Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ 'ರಗಳೆ' ಮೂಲಕ ಮತ್ತೆ ರಿಷಿಕಾ ಸಿಂಗ್ ಪ್ರತ್ಯಕ್ಷ!
ರಿಷಿಕಾ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಕನ್ನಡದ ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಗಳಾದ್ದರಿಂದ ಸಿನಿಮಾ ಮೂಲಕ ಎಂಟ್ರಿ ಕೊಟ್ಟಿದ್ದರೂ, ಅವರಿಗೆ ಒಟ್ಟಿನಲ್ಲಿ ಬೇಕಾಗಿರುವುದು ಪ್ರಚಾರವಷ್ಟೇ ಎಂಬುದು ಸರ್ವರಿಗೂ ಗೊತ್ತಿರುವ ಸಂಗತಿ. ಸಿಕ್ಕ ಸುದ್ದಿ ಪ್ರಕಾರ ರಿಷಿಕಾ ಸದ್ಯದಲ್ಲೇ ಒಂದು 'ಪ್ರೋಗ್ರಾಂ' ಮೂಲಕ 'ಟಿವಿ' ಲೋಕಕ್ಕೆ ಬರಲಿದ್ದಾರೆ. ಅದು ರಿಯಾಲಿಟಿ ಶೋ, ಅಥವಾ ಕಾರ್ಯಕ್ರಮವೇ ಎಂಬುದು ಇನ್ನೂ ಪಕ್ಕಾ ಆಗಿಲ್ಲ.
ಆದರೆ ಇದು, ಹಿಂದಿಯಲ್ಲಿ ಕರಣ್ ಜೋಹರ್ ನಡೆಸಿಕೊಡುತ್ತಿರುವ 'ಕಾಫಿ ವಿತ್ ಕರಣ್' ಮಾದರಿಯಲ್ಲಿ ಇರಲಿದೆ ಎಂಬ ಮಾಹಿತಿಯಿದೆ. ಆದರೆ ಹೆಸರು ಮಾತ್ರ 'ರಗಳೆ ವಿತ್ ರಿಷಿಕಾ'. ಸದ್ಯಕ್ಕೆ ಮಾತುಕತೆ ಹಂತದಲ್ಲಿರುವ ಈ ಶೋ, ಯಾವ ಚಾನೆಲ್ ಮೂಲಕ ಪ್ರೇಕ್ಷಕರ ಮುಂದೆ ಬರಲಿದೆ ಎಂಬುದು ಇನ್ನೂ ನಿಗೂಢ. ಸ್ಯಾಂಡಲ್ ವುಡ್ನ ಬೊಂಬಾಟ್ ಜೋಡಿಗಳನ್ನು ಕರೆಸಿ ಮಾತನಾಡಿಸುವ ಕಾರ್ಯಕ್ರಮ ಎನ್ನಲಾಗುತ್ತಿದೆ.
ಅಂದರೆ ಸದ್ಯದ ಜನಪ್ರಿಯ ಜೋಡಿಗಳಾದ ಸುದೀಪ್-ರಮ್ಯಾ, ಪುನೀತ್-ರಮ್ಯಾ, ದಿಗಂತ್-ಐಂದ್ರಿತಾ, ಯಶ್-ರಾಧಿಕಾ ಪಂಡಿತ್ ಮುಂತಾದ ತಾರಾ ಜೋಡಿಗಳನ್ನು ಕರೆಸಿ ಮಾತನಾಡಿಸಿ ಅವರ ಕೈಗೊಂದು ಗಿಫ್ಟ್ ಕೊಟ್ಟು ಕಳಿಸಿಕೊಡುವ ಕಾರ್ಯಕ್ರಮ ಎಂಬುದು ಸದ್ಯದ ಮಾಹಿತಿಯಾದರೂ ಅದಿನ್ನೂ ಪಕ್ಕಾ ಆಗಬೇಕಷ್ಟೇ. ಒಟ್ಟಿನಲ್ಲಿ, 'ಕಂಠೀರವ' ಹಾಗೂ 'ಕಠಾರಿವೀರ ಸುರಸುಂದರಾಂಗಿ' ಚಿತ್ರಗಳಲ್ಲಿ ಸಿನಿಪ್ರೇಕ್ಷಕರಿಗೆ ದರ್ಶನ ಕೊಟ್ಟಿದ್ದ ರಿಷಿಕಾ, ಇನ್ಮುಂದೆ ಕಿರುತೆರೆಯನ್ನೂ ಬಿಡುವುದಿಲ್ಲ ಎಂಬುದು ಕೆಲವರನ್ನು ಕಂಗಾಲಾಗಿಸಿದೆಯಂತೆ! (ಒನ್ ಇಂಡಿಯಾ ಕನ್ನಡ)