Don't Miss!
- Sports KKR vs RR IPL 2024: ಜೋಸ್ ದಿ ಬಾಸ್ ಬಟ್ಲರ್ ಆರ್ಭಟಕ್ಕೆ ಕೆಕೆಆರ್ ಹೈರಾಣ; ರಾಯಲ್ ಆಗಿ ಗೆದ್ದ ರಾಜಸ್ಥಾನ
- Lifestyle ಬೇಸಿಗೆಯಲ್ಲಿ ಇಡ್ಲಿ, ದೋಸೆಯ ಹಿಟ್ಟು ಹುಳಿ ಬಂದರೆ ಹುಳಿ ಕಡಿಮೆಯಾಗಲು ಏನು ಮಾಡಬೇಕು?
- News Dwarakish: ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ದ್ವಾರಕೀಶ್ ಪಡೆದಿದ್ದ ಮತಗಳೆಷ್ಟು?
- Automobiles ಪೆಟ್ರೋಲ್ ಎಂಜಿನ್ಗಳಲ್ಲಿ ಮಾತ್ರ ಬರಲಿದೆ ರೆನಾಲ್ಟ್ನ ಬ್ರಹ್ಮಾಸ್ತ್ರ ಡಸ್ಟರ್
- Finance ಇಸ್ರೇಲ್-ಇರಾನ್ ಯುದ್ಧದ ಪರಿಣಾಮ ಷೇರು ಪೇಟೆಯಲ್ಲಿ ಭಾರಿ ನಷ್ಟ
- Technology YouTube: ಯೂಟ್ಯೂಬ್ ಬಳಕೆದಾರರಿಗೆ ಶಾಕಿಂಗ್ ನ್ಯೂಸ್! ಆಡ್ ಬ್ಲಾಕರ್ ವಿರುದ್ಧ ಸಮರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಮಿತಾಬ್ 'ಕೆಬಿಸಿ'ಯಲ್ಲಿ ಕೋಟಿ ಗೆದ್ದ ವೀರ ಮನೋಜ್
ಅಚ್ಚರಿಯೆಂಬಂತೆ ಈ ಮನೋಜ್ ಕುಮಾರ್ ರೈನಾ ಕಳೆದ ವರ್ಷಗಳಲ್ಲಿ ಸಾಕಷ್ಟು ಬಾರಿ ಈ ಶೋದಲ್ಲಿ ಭಾಗವಹಿಸಲು ಹರಸಾಹಸ ಪಟ್ಟಿದ್ದರು. 2000 ದಲ್ಲಿ ಕೆಬಿಸಿ ಶೋ ಪ್ರಾರಂಭವಾದಾಗಿನಿಂದ ಪ್ರಾರಂಭವಾದ ಇವರ ಪ್ರಯತ್ನ, ಕೊನೆಗೂ ಈಗ ಫಲ ನೀಡಿದೆ. ಅಷ್ಟೇ ಅಲ್ಲ, ಇವರೀಗ ಬರೋಬ್ಬರಿ ರು. ಒಂದು ಕೋಟಿಗೆ ಒಡೆಯರಾಗಿದ್ದಾರೆ. ಇಂದು ಪ್ರಸಾರವಾಗುವ ಸಂಚಿಕೆಯಲ್ಲಿ ನೀವಿದನ್ನು ನೋಡಬಹುದು.
ಬಾಲಿವುಡ್ ಮೇರು ನಟ ಅಮಿತಾಬ್ ಬಚ್ಚನ್ ನಡೆಸಿಕೊಡಲಿರುವ ಟಿವಿ ಗೇಮ್ ಶೋ 'ಕೌನ್ ಬನೇಗಾ ಕರೋಡಪತಿ- ಸೀಸನ್ 6', ಈ ತಿಂಗಳು, 07 ಸೆಪ್ಟಂಬರ್ 2012 ರಿಂದ ಪ್ರಾರಂಭವಾಗಿದೆ. ರಾತ್ರಿ 8-30ಕ್ಕೆ ಪ್ರಸಾರವಾಗುತ್ತಿರುವ ಈ ಶೋ ಈ ಬಾರಿಯೂ ತನ್ನ ಮೊದಲಿನ ಕ್ರೇಜ್ ಹಾಗೇ ಉಳಿಸಿಕೊಂಡಿದೆ. ಕಳೆದ 5 ಶೋಗಳೂ ಯಶಸ್ವಿಯಾಗಿದ್ದು ಇದೀಗ ಆರನೇ ಸೀಸನ್ ಪ್ರಾರಂಭವಾಗಿದೆ. ಅಮಿತಾಬ್ ನಡೆಸಿಕೊಟ್ಟ ಈ ಮೊದಲಿನ ಸೀಸನ್ ಗಳನ್ನು ನೋಡಿರುವ ಜಗತ್ತಿನ ಕೋಟ್ಯಾಂತರ ಮಂದಿ ಈ ಶೋಗೆ ಕಾತರದಿಂದ ಕಾದಿದ್ದರು.
