Don't Miss!
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಿಗ್ ಬಾಸ್ ಫೈನಲ್ ತಲುಪೋ ನಂಬಿಕೆ ಇಲ್ಲದವರಿಗೆ 20 ಲಕ್ಷ
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಶೋ'ನ ರೋಚಕ ಘಟ್ಟ ಕೊನೆಯ ಹಂತಕ್ಕೆ ತಲುಪಿದೆ. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಬರೀ ಐದು ಜನ ಸ್ಪರ್ಧಿಗಳು ಫೈನಲ್ ಹಂತಕ್ಕೆ ತಲುಪಿದ್ದಾರೆ. ಆ ಐದು ಜನರಲ್ಲಿ ಯಾರು ಗೆಲುವಿನ ಪಟ್ಟ ಹೊತ್ತುಕೊಳ್ಳುತ್ತಾರೆ ಎಂಬುದು ನಾಳೆ (ಜನವರಿ 31) ರಾತ್ರಿ ಜಗಜ್ಜಾಹೀರಾಗಲಿದೆ.
ಇದೀಗ ಬಿಗ್ ಬಾಸ್ ಮನೆಯಲ್ಲಿರುವ ಐವರಿಗೂ ದೊಡ್ಡಣ್ಣ ಒಂದು ಬಂಪರ್ ಆಫರ್ ನೀಡಿದ್ದಾರೆ. ಅದೇನಪ್ಪಾ ಅಂದ್ರೆ ಫೈನಲ್ ಗೆ ಹೋಗಲು ಇಷ್ಟಪಡದ ಸ್ಪರ್ಧಿಯೊಬ್ಬರು 20 ಲಕ್ಷ ರೂಪಾಯಿ ತೆಗೆದುಕೊಂಡು ಹೋಗಬಹುದು.[ಕನ್ನಡ 'ಬಿಗ್ ಬಾಸ್' ಸೀಸನ್ 3 ಗೆಲುವಿನ ಪಟ್ಟ ಯಾರಿಗೆ?]
ನಿನ್ನೆಯ ಬಿಗ್ ಬಾಸ್ ಎಪಿಸೋಡ್ ನಲ್ಲಿ ಬಿಗ್ ಮನೆಗೆ 20 ಲಕ್ಷ ತುಂಬಿರೋ ಬ್ರಿಫ್ಕೇಸ್ ಒಂದು ಬಂದಿದ್ದು, ಫೈನಲ್ ಗೆ ಹೋಗಲು ಇಷ್ಟ ಇಲ್ಲದ ಒಬ್ಬ ಸ್ಪರ್ಧಿ ಆ ಬ್ರಿಫ್ ಕೇಸ್ ಅನ್ನ ತೆಗೆದುಕೊಂಡು ಮನೆಯಿಂದ ಹೊರ ಹೋಗಬಹುದಾಗಿದೆ.
ಆದ್ರೆ ಒಂದು ಕಂಡೀಷನ್ ಏನಪ್ಪಾ ಅಂದ್ರೆ, ಫೈನಲ್ ನ ಮೊತ್ತ 50 ಲಕ್ಷದಿಂದ ಈ 20 ಲಕ್ಷ ರೂಪಾಯಿ ಕಡಿತಗೊಳ್ಳುತ್ತದೆ. ಕೊನೆಗೆ ಫೈನಲ್ ನಲ್ಲಿ ಗೆದ್ದ ಸ್ಪರ್ಧಿಗೆ ಸಿಗುವ ಮೊತ್ತ ಕೇವಲ 30 ಲಕ್ಷ ಅಷ್ಟೆ.
ಅಂದಹಾಗೆ ಈ ಸ್ಪರ್ಧೆಯಲ್ಲಿ ಗೆಲ್ಲೋದು ಮಾತ್ರ ಜನರಿಂದ ಅತೀ ಹೆಚ್ಚು ಓಟ್ ಗಳಿಸಿದವರು. ಆದ್ದರಿಂದ ಯಾರಾದರೂ ಸ್ಪರ್ಧಿಗೆ ತಾನು ಫೈನಲ್ ವರೆಗೆ ಹೋಗಲ್ಲ ಅನ್ನೋ ಭಾವನೆ ಇದ್ರೆ, 20 ಲಕ್ಷ ಇರೋ ಬ್ರಿಫ್ ಕೇಸ್ ಎತ್ಕೊಂಡು ಮನೆಯಿಂದ ಹೊರ ನಡೆಯಬಹುದು.
ಸದ್ಯಕ್ಕೆ ಆ ಬ್ರಿಫ್ ಕೇಸ್ ಅನ್ನು ಯಾರೂ ಕೂಡ ಟಚ್ ಮಾಡಿಲ್ಲ. ಇನ್ನು ಇವತ್ತು ಕೂಡ ಕೊನೆಯ ಅವಕಾಶ ಇದ್ದು, ಯಾರು ತೆಗೆದುಕೊಂಡು ಹೊರ ಹೋಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.