ಆರ್ಯನ ಡೆತ್ ಸರ್ಟಿಫಿಕೆಟ್ ತರಲು ಹೊರಟ ಅನುಗೆ ಸತ್ಯ ಗೊತ್ತಾಗುತ್ತಾ..?

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು, ಮೀರಾಳನ್ನು ರಿಸೈನ್ ಮಾಡಿರುವುದಕ್ಕೆ ಕಾರಣವನ್ನು ಕೇಳುತ್ತಾಳೆ. ಆಗ ಮೀರಾ, ಝೇಂಡೇ ಇಲ್ಲದೇ ಆಫೀಸಿನಲ್ಲಿ ನನಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾಳೆ.

ಇನ್ನು ಅನು ಸದ್ಯಕ್ಕೆ ಕೆಲಸ ಮುಂದುವರಿಸಿ, ನಿನ್ನ ಕೆಲಸಕ್ಕೆ ತೊಂದರೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಅನು ಸಮಾಧಾನ ಮಾಡುತ್ತಾಳೆ. ಈ ವೇಳೆ ಮೀರಾ, ಅನುಳನ್ನು ಮತ್ತೊಂದು ಪ್ರಶ್ನೆ ಕೇಳುತ್ತಾಳೆ.

ಆರ್ಯ ಸರ್‌ನ ಪ್ರತಿಯೊಂದು ಡಾಕ್ಯುಮೆಂಟ್ಸ್ ಕೂಡ ನನ್ನ ಬಳಿ ಇದೆ. ಆದರೆ ಅವರ ಡೆತ್ ಸರ್ಟಿಫಿಕೆಟ್ ಇಲ್ಲ. ನನಗೊಂದು ಕಾಪಿ ಬೇಕಿತ್ತು ಎಂದು ಕೇಳುತ್ತಾಳೆ. ಅದಕ್ಕೆ ಅನು ನಾನು ತರಿಸಿಕೊಡುತ್ತೀನಿ ಎಂದು ಹೇಳಿ ಮನೆಗೆ ಹೋಗುತ್ತಾಳೆ.

ಆರಾಧನಾ ಕರೆಗೆ ಬೇಸತ್ತ ಸಂಜು

ಆರಾಧನಾ ಕರೆಗೆ ಬೇಸತ್ತ ಸಂಜು

ಆಫೀಸಿನಲ್ಲಿ ಸಂಜು, ಅನುಗಾಗಿ ಕಾಯುತ್ತಿರುತ್ತಾನೆ. ಆದರೆ ಅನು ಮನೆಗೆ ಹೊರಟಿರುತ್ತಾಳೆ. ಈ ಬಗ್ಗೆ ಸಂಜು, ಮೀರಾಳಿಂದ ಮಾಹಿತಿ ಪಡೆದುಕೊಳ್ಳುತ್ತಾನೆ. ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಆರಾಧನಾ, ಸಂಜುಗೆ ಕರೆ ಮಾಡುತ್ತಾಳೆ. ಮನೆಯಲ್ಲಿ ನನಗೆ ಇರೋದಕ್ಕೆ ಆಗುತ್ತಿಲ್ಲ ಬೇಗ ಬಾ ಎಂದು ಕರೆಯುತ್ತಾಳೆ. ಆದರೆ, ಆಫೀಸಿನಲ್ಲಿ ತನಗೆ ತುಂಬಾ ಕೆಲಸವಿದೆ ಎಂದು ಸುಳ್ಳು ಹೇಳುತ್ತಾನೆ. ಇನ್ನು ಮನೆಗೆ ಹೋಗಿ ಆರಾಧನಾ ಜೊತೆಗೆ ಮಾತನಾಡಲು ಇಷ್ಟವಿಲ್ಲದೇ, ಮನೆಗೆ ಹೋಗುವುದೇ ಬೇಡ ಎಂದು ಅಂದುಕೊಳ್ಳುತ್ತಾನೆ. ಅಷ್ಟರಲ್ಲಿ ಝೇಂಡೇ ಬರುತ್ತಾನೆ. ಎಲ್ಲಿಗೆ ಹೊರಟಿದ್ದೀರಿ ಡ್ರಾಪ್ ಮಾಡಲಾ ಎಂದು ಕೇಳುತ್ತಾನೆ. ಝೇಂಡೇ ಸಿಕ್ಕಿದ್ದೆ ಚಾನ್ಸ್ ಎಂದು ಸಂಜುನನ್ನು ಕರೆದುಕೊಂಡು ಹೋಗುತ್ತಾನೆ.

