Just In
Don't Miss!
- News
ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಶುಭ ಸುದ್ದಿ
- Sports
ಶ್ರೀಲಂಕಾದಿಂದಲೇ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಜೋ ರೂಟ್
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಕಾಮಿಡಿ ಕಿಲಾಡಿಗಳು' ಮುಗಿತು, ಮತ್ತೊಂದು ಹೊಸ ಶೋ ಬಂತು

ಜೀ ಕನ್ನಡದ ಯಶಸ್ವಿ ಕಾರ್ಯಕ್ರಮ 'ಕಾಮಿಡಿ ಕಿಲಾಡಿಗಳು ಸೀಸನ್ 2' ಈಗಷ್ಟೇ ಮುಗಿದಿದೆ. ಎರಡನೇ ಆವೃತ್ತಿಯಲ್ಲಿ ಮಡೆನೂರು ಮನು ವಿಜಯಶಾಲಿಯಾಗಿ ಹೊರಹೊಮ್ಮಿದ್ದಾರೆ. ಎರಡನೇ ಸೀಸನ್ ಮುಗಿಯುತ್ತಿದ್ದಂತೆ ಮತ್ತೊಂದು ಹೊಸ ಶೋ ಆರಂಭವಾಗುತ್ತಿದೆ.
ಹೌದು, 'ಕಾಮಿಡಿ ಕಿಲಾಡಿಗಳು' ಎರಡು ಆವೃತ್ತಿಯ ಸ್ಪರ್ಧಿಗಳು ಒಟ್ಟಿಗೆ ಭಾಗವಹಿಸಲಿರುವ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್' ಎಂಬ ಹೊಸ ಶೋ ಮೂಡಿ ಬರ್ತಿದೆ.
'ಕಾಮಿಡಿ ಕಿಲಾಡಿಗಳು-2' ವಿಜೇತರಿಗೆ ಒಲಿದ ಬಹುಮಾನ ಏನು ಗೊತ್ತಾ.?
ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಈ ಪ್ರೋಮೋದಲ್ಲಿ ಶಿವರಾಜ್ ಕೆ.ಆರ್ ಪೇಟೆ, ದಿವ್ಯ, ಮಡನೂರು ಮನು ಕಾಣಿಸಿಕೊಂಡಿದ್ದಾರೆ. ಇನ್ನು ವಾರಂತ್ಯದಲ್ಲಿ ಮತ್ತೆ ಎಲ್ಲರನ್ನ ನಗಿಸಲು ಮತ್ತೆ ಕಿಲಾಡಿಗಳು ಬರ್ತಿರೋದಕ್ಕೆ ಟಿವಿ ಪ್ರೇಕ್ಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ, ಈ ಕಾರ್ಯಕ್ರಮದಲ್ಲೂ ಅದೇ ತೀರ್ಪುಗಾರರು ಮುಂದುವರೆಯಲಿದ್ದಾರೆ. ನವರಸ ನಾಯಕ ಜಗ್ಗೇಶ್, ನಿರ್ದೇಶಕ ಯೋಗರಾಜ್ ಭಟ್, ನಟಿ ರಕ್ಷಿತಾ ಪ್ರೇಮ್ ಹಾಗೂ ನಿರೂಪಕ ಆನಂದ್ ಅವರೇ ಇರಲಿದ್ದಾರೆ.
ಜುಲೈ 7 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ 'ಕಾಮಿಡಿ ಕಿಲಾಡಿಗಳು ಚಾಂಪಿಯನ್ ಷಿಪ್' ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.