Don't Miss!
- News Lok Sabha Election 2024: ಟಿಕೆಟ್ ಹಂಚಿಕೆಯ ಬಳಿಕ ಬಿಜೆಪಿಯ ಮುಂದೆ ಹೊಸ-ಹೊಸ ಸವಾಲುಗಳು
- Automobiles ಎಲೆಕ್ಟ್ರಿಕ್ ಲೋಕಕ್ಕೆ ಎಸ್ಯುವಿ ದೈತ್ಯನ ಎಂಟ್ರಿ: ಇನ್ನು ಉಳಿದ ಕಾರುಗಳನ್ನು ದೇವರೇ ಕಾಪಾಡಬೇಕು!
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Finance ಬೆಂಗಳೂರು-ತುಮಕೂರು ನಮ್ಮ ಮೆಟ್ರೋ ಯೋಜನೆ: ಬರಲಿವೆ 19 ಎತ್ತರದ ನಿಲ್ದಾಣಗಳು
- Technology iPhone: ಆಪಲ್ ಅಂತಿಮವಾಗಿ ಐಫೋನ್ 12 ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿಯೇ ಬಿಟ್ಟಿತು! ಏನದು?
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೆಂಗಳೆಯರ ಮನಗೆದ್ದ ಶ್ರುತಿಯ ಚಿತ್ತ ಈಗ ತಮಿಳರ ಮೇಲೆ
ಇದು ಗೊತ್ತಾಗುತ್ತಿದ್ದಂತೆ ಅನೇಕ ಕಲಾವಿದರು ಕಿರುತೆರೆಗೆ ಕಾಲಿಟ್ಟಿದ್ದಾರೆ. ಈಗ ಶ್ರುತಿ ಸರದಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನೇ ಆಳಿದ ಬೆರಳಣಿಕೆ ನಟಿಮಣಿಯರಲ್ಲಿ ಶ್ರುತಿ ಕೂಡಾ ಒಬ್ಬರು.
ತಮ್ಮ
ಅಳುಮುಂಜಿ
ಪಾತ್ರಗಳಿಂದಲೇ
ನಾಡಿನಾದ್ಯಂತ
ಹೆಂಗಳೆಯರ
ಮನಗೆದ್ದ
ಶ್ರುತಿ
ಆಗೊಮ್ಮೆ
ಈಗೊಮ್ಮೆ
ಎಂಬಂತೆ
ಈಗಲೂ
ಸಿನಿಮಾಗಳಲ್ಲಿ
ಕಾಣಿಸಿಕೊಳ್ಳುತ್ತಲೇ
ಇದ್ದಾರೆ.
ಅವರ
ಸಹೋದರ
ಶರಣ್
ನಿರ್ಮಾಣದ
Rambo
ಚಿತ್ರದಲ್ಲಿ
ಶ್ರುತಿ
ಜಿಲ್ಲಾಧಿಕಾರಿಯಾಗಿ
ಕಾಣಿಸಿಕೊಂಡಿದ್ದಾರೆ.
ಅದು
ಇತ್ತೀಚಿನ
ಉದಾಹರಣೆ.
ಆ ಚಿತ್ರ ಇನ್ನೇನು ಬಿಡುಗಡೆಯಾಗಬೇಕಷ್ಟೇ. ಸನ್ ಟಿವಿಯಲ್ಲಿ ಪ್ರಸಾರ ಕಾಣಲಿರುವ 'ಕಾರ್ತಿಗೈ ಪೆಣ್ಣಳ್' ಧಾರಾವಾಹಿಗಾಗಿ ಶ್ರುತಿ ಇದೇ ಮೊಟ್ಟ ಮೊದಲಬಾರಿಗೆ ಕಿರುತೆರೆಯಲ್ಲಿ ಬಣ್ಣ ಹಚ್ಚಿದ್ದಾರೆ.
ಜುಲೈ ಮೂವತ್ತನೇ ತಾರೀಕಿನಿಂದ ಸನ್ ಟಿವಿಯಲ್ಲಿ ಈ ಧಾರವಾಹಿ ಈಗಾಗಲೇ ಪ್ರಸಾರ ಆರಂಭವಾಗಿದೆ. ಶ್ರುತಿ ತಮಿಳರಿಗೆ ಅಪರಿಚಿತ ಮುಖವೇನಲ್ಲ. ಈ ಹಿಂದೆ ಕೆ ಬಾಲಚಂದರ್ ನಿರ್ದೇಶನದ ಕಲ್ಕಿ ಚಿತ್ರಕ್ಕಾಗಿ ಶ್ರುತಿ ತಮಿಳಿಗೆ ವಲಸೆ ಹೋಗಿದ್ದರು.
ಅದರಲ್ಲಿನ ಪಾತ್ರ ಶ್ರುತಿಗೆ ತಮಿಳುನಾಡಿನಾದ್ಯಂತ ಜನಪ್ರಿಯತೆ ತಂದು ಕೊಟ್ಟಿತ್ತು ಅಲ್ಲದೆ ಆಕೆಗೆ ತಮಿಳುನಾಡು ರಾಜ್ಯ ಸರಕಾರದ ಅವಾರ್ಡ್ ಕೂಡಾ ಬಂದಿತ್ತು. ಈ ಧಾರಾವಾಹಿಯ ಮೂಲಕ ಮತ್ತೊಮ್ಮೆ ಶ್ರುತಿ ತಮಿಳು ಪ್ರೇಕ್ಷಕರಿಗೆ ಎದುರಾಗುತ್ತಿದ್ದಾರೆ.