Don't Miss!
- News Gold Price: ಚಿನ್ನ ಮತ್ತು ಬೆಳ್ಳಿ ದರದಲ್ಲಿ ಭಾರೀ ಇಳಿಕೆ, ಇಂದಿನ ಬೆಲೆ ವಿವರ
- Lifestyle ಬಾಯಿ ಚಪ್ಪರಿಸಿ ಸವಿಯುವ ನೆಲ್ಲಿಕಾಯಿ ಉಪ್ಪಿನಕಾಯಿ..!
- Finance BMRCL: ಇಂದು ನಮ್ಮ ಮೆಟ್ರೋ ಕಾರ್ಯಾಚರಣೆ ಅವಧಿ ವಿಸ್ತರಣೆ, ಸಮಯ ವಿವರ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಂಬರ್ ಗೇಮ್: ಇದು ಮನುಷ್ಯನಿಗೆ ಕೊಡುವ ಮರ್ಯಾದೆನಾ.?
ಮತ್ತೆತ್ತಿದ್ರೆ ನಂಬರ್ ಬಗ್ಗೆ ಮಾತನಾಡುವ ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಗೆ ಸಂಖ್ಯೆಗಳೇ ಪ್ರಪಂಚ. ಏನೇ ಆದರೂ, ಹೋದರೂ ಅದಕ್ಕೆ ನಂಬರ್ ತಳುಕು ಹಾಕುವ ಜಯಶ್ರೀನಿವಾಸನ್ ಕಂಡ್ರೆ ಚಂದನ್ ಶೆಟ್ಟಿ ಕೆಲ ದಿನಗಳಿಂದ ಉರಿದು ಬೀಳ್ತಿದ್ದಾರೆ.
ಹೀಗಾಗಿ ಈ ವಾರ ನಾಮಿನೇಟ್ ಆಗಿದ್ದ ಜಯಶ್ರೀನಿವಾಸನ್, 'ಬಿಗ್ ಬಾಸ್' ಮನೆಯಿಂದ ಔಟ್ ಆಗಬೇಕು ಎಂಬುದು ಚಂದನ್ ಶೆಟ್ಟಿ ಬಯಕೆ. ಇದನ್ನೇ, ತಮ್ಮ ಆತ್ಮೀಯ ದಿವಾಕರ್ ಬಳಿ ಹೇಳಿಕೊಂಡಿದ್ದಾರೆ ಚಂದನ್ ಶೆಟ್ಟಿ.
'ಬಿಗ್ ಬಾಸ್' ಮನೆಯೊಳಗೆ ಜಯಶ್ರೀನಿವಾಸನ್ ಗೆ ಜ್ಞಾನೋದಯ ಆಗಿದೆ.!
''ಜಯಶ್ರೀನಿವಾಸನ್ ಹೊರಗೆ ಹೋಗಬೇಕು. ಅವರು ಇರಬಾರದು. ನನಗೆ ಅವರ ಮೇಲೆ ಸಖತ್ ಬೇಜಾರಾಗಿದೆ. ಒಂದನೇ ನಂಬರ್, ಆರನೇ ನಂಬರ್ ಪಕ್ಕ ಕುಳಿತುಕೊಳ್ಳಬೇಕು ಅಂತಾರೆ. ನಾವೇನು ಹೊಲಸಾ.? ಅವೆಲ್ಲ ನಡೆಯಲ್ಲ ಇಲ್ಲಿ...'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಚಂದನ್ ಶೆಟ್ಟಿ.
ಜಯಶ್ರೀನಿವಾಸನ್ ಅಂದುಕೊಂಡಂತೆ ಆಯ್ತು: ಹೊಸ ಸ್ಪರ್ಧಿ ಬಂದ್ರು.!
ಜೊತೆಗೆ, ''ಏನದು.. ಲೆಕ್ಕಾಚಾರನಾ... ಮನುಷ್ಯನಿಗೆ ಕೊಡುವ ಮರ್ಯಾದೆನಾ.? ನನ್ನ ಪಕ್ಕ ಅವರು ಕೂರಬಾರದಂತೆ... ಇದು ಮನುಷ್ಯನಿಗೆ ಕೊಡುವ ಗೌರವನಾ.? ನೀನು ಎಂಟನೇ ನಂಬರ್, ಲೋ ಶನಿಮಹಾತ್ಮ ನಿನ್ನ ಪಕ್ಕ ಕೂರಲ್ಲ ಅಂತಾರೆ'' ಎಂದು ಜಯಶ್ರೀನಿವಾಸನ್ ಹೇಳಿದ್ದನ್ನ, ದಿವಾಕರ್ ಬಳಿ ನೆನಪಿಸಿಕೊಳ್ಳುತ್ತಾ ಚಂದನ್ ಶೆಟ್ಟಿ ತಮ್ಮ ಅಸಮಾಧಾನವನ್ನ ಹೊರಹಾಕಿದರು.