ಶರಣ್-ತರುಣ್ ಸುಧೀರ್ ಸ್ನೇಹವನ್ನ 4 ವರ್ಷ ದೂರ ಮಾಡಿತ್ತು ಆ ಒಂದು ಹಾಡು.!

ನೂರನೇ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಸಿನಿಮಾ Rambo ದೊಡ್ಡ ಹಿಟ್ ಆಯ್ತು. ಅದಾದ ಬಳಿಕ ವಿಕ್ಟರಿ ಎಂಬ ಇನ್ನೊಂದು ಚಿತ್ರವನ್ನ ಕೈಗೆತ್ತಿಕೊಂಡ ಶರಣ್ ಚಿತ್ರೀಕರಣ ಮಾಡ್ತಿದ್ದರು. ಅಲ್ಲಿಯವರೆಗೂ ಶರಣ್ ಮತ್ತು ತರುಣ್ ಸುಧೀರ್ ಅವರ ಸ್ನೇಹ ಎಷ್ಟರ ಮಟ್ಟಿಗೆ ಇತ್ತು ಅಂದ್ರೆ ಶರಣ್ ಅವರ ಪ್ರತಿ ಕೆಲಸದಲ್ಲೂ ತರುಣ್ ಜೊತೆಯಲ್ಲಿರಬೇಕಿತ್ತು.

ಶರಣ್ ಸಿನಿಮಾ ಕೆಲಸಗಳಲ್ಲೂ ತರುಣ್ ವಿಶೇಷ ಜವಾಬ್ದಾರಿ ಮತ್ತು ಕಾಳಜಿ ವಹಿಸುತ್ತಿದ್ದರು. ಹಾಗ್ನೋಡಿದ್ರೆ, Rambo ಸಿನಿಮಾದಲ್ಲಿ ಶರಣ್ ನಾಯಕನಾಗಿ ಯಶಸ್ಸು ಕಾಣಲು ತರುಣ್ ಪಾತ್ರವೂ ಹೆಚ್ಚಿದೆ. ಇದನ್ನ ಶರಣ್ ಅವರೇ ಹೇಳಿಕೊಂಡಿದ್ದಾರೆ.

ಹೀಗೆ ಇವರಿಬ್ಬರ ಸ್ನೇಹದಲ್ಲಿ ಎಲ್ಲವೂ ಚೆನ್ನಾಗಿ ಸಾಗುತ್ತಿದ್ದ ಸಮಯದಲ್ಲಿ ಒಂದು ವಿಚಾರಕ್ಕೆ ಮನಸ್ತಾಪ ಉಂಟಾಗುತ್ತೆ. ಅದರ ಪರಿಣಾಮ ನಾಲ್ಕೈದು ವರ್ಷ ಮಾತು ಬಿಟ್ಟು ದೂರ ಆಗ್ತಾರೆ. ಅಷ್ಟಕ್ಕೂ, ಕುಚುಕು ಗೆಳೆಯರಂತಿದ್ದ ಇವರ ಸ್ನೇಹದಲ್ಲಿ ಬಿರುಕು ತರಿಸಿದ ಆ ಘಟನೆ ಯಾವುದು? ಮುಂದೆ ಓದಿ....

ಆ ಘಟನೆ ಯಾವುದು?

ಆ ಘಟನೆ ಯಾವುದು?

''ಶರಣ್ ವಿಕ್ಟರಿ ಸಿನಿಮಾದಲ್ಲಿ ನಟಿಸುತ್ತಿದ್ದರು. ಅದೇ ವೇಳೆ ನಮಗೆ ಸಿಸಿಎಲ್ ಕಡೆಯಿಂದ ಬ್ಯಾಂಕಾಕ್ ಗೆ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಒಂದು ಸಾಂಗ್ ಇತ್ತು. ಅದಕ್ಕೆ ನಾನು ಎಲ್ಲ ರೀತಿ ಪ್ಲಾನ್ ಮಾಡಿದ್ದೆ. ಸರಿ ನಾನು ಬ್ಯಾಂಕಾಕ್ ನಿಂದ ವಾಪಸ್ ಬಂದ್ಮೇಲೆ ಮಾಡಿಕೊಡ್ತೀನಿ ಅಂತ ಹೇಳಿದ್ದೆ. ಆದರೆ, ಆ ಸಾಂಗ್ ಗೆ ಬೇರೆ ಪ್ಲಾನ್ ಮಾಡಿದ್ದರು'' - ತರುಣ್ ಸುಧೀರ್

ಫೋನ್ ಮಾಡಿದ ಶರಣ್

ಫೋನ್ ಮಾಡಿದ ಶರಣ್

''ನಾನು ಬ್ಯಾಂಕಾಕ್ ನಲ್ಲಿರುವಾಗ ಶರಣ್ ಫೋನ್ ಮಾಡಿ ''ಇಲ್ಲಿ ಸಾಂಗ್ ಪ್ಲಾನ್ ಮಾಡ್ತಿದ್ದಾರೆ, ಬಹುಶಃ ಇದು ಫಾರೀನ್ ಮಾಡಬಹುದು' ಅಂದ. ಬೇಡ ನಾನು ಬಂದ್ಮೇಲೆ ಮಾಡೋಣ, ಫಾರೀನ್ ಬೇಡ, ಸೆಟ್ ಹಾಕಿ ಮಾಡೋಣ, ಹೇಗಾದರೂ ಮಾಡಿ ನಿಲ್ಲಿಸು ನಾನು ವಾಪಸ್ ಬರೋವರೆಗೂ ಮ್ಯಾನೇಜ್ ಮಾಡು ಎಂದು ಹೇಳಿದೆ. ಸರಿ ಅಂತ ಇಟ್ಟ. ಆದರೆ ಅದು ಆಗಿದ್ದೇ ಬೇರೆ'' - ತರುಣ್ ಸುಧೀರ್

