Don't Miss!
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- News ಸಿಯಾಚಿನ್ ಬಳಿ ಚೀನಾ ಆಕ್ರಮಿತ ಕಾಶ್ಮೀರದಲ್ಲಿ ಹೊಸ ರಸ್ತೆ ನಿರ್ಮಾಣ; ಖಚಿತಪಡಿಸಿದ ಉಪಗ್ರಹ ಚಿತ್ರಗಳು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್-3' - ಈ ನಾಲ್ವರ ಭವಿಷ್ಯ ನಿಮ್ಮ ಕೈಯಲ್ಲಿದೆ.!
'ಬಿಗ್ ಬಾಸ್-3' ಗ್ರ್ಯಾಂಡ್ ಫಿನಾಲೆ ವಾರಕ್ಕೆ ದಿನಗಣನೆ ಶುರುವಾಗಿದೆ. ನೋಡ ನೋಡುತ್ತಲೇ ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್-3' 85 ದಿನಗಳನ್ನ ಪೂರೈಸಿದೆ.
85 ದಿನಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿದ್ದು ನಿಮ್ಮನ್ನೆಲ್ಲಾ ರಂಜಿಸಿರುವ ನಟಿ ಶ್ರುತಿ, ನಟ ಚಂದನ್, ಕ್ರಿಕೆಟರ್ ಅಯ್ಯಪ್ಪ ಮತ್ತು ಆಂಕರ್ ರೆಹಮಾನ್ ಈ ವಾರ ಡೇಂಜರ್ ಝೋನ್ ನಲ್ಲಿದ್ದಾರೆ. ['ಬಿಗ್ ಬಾಸ್-3' ಫೈನಲ್ ಗೆ ಎಂಟ್ರಿ ಪಡೆದ ಪೂಜಾ ಗಾಂಧಿ, ಆನಂದ್!]
ಇವರಲ್ಲಿ ನೀವು ಬಚಾವ್ ಮಾಡುವ 'ಬಿಗ್ ಬಾಸ್' ಮನೆ ಸದಸ್ಯರು ಸೀದಾ ಫೈನಲ್ ತಲುಪುತ್ತಾರೆ. ಈಗಾಗಲೇ ನಟಿ ಪೂಜಾ ಗಾಂಧಿ ಮತ್ತು ಮಾಸ್ಟರ್ ಆನಂದ್ ಫಿನಾಲೆ ವಾರಕ್ಕೆ ಎಂಟ್ರಿ ಪಡೆದಾಗಿದೆ. ಮುಂದೆ ಓದಿ.....
ಕ್ಯಾಪ್ಟನ್ ಆಗಿ ಮೊದಲ ಫೈನಲಿಸ್ಟ್ ಆದ ಪೂಜಾ ಗಾಂಧಿ
ಈ ವಾರ ಕ್ಯಾಪ್ಟನ್ ಆಗಿರುವ ನಟಿ ಪೂಜಾ ಗಾಂಧಿ 'ಬಿಗ್ ಬಾಸ್-3' ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ವಾರದ ಮೊದಲ ಸ್ಪರ್ಧಿ. ['ಜೋಡಿ ನಂ.1' ಆದ ಅಯ್ಯಪ್ಪ-ಪೂಜಾ; ಕಿಟ್ಟಿಗೆ ಕಿರಿಕಿರಿ, ಗೌತಮಿಗೆ ಪಿರಿಪಿರಿ!]
ಮಾಸ್ಟರ್ ಆನಂದ್ ಎರಡನೇ ಫೈನಲಿಸ್ಟ್!
ನಾಮಿನೇಷನ್ ಪ್ರಕ್ರಿಯೆಯಿಂದ ಸೇಫ್ ಆದ ಮಾಸ್ಟರ್ ಆನಂದ್ ಕೂಡ ಗ್ರ್ಯಾಂಡ್ ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. [ಅಯ್ಯಪ್ಪಗೆ ಕಪಾಳ ಮೋಕ್ಷ ಮಾಡಬೇಕಂತೆ ಪೂಜಾ ಗಾಂಧಿ!]
