Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಅಗ್ನಿಸಾಕ್ಷಿ' ಸನ್ನಿಧಿ ಜೊತೆಗಿನ ಗಾಸಿಪ್ ಬಗ್ಗೆ ವಿಜಯ್ ಸೂರ್ಯ ಏನಂತಾರೆ.?
Recommended Video
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಸನ್ನಿಧಿ (ವೈಷ್ಣವಿ) ಹಾಗೂ ಸಿದ್ಧಾರ್ಥ್ (ವಿಜಯ್ ಸೂರ್ಯ) ಹೇಗಿದ್ದಾರೋ, ಹಾಗೆ ನಿಜ ಜೀವನದಲ್ಲೂ ವೈಷ್ಣವಿ ಹಾಗೂ ವಿಜಯ್ ಸೂರ್ಯ ಪ್ರಣಯ ಪಕ್ಷಿಗಳು. ಇಬ್ಬರೂ ಲವ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಮದುವೆ ಆಗ್ತಾರೆ ಎಂಬ ಗುಸು ಗುಸು ಆಗಾಗ ಕೇಳಿಬಂದಿತ್ತು.
''ನಾವಿಬ್ಬರು ಜಸ್ಟ್ ಫ್ರೆಂಡ್ಸ್, ನಮ್ಮಿಬ್ಬರ ನಡುವೆ ಗೆಳೆತನ ಬಿಟ್ಟು ಬೇರೆ ಏನೂ ಇಲ್ಲ'' ಅಂತ ವೈಷ್ಣವಿ ಸ್ಪಷ್ಟನೆ ಕೊಟ್ಟಿದ್ದರು. ಈಗ ನಟ ವಿಜಯ್ ಸೂರ್ಯ ಕೂಡ ಅದನ್ನೇ ಹೇಳಿದ್ದಾರೆ.
''ವೈಷ್ಣವಿ ಹಾಗೂ ನನ್ನ ನಡುವೆ ಏನಿಲ್ಲ. ನಾನಿನ್ನೂ ಸಿಂಗಲ್. ಗಾಸಿಪ್ ಕೇಳಿ ಕೇಳಿ ಅಭ್ಯಾಸ ಆಗ್ಬಿಟ್ಟಿದೆ'' ಅಂತ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ವಿಜಯ್ ಸೂರ್ಯ ಹೇಳಿದ್ದಾರೆ.
''ಸನ್ನಿಧಿ ಜೊತೆ ಎಲ್ಲ ತರಹ ಗಾಸಿಪ್ ಬಂದುಬಿಟ್ಟಿದೆ. ನಾವು ಮದುವೆ ಆಗಿದ್ದೇವೆ, ನಮಗೆ ಮಕ್ಕಳು ಇದ್ದಾರೆ ಅಂತ ಮಾತನಾಡಿಕೊಳ್ತಾರೆ. ಗಾಸಿಪ್ ಕೇಳಿ ಕೇಳಿ ಅಭ್ಯಾಸ ಆಗ್ಬಿಟ್ಟಿದೆ. ನನ್ನನ್ನ ಮದುವೆ ಆಗುವವಳು ಇದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು'' ಎಂದಿದ್ದಾರೆ ವಿಜಯ್ ಸೂರ್ಯ.