ವಾಪಸ್ ಬಂದ್ಮೇಲೆ ಶಾಕ್ ಆಯ್ತು

ವಾಪಸ್ ಬಂದ್ಮೇಲೆ ಶಾಕ್ ಆಯ್ತು

''ನಾನು ವಾಪಸ್ ಬಂದ್ಮೇಲೆ ಸಾಂಗ್ ಪ್ಲಾನ್ ಮಾಡೋಣ ಅಂತ ಕೇಳಿದ್ರೆ, ಇಲ್ಲ ಅದೆಲ್ಲ ಪ್ಲಾನ್ ಆಗೋಗಿದೆ. ಫಾರೀನ್ ಹೋಗ್ತಿದ್ದೀವಿ ಅಂದ್ರು. ಶರಣ್ ಏನು ಹೇಳಲ್ವಾ ಎಂದು ಕೇಳಿದ್ದಕ್ಕೆ, ಓಕೆ ಅಂದ್ರು ಎಂದರು. ಆಮೇಲೆ ನಾನು ಶರಣ್ ಗೆ ಫೋನ್ ಮಾಡಿದೆ. ಫೋನ್ ಪಿಕ್ ಮಾಡಿಲ್ಲ. ಒಂದು ವಾರ ಆಯ್ತು ಸುಮ್ಮನಾದೆ. ಆಮೇಲೆ ಶರಣ್ ಫೋನ್ ಮಾಡ್ದ. ನಾನು ಪಿಕ್ ಮಾಡಿಲ್ಲ'' - ತರುಣ್ ಸುಧೀರ್

ಖುಷಿ, ನೋವು, ಕಣ್ಣೀರು ತುಂಬಿದ ಅಧ್ಯಕ್ಷ ಶರಣ್ ಪ್ರೋಮೋ

ನಾಲ್ಕು ವರ್ಷ ಗ್ಯಾಪ್ ಆಯ್ತು

ನಾಲ್ಕು ವರ್ಷ ಗ್ಯಾಪ್ ಆಯ್ತು

''ಅಲ್ಲಿಂದ ಸಣ್ಣದಾಗಿ ಶುರುವಾದ ಬೇಸರ ಸುಮಾರು ನಾಲ್ಕು ವರ್ಷ ಎಳೆದುಕೊಂಡು ಹೋಯಿತು. ಕಂಪ್ಲೀಟ್ ಆಗಿ ಮಾತು ಬಿಟ್ವಿ. ಆ ಗ್ಯಾಪ್ ನಲ್ಲಿ ಶರಣ್ ನಾಲ್ಕೈದು ಸಿನಿಮಾ ಮಾಡಿದ. ಆದರೆ ಶರಣ್ ಆಯ್ಕೆ ಮಾಡಿಕೊಂಡಿದ್ದ ಕೆಲವು ಚಿತ್ರಗಳು ಸರಿ ಇರಲಿಲ್ಲ. ಆಗ ಶರಣ್ ಕರಿಯರ್ ಶೇಕ್ ಆಯ್ತು ಎಂಬ ಭಾವನೆ ಬಂತು'' - ತರುಣ್ ಸುಧೀರ್

ಒಂದು ದಿನ ಮೆಸೆಜ್ ಮಾಡಿದ

ಒಂದು ದಿನ ಮೆಸೆಜ್ ಮಾಡಿದ

''ಹೀಗೆ ಒಂದು ದಿನ ತರುಣ್ ಸುಧೀರ್, ಶರಣ್ ಗೆ ನಾನು ನಿನ್ನನ್ನು ಭೇಟಿ ಮಾಡಬೇಕು ಎಂದು ಮೆಸೆಜ್ ಬರುತ್ತೆ. ಅಚ್ಚರಿ, ಸರ್ಪ್ರೈಸ್, ಖುಷಿಯಿಂದ ಹುಂ ಅಂತ ಹೋದ್ವಿ. ನಾನು ಅಂದು ಹೆಜ್ಜೆ ಇಡುತ್ತಿದ್ದ ಹಾದಿ ಸರಿ ಇರಲಿಲ್ಲ ಎಂಬುದನ್ನ ಹೇಳಲು ಆತ ಬಂದಿದ್ದ'' ಎಂದು ನಟ ಶರಣ್ ಹೇಳಿದರು. ಅಲ್ಲಿಂದ ಮತ್ತೆ ದೋಸ್ತಿ ಮುಂದುವರಿಸಿದ ಇಬ್ಬರು, ಕೊನೆಗೂ ಆ ಹಾಡು ಯಾವುದು ಎಂದು ಹೇಳಿಲ್ಲ.

More from Filmibeat

English summary
Weekend with ramesh 4: Kannada actor sharan participated in Weekend with ramesh 4. he shared about Tarun Sudhir his Friendship Break Up story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X