ಶ್ರುತಿಗೆ ಅಡ್ಡಗಾಲು ಹಾಕಿದ ಪೂಜಾ ಗಾಂಧಿ
ಕ್ಯಾಪ್ಟನ್ ಆದ ನಟಿ ಪೂಜಾ ಗಾಂಧಿ ನೇರವಾಗಿ ನಟಿ ಶ್ರುತಿ ರವರನ್ನ ನಾಮಿನೇಟ್ ಮಾಡಿದರು.
ರೆಹಮಾನ್ ಅಯ್ಕೆ?
ನಟ ಚಂದನ್ ಮತ್ತು ಅಯ್ಯಪ್ಪ ರನ್ನ ರೆಹಮಾನ್ ನಾಮಿನೇಟ್ ಮಾಡಿದರು.
ಚಂದನ್ ನಾಮಿನೇಷನ್
ರೆಹಮಾನ್ ಮತ್ತು ಅಯ್ಯಪ್ಪ ರನ್ನ ಚಂದನ್ ನಾಮಿನೇಟ್ ಮಾಡಿದರು.
ಸ್ಮಾರ್ಟ್ ಆನಂದ್!
ಎಲ್ಲರಂತೆ ಚಂದನ್ ಮತ್ತು ಅಯ್ಯಪ್ಪ ಹೆಸರನ್ನ ಆನಂದ್ ಆಯ್ಕೆ ಮಾಡಿದರು.
ಅಯ್ಯಪ್ಪ ಚಾಯ್ಸ್?
ಚಂದನ್ ಮತ್ತು ರೆಹಮಾನ್ ರನ್ನ ಅಯ್ಯಪ್ಪ ನಾಮಿನೇಟ್ ಮಾಡಿದರು.
ಹಳೇ ಕಾರಣ ಕೊಟ್ಟ ಶ್ರುತಿ!
ಟಾಸ್ಕ್ ವಿಚಾರವಾಗಿ ಅದೇ ಹಳೇ ಕಾರಣ ಕೊಡುತ್ತಾ ನಟಿ ಶ್ರುತಿ ಅಯ್ಯಪ್ಪ ಮತ್ತು ರೆಹಮಾನ್ ರನ್ನ ನಾಮಿನೇಟ್ ಮಾಡಿದರು.
ನಾಲ್ವರು ನಾಮಿನೇಟ್
ಅತಿ ಹೆಚ್ಚು ವೋಟ್ ಪಡೆದ ಅಯ್ಯಪ್ಪ, ಚಂದನ್, ರೆಹಮಾನ್ ಮತ್ತು ನಟಿ ಶ್ರುತಿ ಈ ವಾರ ನಿಮ್ಮ ಎಸ್.ಎಂ.ಎಸ್ ನಿರೀಕ್ಷೆಯಲ್ಲಿದ್ದಾರೆ. ಈ ನಾಲ್ವರ ಪೈಕಿ ನೀವು ಯಾರ ಪರ ಎಸ್.ಎಂ.ಎಸ್ ಹಾಕ್ತೀರೋ, ಅವರು ಸೇಫ್ ಆಗಿ ಫೈನಲ್ ತಲುಪುತ್ತಾರೆ. ನಾಲ್ವರ ಭವಿಷ್ಯ ನಿಮ್ಮ ಕೈಯಲ್ಲಿದೆ. ಯೋಚನೆ ಮಾಡಿ...ವೋಟ್ ಮಾಡಿ....
ನಿಮ್ಮ ಆಯ್ಕೆ ನಮಗೆ ತಿಳಿಸಿ...
ಅಯ್ಯಪ್ಪ, ಚಂದನ್, ರೆಹಮಾನ್ ಮತ್ತು ನಟಿ ಶ್ರುತಿ ಪೈಕಿ ನೀವು ಯಾರನ್ನ ಸೇಫ್ ಮಾಡುತ್ತೀರಾ ಅಂತ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ....