನುಯಾಯಿಯಾಗಿದ್ದು ಚರ್ಚೆ ಮತ್ತಷ್ಟು ರೋಚಕವಾಗಿದೆ. ಅಷ್ಟಕ್ಕೂ ನಿತ್ಯಾನಂದ ಹಾಗೂ ರಂಜಿತಾ ನಡುವೆ ಇರುವಂತಹ ಸಂಬಂಧವಾದರೂ ಏನು ಎಂಬುದು ಜೀ ಕನ್ನಡದಲ್ಲಿ ಅನಾವರಣಗೊಳ್ಳಲಿದೆ. ರಂಜಿತಾ ಭಾಗವಹಿಸಿದ ಬದುಕು ಜಟಕಾಬಂಡಿ ಸಂಚಿಕೆ ಜನವರಿ 17ರ ಸೋಮವಾರ ಮಧ್ಯಾಹ್ನ 2.30ಗಂಟೆಗೆ ಪ್ರಸಾರವಾಗಲಿದೆ. [ರಾಸಲೀಲೆ]


Click it and Unblock the Notifications











