twitter
    For Quick Alerts
    ALLOW NOTIFICATIONS  
    For Daily Alerts

    ವೇಲಾಯುಧ ರಹಸ್ಯ ಬಿಚ್ಚಿಟ್ಟ ಬ್ರಹ್ಮಾಂಡ ಶರ್ಮಾ

    By Rajendra
    |

    ನರೇಂದ್ರ ಬಾಬು ಶರ್ಮಾ ಅವರು ತಮ್ಮ ಬಳಿ ಇರುವ ವೇಲಾಯುಧದ ರಹಸ್ಯವನ್ನು ಇದೇ ಮೊದಲ ಬಾರಿಗೆ ಬಿಚ್ಚಿಟ್ಟಿದ್ದಾರೆ. ಅವರಿಗೆ ಆ ಆಯುಧ ಹೇಗೆ ಲಭಿಸಿತು. ಯಾರು ಕೊಟ್ಟರು ಎಂಬುದನ್ನು ಅವರು ಈಟಿವಿ ಕನ್ನಡದ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹೇಳಿಕೊಂಡರು.

    ಈ ಆಯುಧವನ್ನು ಬಿಗ್ ಬಾಸ್ ನ ಇನ್ನೊಬ್ಬ ಸ್ಪರ್ಧಿ ಅರುಣ್ ಸಾಗರ್ ಅವರು ಟಾಸ್ಕ್ ಒಂದರಲಿ ಕದ್ದು ಬಚ್ಚಿಟ್ಟಿದ್ದರು. ಆ ವೇಲಾಯುಧವನ್ನು ಮುಟ್ಟಿದ್ದಕ್ಕೆ ಬ್ರಹ್ಮಾಂಡ ಗುರುಗಳು ಕೆಂಡಾಮಂಡಲವಾಗಿದ್ದರು. ಸಾಕಷ್ಟು ಕಣ್ಣೀರು ಸುರಿಸಿದ್ದರು.

    Narendra Babu Sharma
    ಈ ಬಗ್ಗೆ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಸುದೀಪ್ ಅವರು ಕೇಳಿದರು. "ಬ್ರಹ್ಮಾಂಡ ಗುರುಗಳೇ ತಾವು ಇಷ್ಟೊಂದು ಅತ್ತಿದ್ದನ್ನು ನಾನು ಇದುವರೆಗೂ ನೋಡಿಲ್ಲ. ಆ ಆಯುಧ ಮುಟ್ಟಿದ್ದಕ್ಕೆ ತಾವು ಪರಿಪರಿಯಾಗಿ ಅತ್ತು ಕಣ್ಣೀರು ಹಾಕಿದಿರಿ. ಆ ಆಯುಧದ ಬಗ್ಗೆ ನಮಗೆಲ್ಲಾ ಕುತೂಹಲ ಇದೆ. ಅದು ತಮ್ಮ ಬಳಿಗೆ ಬಂದದ್ದು ಹೇಗೆ ಎಂದು ಕೇಳಿದರು.

    ಇದಕ್ಕೆ ಬ್ರಹ್ಮಾಂಡ ಶರ್ಮಾ ಅವರು ಹೇಳಿದ್ದು ಹೀಗಿತ್ತು. ಒಂದು ದಿನ ಕನಸಿನಲ್ಲಿ ಅಮ್ಮನವರು ಕಾಣಿಸಿಕೊಂಡರು. ತಮ್ಮ ಬಳಿ ಇರುವ ಆಯುಧವನ್ನು ತೆಗೆದುಕೊಳ್ಳುವಂತೆ ಸೂ‌ಚಿಸಿದರು. ಆದರೆ ತಾವು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅಯ್ಯೋ ಕನಸು ಬಿಡು ಎಂದು ಸುಮ್ಮನಾದೆ.

    ಮರುದಿನ ಬೆಳಗ್ಗೆ ಎದ್ದು ನೋಡಿದಾಗ ಈ ಆಯುಧ ಅಮ್ಮನವರ ಫೋಟೋ ಬಳಿ ಇತ್ತು. ತಮಗೆ ಸಾಕ್ಷಾತ್ ಆ ತಾಯಿಯೇ ಈ ಆಯುಧವನ್ನು ಕೊಟ್ಟಿದ್ದಾಳೆ. ಹಾಗಾಗಿ ಅದನ್ನು ತುಂಬಾ ಜೋಪಾನವಾಗಿ ಕಾಪಾಡಿಕೊಂಡು ಬರುತ್ತಿದ್ದೇನೆ ಎಂದು ಹೇಳಿದರು. (ಒನ್ಇಂಡಿಯಾ ಕನ್ನಡ)

    English summary
    Brahmanda fame Narendra Babu Sharma revealed about his religious symbol Trident in Etv Kannada reality show Bigg Boss. He said he found the trident from goddess. 
    Monday, May 27, 2013, 18:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X