Don't Miss!
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- News ಮತ ಹಾಕದಿದ್ದರೆ ನನ್ನ ಅಂತ್ಯಸಂಸ್ಕಾರಕ್ಕಾದರೂ ಬನ್ನಿ. ಮಲ್ಲಿಕಾರ್ಜುನ್ ಖರ್ಗೆ ಭಾವನಾತ್ಮಕ ಮಾತು
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೀ ಕನ್ನಡದಲ್ಲಿ ಸಲಿಂಗಿಗಳ ಮನದಾಳದ ಮಾತು
ಸೋನು ಎಂಬ ಕೇರಳದ ಚಲುವೆ ತಾನು ಸ್ವಾಭಾವಿಕವಾಗಿ ಹುಟ್ಟಿದ್ದು ಹೆಣ್ಣಾಗಿಯೇ ಆದರೆ ಆಕೆ ಮಾನಸಿಕವಾಗಿ ಓರ್ವ ಗಂಡಸಾಗಿ ಬೆಳೆದದ್ದು ಮಾತ್ರ ವಿಧಿಯ ವಿಪರ್ಯಾಸವೇ ಸರಿ. ಈ ಎಲ್ಲದರ ನಡುವೆ ತಾನು ಹೆಂಗಸಾಗಿ ಮನೆಯಲ್ಲಿ ಇರಲು ಹಾಗೂ ಯಾರೋ ಗಂಡನ್ನು ಮದುವೆಯಾಗಲು ಮಾನಸಿಕವಾಗಿ ದೈಹಿಕವಾಗಿ ಒಪ್ಪದ ಸೋನು , ತಾನು ತನ್ನ ಮನೆ ತೊರೆದು ಸೇರಿಕೊಂಡಿದ್ದು ಬೆಂಗಳೂರು.
ಇಲ್ಲಿಗೆ ಬಂದು ಸಂಗಮ ಎಂಬ ಸಮಾನ ಮನಸ್ಕರ ಸಂಘಟಯೊಂದಿಗೆ ಗುರುತಿಸಿಕೊಂಡಆಕೆ ಅಲ್ಪ ದುಡಿಮೆಯೊಂದಿಗೆ ತನ್ನ ಜೀವನ ಸಾಗಿಸುತ್ತಿರುತ್ತಾಳೆ. ಈ ನಡುವೆ ಇದೇ ಸಂಘಟನೆಯ ಮೂಲಕ ಪರಿಚಿತಳಾದ ಚಿತ್ರಾ ಎಂಬ ಅದ್ಭುತ ಗಾಯಕಿಯನ್ನು ಸೋನು ಮೋಹಿಸುತ್ತಾಳೆ ಈ ಅನುರಾಗಕ್ಕೆ ಚಿತ್ರಾಳ ಅನುಮತಿಯೂ ದೊರೆಯುತ್ತದೆ.
ಈ ಇಬ್ಬರು ಸಲಿಂಗಿಗಳ ನಡುವೆ ಪ್ರೇಮ ಪರಿಣಯವಾದುದ್ದಾದರೂ ಹೇಗೆ? ಈ ಇಬ್ಬರು ಸಲಿಂಗಳ ನಡುವೆ ಇದ್ದ ಆಕರ್ಷಣೆಯಾದರೂ ಎಂತದ್ದು? ಈ ಅಪರೂಪದ ಪ್ರೇಮಕ್ಕೆ ತಮ್ಮ ಕುಟುಂಬ ಹಾಗೂ ಸಮಾಜ ಪ್ರತಿಕ್ರಿಯೆ ಏನು? ಎಂಬ ಕುತೂಹಲಕಾರಿ ಅಂಶಗಳನ್ನು ಸೋನು ಹಾಗೂ ಚಿತ್ರ ಇಬ್ಬರೂ ಬದುಕು ಜಟಕಾ ಬಂಡಿ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
ಇಂತಹ ಪ್ರೇಮ ಪ್ರಕರಣಗಳಿಗೆ ಸಮಾಜ, ಧರ್ಮ ಹಾಗೂ ಕಾನೂನಿನಲ್ಲಿ ಎಂತಹ ಸ್ಥಾನಮಾನವಿದೆ? ಇಂತಹ ಸಂಬಂಧಗಳು ಸಮಾಜದಲ್ಲಿ ಹೀಗೆಯೇ ಮುಂದುವರೆಯಲು ಸಾಧ್ಯವೆ ಎಂಬಂಹ ವಿಚಾರಗಳನ್ನು ಸಹ ಇಲ್ಲಿ ಚರ್ಚಿಸಲಾಗಿದೆ. ಇದ್ದಕ್ಕಾಗಿಯೇ ಬದುಕು ಜಟಕಾ ಬಂಡಿ ತಂಡ ಕಾನೂನು ತಜ್ಞರು, ಧಾರ್ಮಿಕ ಮುಖಂಡರು ಹಾಗೂ ಸಮಾಜ ಸೇವಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಚರ್ಚಿಸಿದೆ.
ಒಟ್ಟಾರೆ ಸಲಿಂಗ ಮೋಹ ಇಂದಿನ ನಮ್ಮ ಸಮಾಜದಲ್ಲಿ ಎಂತಹ ಸ್ಥಾನದಲ್ಲಿದೆ ಎಂಬುದರ ಸಂಪೂರ್ಣ ಚಿತ್ರಣ ಈ ಕಾರ್ಯಕ್ರಮದಲ್ಲಿ ಚರ್ಚೆಗೊಳಗಾಗಿದ್ದು ಜೀಕನ್ನಡದಲ್ಲಿ ಈ ಕಾರ್ಯಕ್ರಮವನ್ನು ಮೇ 25ರ ಬುಧವಾರ ರಾತ್ರಿ 9 ಗಂಟೆಗೆ ವೀಕ್ಷಿಸಿಬಹುದಾಗಿದೆ. (ದಟ್ಸ್ಕನ್ನಡ ಸಿನಿವಾರ್ತೆ)