Just In
- 35 min ago
ಪ್ರಶಾಂತ್ ನೀಲ್ 'ಸಲಾರ್' ಸಿನಿಮಾಗೆ ನಾಯಕಿ ಫಿಕ್ಸ್; ಪ್ರಭಾಸ್ ಜೊತೆ ಶ್ರುತಿ ಹಾಸನ್ ರೊಮ್ಯಾನ್ಸ್
- 36 min ago
ಆರ್ಆರ್ಆರ್, ಅಣ್ಣಾತ್ತೆ ಬಳಿಕ ಪುಷ್ಪ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆ
- 2 hrs ago
ಬಾಯ್ ಫ್ರೆಂಡ್ ನನ್ನು ತಬ್ಬಿಕೊಂಡಿದ್ದಾರಾ ಕತ್ರಿನಾ ಕೈಫ್; ಇದು ಆ ಸ್ಟಾರ್ ನಟನೇ ಎನ್ನುತ್ತಿದ್ದಾರೆ ನೆಟ್ಟಿಗರು
- 3 hrs ago
ತಮನ್ನಾ ಮತ್ತು ವಿರಾಟ್ ಕೊಹ್ಲಿಗೆ ಕೇರಳ ಹೈಕೋರ್ಟ್ ನೋಟಿಸ್
Don't Miss!
- News
ಇಷ್ಟಕ್ಕೂ ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಾರೆ ಗೊತ್ತಾ?
- Education
Indian Postal Circle Recruitment 2021: 3679 ಗ್ರಾಮೀಣ ದಖ್ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಸಂಸತ್ ಕ್ಯಾಂಟೀನ್ ಸಸ್ತಾ ಆಹಾರಗಳು ಇನ್ನು ಮುಂದೆ ದುಬಾರಿ
- Sports
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಇಂದು ಮತ್ತೊಂದು ಚಿಕಿತ್ಸೆ
- Automobiles
ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಟಾಟಾ ನೆಕ್ಸಾನ್ ಇವಿ
- Lifestyle
ಕರ್ನಾಟಕ ಶೈಲಿಯ ಅವರೆಕಾಳು ಚಿತ್ರಾನ್ನ ನಿಮಗಾಗಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಬಿಗ್ ಬಾಸ್ ಕನ್ನಡ-5': ನಾಲ್ಕನೇ ವಾರ ಹೊರಬೀಳೋರು ಯಾರು.?

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಆರಂಭ ಆಗಿ ಮೂರು ವಾರಗಳು ಉರುಳಿವೆ. ಮೂವರು ಸ್ಪರ್ಧಿಗಳು ಹೊರನಡೆದಿದ್ದಾರೆ. ಸದ್ಯ 'ದೊಡ್ಮನೆ'ಯೊಳಗೆ ಉಳಿದಿರುವವರು ಹದಿನಾಲ್ಕು ಸ್ಪರ್ಧಿಗಳು ಮಾತ್ರ.
ಹದಿನಾಲ್ಕು ಸ್ಪರ್ಧಿಗಳ ಪೈಕಿ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ಎಂಟು ಮಂದಿ ನಾಮಿನೇಟ್ ಆಗಿದ್ದಾರೆ. ಸೇಫ್ ಝೋನ್ ನಲ್ಲಿ ಇರುವವರು ಕೇವಲ ಆರು ಮಂದಿ.
ಹಾಗಾದ್ರೆ, ನಾಲ್ಕನೇ ವಾರ ಯಾರೆಲ್ಲ ನಾಮಿನೇಟ್ ಆಗಿದ್ದಾರೆ.? ಯಾರು ಯಾರನ್ನ ನಾಮಿನೇಟ್ ಮಾಡಿದರು.? ಎಂಬುದನ್ನ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಈ ನಾಲ್ವರನ್ನ ಮುಟ್ಟುವ ಹಾಗಿರಲಿಲ್ಲ.!
ಕಳೆದ ವಾರದ ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಗೆದ್ದ ಆಶಿತಾ ಚಂದ್ರಪ್ಪ, ದಿವಾಕರ್, ಕೃಷಿ ತಾಪಂಡ ಹಾಗೂ ಶ್ರುತಿ ಪ್ರಕಾಶ್ ಈ ವಾರಕ್ಕೆ ಇಮ್ಯೂನಿಟಿ ಪಡೆದಿದ್ದರು. ಹೀಗಾಗಿ, ಈ ನಾಲ್ವರನ್ನ ಯಾರೂ ನಾಮಿನೇಟ್ ಮಾಡುವ ಹಾಗಿರಲಿಲ್ಲ.
ಅನುಪಮಾ, ಶ್ರುತಿ, ಸಮೀರಾಚಾರ್ಯ: ಮೂವರಲ್ಲಿ ಉತ್ತಮ ಯಾರು.? ಕಳಪೆ ಯಾರು.?

ಕ್ಯಾಪ್ಟನ್ ರಿಯಾಝ್
ನಾಲ್ಕನೇ ವಾರದ ಕ್ಯಾಪ್ಟನ್ ಆಗಿ ರಿಯಾಝ್ ಆಯ್ಕೆ ಆದರು. ಹೀಗಾಗಿ, ರಿಯಾಝ್ ಕೂಡ ಸೇಫ್ ಝೋನ್ ನಲ್ಲಿ ಇದ್ದರು.
ಹಾಲಿಗಾಗಿ ಕೋಲಾಹಲ: ಹಾಲು ಮುಚ್ಚಿಟ್ಟ ಮಹಾನುಭಾವರಿಗೆ ಸುದೀಪ್ ಚಾಟಿಯೇಟು.!