ಈ ಸಂಬಂಧ ಪಿಟಿಐ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮಿತಾಬ್ "ನಮ್ಮ ಭಾರತದಲ್ಲಿ ಈಗಲೂ ಸಾಕಷ್ಟು ಮಂದಿ ವಿದ್ಯಾವಂತರು ನಿರುದ್ಯೋಗಿಗಳಾಗಿದ್ದಾರೆ. ಇದು ಸರ್ಕಾರಕ್ಕೂ ಗೊತ್ತಿರುವ ವಿಷಯವೇ. ಆದರೆ ಇಂಥ ವಿದ್ಯಾವಂತರು, ನಿರುದ್ಯೋಗಿಗಳು ನಾವು ಮಾಡುತ್ತಿರುವ ಈ ಕೆಬಿಸಿಯಲ್ಲಿ ಭಾಗವಹಿಸಬೇಕು. ಒಮ್ಮೆ ಅವರು ಸೆಲೆಕ್ಟ್ ಆದರೆ, ನಂತರ ಅವರು ತಮ್ಮ ಪ್ರತಿಭೆ ಹಾಗೂ ಅದೃಷ್ಟದ ಬಲದಿಂದ ಇಲ್ಲಿ ಹಣ ಗಳಿಸಬಹುದು.
ಮುಂದುವರಿದ ಅಮಿತಾಬ್, ನಿರುದ್ಯೋಗ ಮುಂತಾದ ಸಮಸ್ಯೆಗಳಿಗೆ ಕೇವಲ ಸರ್ಕಾರದ ಕಡೆಯಿಂದ ಮಾತ್ರ ಸಹಾಯ, ಪರಿಹಾರ ಅಪೇಕ್ಷಿಸಲಾಗದು. ಅದಕ್ಕೆ ಭಾರತದಲ್ಲಿರುವ ಸಾಕಷ್ಟು ಕಾರ್ಪೋರೇಟ್ ಸಂಸ್ಥೆಗಳೂ ಕೈಜೋಡಿಸಬೇಕು. ಇಲ್ಲಿನ ಎಲ್ಲಾ ಸಮಸ್ಯೆಗಳಿಗೆ ಕೆಬಿಸಿ ಯಿಂದಲೇ ಪರಿಹಾರ ಸಿಗಬೇಕು ಎಂದು ನಿರೀಕ್ಷಿಸುವುದು ತಪ್ಪು. ಸರ್ಕಾರ ಹಾಗೂ ಕಾರ್ಪೋರೇಟ್ ಈ ಕೆಲಸ ಮಾಡುತ್ತಿವೆ, ಅದಿನ್ನೂ ಹೆಚ್ಚಾಗಿ ಮುಂದುವರಿಯಬೇಕಿದೆ" ಎಂದಿದ್ದಾರೆ.
ಒಟ್ಟಿನಲ್ಲಿ ಇಂದು ಒಂದು ಕೋಟಿ ರು ಹಣ ಗಳಿಸಿರುವ ಸ್ಪರ್ಧಿಯೊಬ್ಬರ ಆಟ ನೋಡುವ ಅವಕಾಶ ಎಲ್ಲರದಾಗಿದೆ. ಅಮಿತಾಬ್ ಈ ಶೋವನ್ನು ಮೊದಲಿನಷ್ಟೇ ಆಸ್ಥೆ ಹಾಗೂ ಆಕರ್ಷಕವಾಗಿ ನಡೆಸಿಕೊಡುತ್ತಿದ್ದಾರೆ. ಇಂದು ರಾತ್ರಿ 8-30ಕ್ಕೆ ಪ್ರಸಾರವಾಗಲಿರುವ ಮನೋಕ್ ಕುಮಾರ್ ರೈನಾ ಶೋ ನೋಡಲು ಬಹಳಷ್ಟು ಕಾಶ್ಮೀರಿಯನ್ನರು ಹಾಗೂ ಕೆಬಿಸಿ ಅಭಿಮಾನಿಗಳು ಕಾದಿದ್ದಾರೆ. (ಏಜೆನ್ಸೀಸ್)