Just In
Don't Miss!
- News
ಖಾತೆ ಹಂಚಿಕೆ ಅಸಮಾಧಾನ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಮಹತ್ವದ ಹೇಳಿಕೆ!
- Sports
ಅಜಿಂಕ್ಯ ರಹಾನೆ ಬಳಗಕ್ಕೆ ಕ್ವಾರಂಟೈನ್ ವಿನಾಯಿತಿ ನೀಡಿದ ಮಹಾರಾಷ್ಟ್ರ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಮೀರಾಚಾರ್ಯಗೆ ಸೀರಿಯಸ್ನೆಸ್ ಇಲ್ಲ ಎಂದ 'ಗಾಂಧಾರಿ' ಜಗನ್.!

'ದೊಡ್ಮನೆ'ಯೊಳಗೆ ತಮ್ಮ ಆಚಾರ-ವಿಚಾರಗಳ ಜೊತೆಗೆ 'ಬಿಗ್ ಬಾಸ್' ನೀಡುತ್ತಿರುವ ಟಾಸ್ಕ್ ಗಳನ್ನ ತಮ್ಮ ಕೈಲಾದಷ್ಟು ಮಾಡುತ್ತಿರುವ ಸಮೀರಾಚಾರ್ಯ ರವರಿಗೆ ಸೀರಿಯಸ್ನೆಸ್ ಇಲ್ಲವಂತೆ.!
ಹಾಗಂತ ಹೇಳಿದವರು 'ಗಾಂಧಾರಿ' ಧಾರಾವಾಹಿ ಖ್ಯಾತಿಯ ಜಗನ್ನಾಥ್.!
ಯಾರು ಏನೇ ಹೇಳಿದರೂ, ಜನರ ಬೆಂಬಲ ಮಾತ್ರ ಜನಸಾಮಾನ್ಯರಿಗೆ.!
'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದಲ್ಲಿ ಎರಡನೇ ವಾರ 'ಮೊಟ್ಟೆ'ಯನ್ನು ಕಾಪಾಡಿಕೊಳ್ಳುವ ಟಾಸ್ಕ್ ನೀಡಲಾಗಿದೆ. ಇದೇ ಟಾಸ್ಕ್ ವಿಚಾರವಾಗಿ ಮನೆಯೊಳಗೆ ಗದ್ದಲ-ಗಲಾಟೆ ಕೂಡ ನಡೆದಿದೆ.
ಈ ಎಲ್ಲದರ ನಡುವೆ ಟಾಸ್ಕ್ ನಲ್ಲಿ ಸಮೀರಾಚಾರ್ಯ ರವರಿಗೆ ಸೀರಿಯಸ್ನೆಸ್ ಇಲ್ಲ ಅಂತ ಜಗನ್ನಾಥ್ ಹೇಳಿದ್ದಾರೆ. ಸಮೀರಾಚಾರ್ಯ ಜೊತೆಗೆ ಮಾತನಾಡುತ್ತಿರುವಾಗಲೇ, ''ಟಾಸ್ಕ್ ನ ಎಲ್ಲರೂ ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ನಿಮಗೆ ಸೀರಿಯಸ್ ನೆಸ್ ಇಲ್ಲ. ಟಾಸ್ಕ್ ನಡೆಯುವಾಗ ನಮಗೂ ಹೊಟ್ಟೆ ಹಸಿವು ಇತ್ತು. ಆದ್ರೂ, ನಾವು ಹೋಗಿ ಊಟ ಮಾಡಿಲ್ಲ'' ಎಂದು ಜಗನ್ನಾಥ್ ಹೇಳಿದರು.
'ಬಿಗ್ ಬಾಸ್' ಸ್ಪರ್ಧಿ ಸಮೀರಾಚಾರ್ಯ ಅವರ ಬಗ್ಗೆ ನಿಮಗೆಷ್ಟು ತಿಳಿದಿದೆ?
''ಇಡೀ 'ಬಿಗ್ ಬಾಸ್' ಗೇಮ್ ನ ನೀವು ಸೀರಿಯಸ್ ಆಗಿ ತೆಗೆದುಕೊಳ್ಳಬೇಕು. ನನಗೂ ನನ್ನ ಆಚಾರ ಇದೆ. ಸ್ನಾನ ಮಾಡುವವರೆಗೂ ನಾನು ತಿಂಡಿ ತಿನ್ನಲ್ಲ. ಆದ್ರೆ, ಇಲ್ಲಿ ಅದೆಲ್ಲ ಮಾಡಲು ಆಗಲ್ಲ, ಬಿಡಲೇಬೇಕು. ಹಾಗಂತ ದೇವರು ನಮ್ಮ ಮೇಲೆ ಮುನಿಸಿಕೊಳ್ಳುವುದಿಲ್ಲ'' ಎಂದು ಸಮೀರಾಚಾರ್ಯ ರವರಿಗೆ ಜಗನ್ನಾಥ್ ಕಿವಿಮಾತು ಹೇಳಿದ್ದಾರೆ.