ಡೇಂಜರ್ ಝೋನ್ ನಲ್ಲಿ ಸಮೀರಾಚಾರ್ಯ
ಅನುಪಮಾ ಗೌಡ, ಆಶಿತಾ, ಸಿಹಿ ಕಹಿ ಚಂದ್ರು, ಕೃಷಿ ತಾಪಂಡ, ತೇಜಸ್ವಿನಿ ಹಾಗೂ ಶ್ರುತಿ ಪ್ರಕಾಶ್ ಮತ ಚಲಾಯಿಸಿದ್ದರಿಂದ ಸಮೀರಾಚಾರ್ಯ ಈ ವಾರ ಡೇಂಜರ್ ಝೋನ್ ನಲ್ಲಿ ಇದ್ದಾರೆ.
''ಹಾಲು ಕುಡಿದ ಮಕ್ಳೇ ಬದುಕಲ್ಲ, ಇನ್ನೂ ಹಾಲು ಕದ್ದವು ಬದುಕ್ತಾವಾ.?!''

ಜಯಶ್ರೀನಿವಾಸನ್ ಮಿಸ್ ಆಗಲಿಲ್ಲ
ಜೆಕೆ, ಆಶಿತಾ, ಜಗನ್, ಕೃಷಿ ತಾಪಂಡ ಮತ್ತು ತೇಜಸ್ವಿನಿ... ಜಯಶ್ರೀನಿವಾಸನ್ ರವರನ್ನ ನಾಮಿನೇಟ್ ಮಾಡಿದರು.

ಟಾರ್ಗೆಟ್ ಆದ ನಿವೇದಿತಾ ಗೌಡ
ಮನೆಯಲ್ಲಿ ಯಾವ ಕೆಲಸವನ್ನೂ ಮಾಡದ ಕಾರಣ ಈ ವಾರ ನಿವೇದಿತಾ ಗೌಡ ನಾಮಿನೇಟ್ ಆಗಿದ್ದಾರೆ. ಜೆಕೆ, ಜಗನ್, ಸಿಹಿ ಕಹಿ ಚಂದ್ರು ಹಾಗೂ ಶ್ರುತಿ ಪ್ರಕಾಶ್... ನಿವೇದಿತಾ ಗೌಡ ವಿರುದ್ಧ ವೋಟ್ ಮಾಡಿದರು.

ನಾಮಿನೇಟ್ ಆದ ಜಗನ್ನಾಥ್
ಇದ್ದಕ್ಕಿದ್ದಂತೆ ಉಗ್ರ ಪ್ರತಾಪ ತೋರುವ ಜಗನ್ನಾಥ್ ಈ ವಾರ ನಾಮಿನೇಟ್ ಆಗಿದ್ದಾರೆ. ಅದು ಜಯಶ್ರೀನಿವಾಸನ್, ನಿವೇದಿತಾ ಹಾಗೂ ದಿವಾಕರ್ ವೋಟ್ ಮಾಡಿದ್ರಿಂದಾಗಿ.!

ಮೊದಲ ಬಾರಿ ನಾಮಿನೇಟ್ ಆದ ತೇಜಸ್ವಿನಿ
ನಾಲ್ಕು ವಾರಗಳಲ್ಲಿ ಇದೇ ಮೊದಲ ಬಾರಿಗೆ ತೇಜಸ್ವಿನಿ ನಾಮಿನೇಟ್ ಆಗಿದ್ದಾರೆ. ಸಮೀರಾಚಾರ್ಯ ಹಾಗೂ ದಿವಾಕರ್, ತೇಜಸ್ವಿನಿ ರನ್ನ ಮನೆಯಿಂದ ಹೊರಗೆ ಕಳುಹಿಸಲು ಇಚ್ಛಿಸಿದರು.

ಹೊರಗೆ ಹೋಗ್ತಾರಾ ಸಿಹಿ ಕಹಿ ಚಂದ್ರು?
ಸಿಹಿ ಕಹಿ ಚಂದ್ರು ವಿರುದ್ಧ ಸಮೀರಾಚಾರ್ಯ, ಜಯಶ್ರೀನಿವಾಸನ್ ಹಾಗೂ ಚಂದನ್ ಶೆಟ್ಟಿ ಮತ ಚಲಾಯಿಸಿದರು.

ಮತ್ತೆ ನಾಮಿನೇಟ್ ಆದ ಅನುಪಮಾ ಗೌಡ
ಅನುಪಮಾ ಗೌಡ ವಿರುದ್ಧ ವೋಟ್ ಮಾಡಿದ್ದು ಇಬ್ಬರೇ (ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ). ಆದರೂ ಅನುಪಮಾ ಡೇಂಜರ್ ಝೋನ್ ನಲ್ಲಿ ಇದ್ದಾರೆ.

ನೇರವಾಗಿ ನಾಮಿನೇಟ್ ಆದ ಜೆಕೆ
ಜೆಕೆ ಹೆಸರನ್ನ ಕ್ಯಾಪ್ಟನ್ ರಿಯಾಝ್ ಹೇಳಿದ್ದರಿಂದ, ಜೆಕೆ ಕೂಡ ಈ ವಾರ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಹೊರ ಹೋಗೋದು ಯಾರು.?
ಸಮೀರಾಚಾರ್ಯ, ಜಯಶ್ರೀನಿವಾಸನ್, ನಿವೇದಿತಾ ಗೌಡ, ಜಗನ್ನಾಥ್, ಸಿಹಿ ಕಹಿ ಚಂದ್ರು, ತೇಜಸ್ವಿನಿ, ಅನುಪಮಾ ಗೌಡ... ಈ ಎಂಟು ಜನರ ಪೈಕಿ ಈ ವಾರ 'ಬಿಗ್ ಬಾಸ್' ಮನೆಯಿಂದ ಯಾರು ಹೊರ ಹೋಗಬೇಕು.? ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.