Just In
Don't Miss!
- News
ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ: 62ನೇ ವರ್ಷಕ್ಕೆ ಬಿಎ ಪರೀಕ್ಷೆ ಬರೆದ ಶಾಸಕ
- Lifestyle
ದಿನ ಭವಿಷ್ಯ: ಗುರುವಾರದ ರಾಶಿಫಲ ಹೇಗಿದೆ ನೋಡಿ
- Education
Vijayapura District Court Recruitment 2021: ವಿಜಯಪುರ ಜಿಲ್ಲಾ ನ್ಯಾಯಾಲಯದಲ್ಲಿ 2 ಬೆರಳಚ್ಚು-ನಕಲುಗಾರ ಹುದ್ದೆಗಳ ನೇಮಕಾತಿ
- Automobiles
31 ಟನ್ ಸರಕು ಸಾಗಾಣಿಕೆ ಸಾಮರ್ಥ್ಯದ ಟಾಟಾ ಹೊಸ ಸಿಗ್ನಾ 3118.ಟಿ ಟ್ರಕ್ ಬಿಡುಗಡೆ
- Finance
ಚಿನ್ನದ ಬೆಲೆ ಕೊಂಚ ಇಳಿಕೆ: ಮಾರ್ಚ್ 03ರ ಬೆಲೆ ಎಷ್ಟಿದೆ?
- Sports
'ಭಾರತ-ಇಂಗ್ಲೆಂಡ್ 4ನೇ ಟೆಸ್ಟ್ನಲ್ಲಿ ನಾನು ಇಂಗ್ಲೆಂಡ್ಗೆ ಚಿಯರ್ ಮಾಡ್ತೇನೆ'
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶ್ರುತಿ ಪ್ರಕಾಶ್ ಗೆ ಕ್ಷಮೆ ಕೇಳಿ ಭಾವುಕರಾದ ಚಂದನ್ ಶೆಟ್ಟಿ
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಸಮಾಪ್ತಿ ಆಗಲು ಕ್ಷಣಗಣನೆ ಶುರು ಆಗಿರುವುದರಿಂದ ಚಂದನ್ ಶೆಟ್ಟಿ ಕೊಂಚ ಭಾವುಕರಾಗಿದ್ದಾರೆ. 'ಬಿಗ್ ಬಾಸ್' ಮನೆಯಲ್ಲಿ ತಮ್ಮ 105 ದಿನಗಳ ಜರ್ನಿಯನ್ನ ಮೆಲುಕು ಹಾಕುತ್ತಿರುವ ಚಂದನ್ ಶೆಟ್ಟಿ, ಗಾಯಕಿ ಹಾಗೂ ನಟಿ ಶ್ರುತಿ ಪ್ರಕಾಶ್ ಗೆ ಕ್ಷಮೆ ಕೇಳಿದ್ದಾರೆ.
'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ಮೇಲೆ ತಮಗೆ ಶ್ರುತಿ ಪ್ರಕಾಶ್ ಮೇಲೆ ಕ್ರಷ್ ಆಗಿದೆ ಎಂದು ಚಂದನ್ ಶೆಟ್ಟಿ ಹೇಳಿದ್ದರು. ಆದ್ರೆ, ಶ್ರುತಿ ಪ್ರಕಾಶ್ ಹೆಚ್ಚು ಆತ್ಮೀಯರಾಗಿದ್ದು ಜಯರಾಂ ಕಾರ್ತಿಕ್ ಜೊತೆಗೆ. ಹೀಗಾಗಿ, ಈ ಬಾರಿಯ 'ಬಿಗ್ ಬಾಸ್' ಒಂಥರಾ ಲವ್ ಟ್ರೈಯಾಂಗಲ್ ಗೆ ಸಾಕ್ಷಿ ಆಗಿತ್ತು.
ಇದೇ ಗ್ಯಾಪ್ ನಲ್ಲಿ ಶ್ರುತಿ ಪ್ರಕಾಶ್ ಅವರನ್ನ ಚಂದನ್ ಶೆಟ್ಟಿ ನಾಮಿನೇಟ್ ಮಾಡಿದ್ದರು. ಸಾಲದಕ್ಕೆ, ಶ್ರುತಿ ಪ್ರಕಾಶ್ ಜೊತೆ ಮಾಡ್ತಿರೋದೆಲ್ಲ ಬರೀ ಡವ್ ಅಂತೆಲ್ಲ ಹೇಳಿಕೆ ನೀಡಿದ್ದರು. ಇದರಿಂದ ಶ್ರುತಿಗೆ ಸ್ವಲ್ಪ ಬೇಸರ ಕೂಡ ಆಗಿತ್ತು.
ಇದೀಗ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದ್ಮೇಲೆ ಶ್ರುತಿಗೆ ಚಂದನ್ ಕ್ಷಮೆ ಕೇಳಿದ್ದಾರೆ. ತಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ಶ್ರುತಿ ಪ್ರಕಾಶ್ ಬಳಿ ಚಂದನ್ ಶೆಟ್ಟಿ ಕಣ್ಣೀರಿಟ್ಟಿದ್ದಾರೆ. ಇತ್ತ ದೊಡ್ಡ ಮನಸ್ಸಿನ ಶ್ರುತಿ ಕೂಡ ಚಂದನ್ ರನ್ನ ಕ್ಷಮಿಸಿದ್ದಾರೆ.
'ಬಿಗ್ ಬಾಸ್' ಗೆಲ್ಲುವ ನೆಚ್ಚಿನ ಸ್ಪರ್ಧಿ ಚಂದನ್ ಶೆಟ್ಟಿ: ಇವರ ಮೇಲೆ ಏಕೆ ಇಷ್ಟೊಂದು ಪ್ರೀತಿ.?
ಗ್ರ್ಯಾಂಡ್ ಫಿನಾಲೆ ವರೆಗೂ ಬಂದ ಶ್ರುತಿ ಪ್ರಕಾಶ್ ಸದ್ಯ 'ಬಿಗ್ ಬಾಸ್' ಮನೆಯಿಂದ ಹೊರಬಿದ್ದಿದ್ದಾರೆ. ನಿವೇದಿತಾ ಕೂಡ ಔಟ್ ಆಗಿದ್ದಾರೆ.
ಚಂದನ್ ಶೆಟ್ಟಿ, ದಿವಾಕರ್ ಹಾಗೂ ಜಯರಾಂ ಕಾರ್ತಿಕ್ ಟಾಪ್ 3 ಹಂತಕ್ಕೆ ಎಂಟ್ರಿಕೊಟ್ಟಿದ್ದಾರೆ. ಈ ಮೂವರ ಪೈಕಿ ಯಾರಿಗೆ 'ಬಿಗ್ ಬಾಸ್' ಟ್ರೋಫಿ ಸಿಗುತ್ತೋ ನೋಡ್ಬೇಕು.