Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ವೀಕೆಂಡ್ ವಿತ್ ರಮೇಶ್' ಮೊದಲೆರಡು ಸೀಸನ್ ಗಳತ್ತ ಜಗ್ಗೇಶ್ ಮುಖ ಮಾಡ್ಲಿಲ್ಲ.! ಯಾಕೆ.?
ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೂರನೇ ಸೀಸನ್ ನ ಎರಡನೇ ಅತಿಥಿಯಾಗಿ ನವರಸ ನಾಯಕ ಜಗ್ಗೇಶ್ ಪಾಲ್ಗೊಂಡಿದ್ದರು. ತಮ್ಮ ಜೀವನದ ಫ್ಲ್ಯಾಶ್ ಬ್ಯಾಕ್ ನೋಡಿ ಜಗ್ಗೇಶ್ ಭಾವುಕರಾದರು.
ಅಷ್ಟಕ್ಕೂ, 'ವೀಕೆಂಡ್ ವಿತ್ ರಮೇಶ್' ಮೊದಲ ಆವೃತ್ತಿಯಲ್ಲಿಯೇ ಅತಿಥಿಯಾಗಿ ನಟ ಜಗ್ಗೇಶ್ ಭಾಗವಹಿಸಬೇಕಿತ್ತು. ಆದ್ರೆ, ಈ ಶೋ ಕಡೆ ಜಗ್ಗೇಶ್ ಮುಖ ಮಾಡಲಿಲ್ಲ. ಅದಕ್ಕೆ ಕಾರಣ ಏನು ಗೊತ್ತಾ.?
ಜಗ್ಗೇಶ್ ಗೆ ಸಂಕೋಚ
ನಟ ಜಗ್ಗೇಶ್ ಕೊಂಚ ಸಂಕೋಚದ ಸ್ವಭಾವದವರಂತೆ. ಹೀಗಾಗಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದು ಮುಂದು ನೋಡಿದ್ದಾರೆ.
ರಮೇಶ್ ಪ್ರಶ್ನೆ ಮಾಡಿದರು
ಈ ಬಗ್ಗೆ 'ವೀಕೆಂಡ್ ವಿತ್ ರಮೇಶ್' ವೇದಿಕೆಗೆ ಕಾಲಿಟ್ಟ ತಕ್ಷಣ ನಟ ಜಗ್ಗೇಶ್ ರವರನ್ನ ಸ್ವತಃ ನಟ ರಮೇಶ್ ಅರವಿಂದ್ ಪ್ರಶ್ನೆ ಮಾಡಿದರು.
ರಿಸರ್ಚ್ ಟೀಮ್ ಗೆ ಸಿಗಬಾರದ್ದೆಲ್ಲ ಸಿಕ್ಕಿಬಿಟ್ರೆ..
ರಮೇಶ್ ಪ್ರಶ್ನೆ ಮಾಡಿದಾಗ ಜಗ್ಗೇಶ್ ಹೇಳಿದಿಷ್ಟು - ''ನನಗೆ ಸ್ವಲ್ಪ ಸಂಕೋಚದ ಸ್ವಭಾವ. ರಮೇಶ್ ಕೇಳಬಾರದ್ದೆಲ್ಲ ಕೇಳಿ, ನಾನು ಫೀಲಿಂಗ್ ಮಾಡಿಕೊಂಡ್ಬಿಟ್ರೆ, ರಿಸರ್ಚ್ ಟೀಮ್ ಅವರಿಗೆ ಸಿಗಬಾರದ್ದೆಲ್ಲ ಸಿಕ್ಕಿಬಿಟ್ರೆ... ಇದೆಲ್ಲ ಯಾಕೆ ಬೇಕು ನಮಗೆ... ಎಸ್ಕೇಪ್ ಆಗ್ಬಿಡೋಣ ಅಂತ ಇದ್ದೆ'' ಎಂದರು.
ಸ್ಫೂರ್ತಿಯ ಚಿಲುಮೆ
ಕಡೆಗೂ ತಮ್ಮ ಸಂಕೋಚವನ್ನ ಬದಿಗಿಟ್ಟು ಈ ಬಾರಿಯ ಸಾಧಕರ ಕುರ್ಚಿ ಮೇಲೆ ನಟ ಜಗ್ಗೇಶ್ ಕುಳಿತಿದ್ದಾಯ್ತು. ತಮ್ಮ ನೆನಪಿನ ಬುತ್ತಿಯನ್ನ ಬಿಚ್ಚಿಟ್ಟು ಅನೇಕರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ ನಟ ಜಗ್ಗೇಶ್.