Don't Miss!
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- News India Unemployment: ದೇಶದಲ್ಲಿ ಯುವ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಳ: ಬೆಚ್ಚಿಬೀಳಿಸುವ ವರದಿ ಬಹಿರಂಗ!
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Automobiles ಜನಪ್ರಿಯ ಕಂಪನಿಗಳಿಂದ ಮುಂಬರುವ ಪುಟ್ಟ ಕಾರುಗಳಿವು.. ಇವೇ ಮಿಡಲ್ ಕ್ಲಾಸ್ ಜನರ ಫೇವರಿಟ್ ಆಗುವುದು ಪಕ್ಕಾ!
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Technology iPhones: ಬೇಕಿತ್ತಾ ಇದೆಲ್ಲ? ನಕಲಿ ಐಫೋನ್ ಮೂಲಕ ಆಪಲ್ಗೆ ಪಂಗನಾಮ ಹಾಕಿದವನಿಗೆ ಜೈಲೂಟ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುವರ್ಣ ಸುದ್ದಿ ವಾಹಿನಿಯಿಂದ ಹೊಸ ಸ್ಟುಡಿಯೋ
ನಂತರ ನಡೆದ ಪ್ಯಾನಲ್ ಚರ್ಚೆಯಲ್ಲಿ ಸುವರ್ಣ 24x7 ಸುದ್ದಿ ವಾಹಿನಿಯ ಮುಖ್ಯಸ್ಥರಾದ ವಿಶ್ವೇಶ್ವರ ಭಟ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ನಟಿ ತಾರಾ, ನಟ ರಮೇಶ್ ಅರವಿಂದ್ ಭಾಗವಹಿಸಿದ್ದರು. ದೇಶದ ಅತ್ಯುನ್ನತ ಸ್ಟುಡಿಯೋಗಳಲ್ಲಿ ಇದೂ ಒಂದು ಎಂಬ ಮಾತನ್ನು ಎಲ್ಲರೂ ಈ ವೇಳೆ ಸ್ಪಷ್ಟಪಡಿಸಿದರು.
ಹೊಸ ಸ್ಟುಡಿಯೋ ಉದ್ಘಾಟನೆ ನಿಮಿತ್ತ ಇಂದು ಇಡೀ ದಿನ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸ್ಯಾಂಡಲ್ ವುಡ್ ತಾರೆಗಳಾದ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ತಾರಾ, ಭಾವನಾ ಹಾಗೂ ಉಪೇಂದ್ರ ಅವರುಗಳು ಇಂದಿನ ವಿಶೇಷ ಸುದ್ದಿಯನ್ನು ಓದಲಿದ್ದಾರೆ. ಅವುಗಳ ಮಧ್ಯೆ ಎಂದಿನ ಕಾರ್ಯಕ್ರಮಗಳು ಹೊಸ ರೂಪುರೇಷೆಯೊಂದಿಗೆ ಪ್ರಸಾರವಾಗಲಿರುವುದು ವಿಶೇಷ.
ಅಂದಹಾಗೆ, ಸುವರ್ಣ ವಾಹಿನಿಯ ಸ್ಟುಡಿಯೋ ಮುಂಭಾಗದಲ್ಲಿ 'ಬ್ರೇಕಿಂಗ್ ನ್ಯೂಸ್' ಪ್ರಸಾರ ವೀಕ್ಷಣೆ ಲಭ್ಯವಿದೆ. ಅತ್ಯುನ್ನತ ತಂತ್ರಜ್ಞಾನ ಆಧಾರಿತ ಹೊಸ ಸ್ಟುಡಿಯೋದ ಮೊದಲ ಮಹಡಿಯಲ್ಲಿ 'ಕನ್ನಡಪ್ರಭ' ಪತ್ರಿಕೆಯ ಕಚೇರಿ ಇದ್ದು ಎರಡನೇ ಮಹಡಿಯಲ್ಲಿ ಸುವರ್ಣ ಸುದ್ದಿ ವಾಹಿನಿಯ ಕಚೇರಿ ಇದೆ. 'ನಾವು ಬದಲಾಗಿದ್ದೇವೆ, ಬದಲಾವಣೆ ಜಗದ ನಿಯಮ' ಎಂಬ ಘೋಷವಾಕ್ಯದಡಿ ಸುವರ್ಣ ಸುದ್ದಿ ವಾಹಿನಿ ಮುಂದೆ ಕಾರ್ಯ ನಿರ್ವಹಿಸಲಿದೆ. (ಒನ್ ಇಂಡಿಯಾ ಕನ್ನಡ)