Don't Miss!
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Automobiles ದೊಡ್ಡ ಸಿಗ್ನಲ್ ಕೊಟ್ಟ ಫೋರ್ಡ್: ಭಾರತಕ್ಕೆ ಬರುತ್ತಿದೆ ಹೊಸ ಎಸ್ಯುವಿ... ಟಾಟಾಗೆ ಆತಂಕ ಶುರು
- Finance Gold rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Lifestyle ಹೊಟ್ಟೆಯೇ ಇಲ್ಲದೆ ಬದುಕಿದ್ದ ನತಾಶಾ ದಿಡ್ಡಿ ನಿಧನ...! ಈಕೆ ಯಾರು ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಿಗ್ ಬಾಸ್ ಸೀಸನ್ 2' ಶೋಗೆ ಸ್ವಾಮಿ ನಿತ್ಯಾನಂದ?
ಕನ್ನಡದ ಬಿಗ್ ರಿಯಾಲಿಟಿ ಶೋ 'ಬಿಗ್ ಬಾಸ್ 2'ಗೆ ವೇದಿಕೆ ಸಿದ್ಧವಾಗುತ್ತಿದೆ. ಈ ಬಾರಿ ಯಾರೆಲ್ಲಾ ಪ್ರಮುಖರು ಶೋನಲ್ಲಿ ಇರುತ್ತಾರೆ ಎಂಬ ಬಗ್ಗೆ ಕುತೂಹಲವಂತೂ ಇದ್ದೇ ಇದೆ. ಈಗಾಗಲೆ ಹಲವಾರು ಹೆಸರುಗಳು ಕೇಳಿಬಂದಿದ್ದು ಈಗ ಹೊಸ ಸ್ವಾಮೀಜಿಯ ಹೆಸರು ಕೇಳಿಬಂದಿದೆ.
ಮೊದಲ ಆವೃತ್ತಿಯಲ್ಲಿ ಇಬ್ಬರು ಸ್ವಾಮೀಜಿಗಳಾದ ಬ್ರಹ್ಮಾಂಡ ಗುರೂಜಿ ಹಾಗೂ ಕಾಳಿಮಠದ ರಿಷಿಕುಮಾರ ಸ್ವಾಮೀಜಿ ಇಬ್ಬರೂ ಕಾಣಿಸಿಕೊಂಡು ