ರಾಜ್ಯಕ್ಕೆ 4ನೇ Rank ಪಡೆದಿದ್ದ ನಾರಾಯಣಮೂರ್ತಿ ಬಳಿ ತಂದೆ ಹೀಗೆ ಹೇಳಿದ್ದರಂತೆ.!
Recommended Video
ಪ್ರಪಂಚದ ಅಗ್ರಗಣ್ಯ ಉದ್ಯಮಿಗಳ ಪೈಕಿ ಪ್ರಮುಖರಾದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ತಮ್ಮ ಬಾಲ್ಯವನ್ನ ನೆನಪಿಸಿಕೊಂಡ ಅವರು ರಾಜ್ಯಕ್ಕೆ ನಾಲ್ಕನೇ Rank ಪಡೆದಿದ್ದಾಗ ತಂದೆ ಅವರ ಹೇಳಿದ ಮಾತು ಮೆಲುಕು ಹಾಕಿದರು.
ಮೈಸೂರಿನ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ನಾರಾಯಣ ಮೂರ್ತಿ ಅವರು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ನಾಲ್ಕನೇ Rank ಪಡೆದುಕೊಂಡಿದ್ದರಂತೆ.
ಈ ಸಂತಸವನ್ನ ಅವರ ತಂದೆಯ ಬಳಿ ಹೇಳಿಕೊಳ್ಳಲು ಹೋದಾಗ ಅವರ ಮಾತು ಅಚ್ಚರಿ ಉಂಟು ಮಾಡಿತ್ತಂತೆ. ನಾಲ್ಕನೇ Rank ಬಂದಿರುವುದರಿಂದ ಶಬ್ಬಾಶ್, ಪರವಾಗಿಲ್ಲ ಅಂತಾರೆ ಎಂದುಕೊಂಡು ಹೋದರಂತೆ. ಆದರೆ, ಅವರ ತಂದೆ ''ಉಳಿದ ಮೂರು Rank ಎಲ್ಲಿ' ಪ್ರಶ್ನಿಸಿದರಂತೆ.

ಇದನ್ನ ಕೇಳಿ ನಾರಾಯಣ ಮೂರ್ತಿ ಅವರು ಚಿಂತೆ ಮಾಡೋಕೆ ಶುರು ಮಾಡಿದರಂತೆ. ಆಮೇಲೆ ತಾಯಿ ಅವರ ಬಳಿ ಹೋಗಿ ಅಳಲು ಆರಂಭಿಸಿದರಂತೆ. 'ನಾನು ಇಷ್ಟು ಕಟ್ಟಪಟ್ಟು ರಾತ್ರಿ-ಹಗಲು ಓದಿ ನಾಲ್ಕನೇ Rank ಪಡೆದರೆ ಹೀಗೆ ಅಂತಾರಲ್ಲ' ಅಂತ. ಅದಕ್ಕೆ ಅವರ ತಾಯಿ ''ಅವರು ನಿನಗೆ ಹಾಗೆ ಹೇಳಿದ್ದು ಉತ್ತೇಜನ ಮಾಡೋಕೆ' ಅಂತ.
ನಂತರ ಪಿಯುಸಿ ಪರೀಕ್ಷೆಯಲ್ಲಿ ಮೂರನೇ Rank ಪಡೆದ ನಾರಾಯಣ ಮೂರ್ತಿ ಅವರು ಆ ವೇಳೆ ತಂದೆಯವರ ಜೊತೆ ಹೋಗಲಿಲ್ಲ ಎಂದು ನೆನಪು ಮೆಲುಕು ಹಾಕಿದರು.


Click it and Unblock the Notifications