ಸಂಜುಗೆ ಡ್ರಾಪ್ ಕೊಟ್ಟ ಝೇಂಡೇ

ಸಂಜುಗೆ ಡ್ರಾಪ್ ಕೊಟ್ಟ ಝೇಂಡೇ

ಆರ್ಯ ಮತ್ತು ಝೇಂಡೇ ಸದಾ ಹೋಗುತ್ತಿದ್ದ ಟೀ ಸ್ಟಾಲ್‌ಗೆ ಸಂಜುನನ್ನು ಕರೆದುಕೊಂಡು ಹೋಗುತ್ತಾನೆ. ಆರ್ಯನ ಬಗ್ಗೆ ಮಾತನಾಡುತ್ತಾ ವರ್ಧನ್ ಕುಟುಂಬ ನನ್ನ ಗೆಳೆಯನಿಗೆ ಮೋಸ ಮಾಡಿತು ಎಂದು ಹೇಳುತ್ತಾನೆ. ಸಂಜುಗೆ ಝೇಂಡೇ ಮಾತುಗಳನ್ನು ಕೇಳಿಸಿಕೊಳ್ಳುತ್ತಾನೆ. ನಂತರ ವಠಾರಕ್ಕೆ ಡ್ರಾಪ್ ಹಾಕಿಸಿಕೊಂಡ ಸಂಜು, ಝೇಂಡೇ ಮಾತನ್ನು ಕೇಳುತ್ತಿರುವಂತೆ ನಟಿಸುತ್ತಾನೆ. ಝೇಂಡೇ ಇದನ್ನು ನಂಬಿಕೊಂಡಿದ್ದಾನೆ. ಹೇಗಾದರೂ ಮಾಡಿ ಸಂಜುನನ್ನು ತನ್ನ ಪರ ಸೆಳೆದುಕೊಳ್ಳುವ ಪ್ರಯತ್ನದಲ್ಲಿದ್ದಾನೆ.

ಅನುಗೆ ಅಪಾಯವಿದೆ ಎಂದ ಸಂಜು

ಅನುಗೆ ಅಪಾಯವಿದೆ ಎಂದ ಸಂಜು

ವಠಾರದಲ್ಲಿ ಸುಬ್ಬು ಮತ್ತು ಪುಷ್ಪಾ ಬಳಿ ಬಂದು ಸಹಾಯ ಕೇಳುತ್ತಾನೆ. ನನಗೆ ಸ್ನೇಹಿತರು ಅಂತ ಯಾರೂ ಇಲ್ಲ. ನನಗೆ ಸಹಾಯ ಮಾಡಿ ನನಗೆ ಆರಾಧನಾ ಅವರು ಕಾಲ್ ಮಾಡುತ್ತಿದ್ದಾರೆ. ಆದರೆ ನಾನು ಅವರ ಬಳಿ ಮಾತನಾಡೋದಕ್ಕೆ ಏನೂ ಇಲ್ಲ. ಅವರು ನನ್ನ ಬಳಿ ಬಂದಷ್ಟೂ ನನಗೆ ಹಿಂಸೆ ಆಗುತ್ತದೆ. ಅವರಿಂದ ತಪ್ಪಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುತ್ತೇನೆ. ಆದರೆ, ಇತ್ತ ಝೇಂಡೇ ಬೇರೆ ನನ್ನ ಹಿಂದೆ ಬಿದ್ದಿದ್ದಾನೆ. ಅಲ್ಲದೇ, ಆರ್ಯ ಬಗ್ಗೆ ಏನೇನೋ ಹೇಳುತ್ತಿರುತ್ತಾನೆ. ಝೇಂಡೇ ಇಂದ ಅನುಗೆ ಅಪಾಯವಿದೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಪುಷ್ಪಾ-ಸುಬ್ಬು ಶಾಕ್ ಆಗುತ್ತಾರೆ.

ಅನುಗೆ ಸತ್ಯ ಗೊತ್ತಾಗುವ ಸಮಯ ಬಂತು

ಅನುಗೆ ಸತ್ಯ ಗೊತ್ತಾಗುವ ಸಮಯ ಬಂತು

ಅನು ಮನೆಗೆ ಹೋಗಿ ಶಾರದಾ ಬಳಿ ಆರ್ಯನ ಡೆತ್ ಸರ್ಟಿಫಿಕೆಟ್ ಕೇಳುತ್ತಾಳೆ. ಶಾರದಾ ಫೈಲ್ ಚೆಕ್ ಮಾಡಿದಾಗ ಡೆತ್ ಸರ್ಟಿಫಿಕೆಟ್ ಇರುವುದಿಲ್ಲ. ಆಗ ಗಾಬರಿಯಲ್ಲಿ ಡಾಕ್ಯುಮೆಂಟ್ ಪಡೆದೇ ಇಲ್ಲ ಎಂದು ಹೇಳುತ್ತಾಳೆ. ಆಗ ಅನು, ಆರ್ಯ ಅಡ್ಮಿಟ್ ಆಗಿದ್ದ ಆಸ್ಪತ್ರೆಗೆ ಹೊರಡುತ್ತಾಳೆ. ಡೆತ್ ಸರ್ಟಿಫಿಕೆಟ್ ಇಲ್ಲದೇ, ಆರ್ಯ ಸರ್ ಸಾವನ್ನ ಹೇಗೆ ಒಪ್ಪಿಕೊಂಡೆವು ಎಂಬುದು ಅನು ಯೋಚನೆ. ಆಸ್ಪತ್ರೆಗೆ ಹೋಗುತ್ತಿರುವ ಅನುಗೆ ಆರ್ಯ ಬದುಕಿರುವ ಸತ್ಯ ಗೊತ್ತಾಗುತ್ತಾ..?

More from Filmibeat

English summary
jothe jotheyali Serial 06th December Episode Written Update. anu now goes to hospital to get death certificate of arya. Will anu comes to know the truth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X