Just In
Don't Miss!
- Lifestyle
ಮಂಗಳವಾರದ ರಾಶಿಫಲ: ಈ ದಿನ ನಿಮ್ಮ ರಾಶಿಯ ಭವಿಷ್ಯ ಹೇಗಿದೆ ನೋಡಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- News
Republic Day 2021 Live Updates : ರಾಜಪಥದಲ್ಲಿ 72ನೇ ಗಣತಂತ್ರದಿನ ಸಂಭ್ರಮ
- Automobiles
ಗಣರಾಜ್ಯೋತ್ಸವದ ಸಂಭ್ರಮಕ್ಕಾಗಿ ಮ್ಯಾಗ್ನೈಟ್ ಕಾರಿನೊಂದಿಗೆ ನಿಸ್ಸಾನ್ ಹೊಸ ಅಭಿಯಾನ ಘೋಷಣೆ
- Sports
ಐಎಸ್ಎಲ್: ಬಾಗನ್ ಸೋಲಿಸುವ ಆತ್ಮವಿಶ್ವಾಸದಲ್ಲಿ ನಾರ್ಥ್ ಈಸ್ಟ್
- Finance
ಎಲ್&ಟಿ ತ್ರೈಮಾಸಿಕ ಆದಾಯ 5% ಏರಿಕೆ: ದಾಖಲೆಯ 2,467 ಕೋಟಿ ರೂಪಾಯಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗಣರಾಜ್ಯ ಅಂದ್ರೇನು, 'ಬಾಹುಬಲಿ' ಅಂದ್ರೆ ಯಾರು ಅನ್ನೋದೇ ಆಶಿತಾಗೆ ಗೊತ್ತಿಲ್ಲ.!

'ಜೊತೆ ಜೊತೆಯಲಿ' ಹಾಗೂ 'ನೀಲಿ' ಸೀರಿಯಲ್ ಗಳಲ್ಲಿ ಅಭಿನಯಿಸಿದ ನಟಿ ಆಶಿತಾ ಚಂದ್ರಪ್ಪಗೆ 'ಗಣರಾಜ್ಯ' ಅಂದ್ರೇನು ಎಂಬುದೇ ಗೊತ್ತಿಲ್ಲ.! ಹಾಗೇ, 'ಬಾಹುಬಲಿ' ಅಂದ್ರೆ ಗೊಮ್ಮಟೇಶ್ವರನ ಇನ್ನೊಂದು ಹೆಸರೂ ಅನ್ನೋದೂ ಕೂಡ ಆಕೆಗೆ ತಿಳಿದಿಲ್ಲ.!
ಹೌದು, 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಆರನೇ ವಾರದ ಕ್ಯಾಪ್ಟನ್ ಟಾಸ್ಕ್ ಅನುಸಾರವಾಗಿ ಸ್ಪರ್ಧಿಗಳ ಸಾಮಾನ್ಯ ಜ್ಞಾನವನ್ನ 'ಬಿಗ್ ಬಾಸ್' ಪರೀಕ್ಷಿಸಿದರು.
ಅನುಪಮಾ ಮಾಜಿ ಪ್ರಿಯಕರನ ಕೆನ್ನೆಗೆ ಆಶಿತಾ ಸಿಹಿ ಮುತ್ತು: ಜಗನ್ ಕೆನ್ನೆ ಕೆಂಪು.!
ಇದರಂತೆ, ನಟಿ ಆಶಿತಾಗೆ ''ಭಾರತ ಗಣರಾಜ್ಯಗೊಂಡಿದ್ದು ಯಾವಾಗ.?'' ಎಂದು 'ಬಿಗ್ ಬಾಸ್' ಪ್ರಶ್ನಿಸಿದರು. ಆಗ, ''ವಾಟ್ ಈಸ್ ಗಣರಾಜ್ಯ.?'' ಎಂದು ಕೇಳಿಬಿಟ್ಟರು ಆಶಿತಾ.
'ಬೇಬಿ ಡಾಲ್' ನಿವೇದಿತಾ ಗೌಡ ಕನ್ನಿಂಗ್ (ಕುತಂತ್ರಿ) ಅಂತೆ.!
'ಗಣರಾಜ್ಯ' ಅಂದರೆ 'ರಿಪಬ್ಲಿಕ್' ಅಂತ ಸಮೀರಾಚಾರ್ಯ ಹೇಳಿದ್ದಕ್ಕೆ '1960' ಅಂತ ತಪ್ಪು ಉತ್ತರ ಕೊಟ್ಟರು ಆಶಿತಾ.
ಬಳಿಕ, ''ಬಾಹುಬಲಿ ಪ್ರತಿಮೆ ಇರುವ ಜಾಗ ಯಾವುದು.?'' ಎಂದು 'ಬಿಗ್ ಬಾಸ್' ಪ್ರಶ್ನಿಸಿದ್ದಕ್ಕೆ, ''ಸಿನಿಮಾನಾ.? ಹೈದರಾಬಾದ್.!'' ಎಂದು ಆಶಿತಾ ಉತ್ತರಿಸಿದಾಗ ಎಲ್ಲರೂ ನಕ್ಕರು.
ಜಗನ್, ಆಶಿತಾ ಕಂಡ್ರೆ ಉರಿದು ಬೀಳ್ತಿದ್ದಾರೆ 'ಬಿಗ್ ಬಾಸ್' ವೀಕ್ಷಕರು.!
''ಸರಿಯಾದ ಉತ್ತರ ಶ್ರವಣಬೆಳಗೊಳ'' ಎಂದು 'ಬಿಗ್ ಬಾಸ್' ಹೇಳಿದಾಗ ''ಓ... ದೇವರದ್ದಾ.? ನನಗೇನು ಗೊತ್ತು.?'' ಎಂದರು ಆಶಿತಾ. ''ಗೊಮ್ಮಟೇಶ್ವರನ ಹೆಸರು ಬಾಹುಬಲಿ'' ಎಂದು ಸಿಹಿ ಕಹಿ ಚಂದ್ರು ಹೇಳಿದಕ್ಕೆ ''ನನಗೆ ನಿಜವಾಗ್ಲೂ ಗೊತ್ತಿರಲಿಲ್ಲ'' ಎಂದರು ಆಶಿತಾ.
ಎರಡೂ ತಪ್ಪು ಉತ್ತರಗಳನ್ನು ನೀಡಿದ ಆಶಿತಾ, ಕ್ಯಾಪ್ಟನ್ ರೇಸ್ ನಿಂದ ಹೊರಬಿದ್ದರು.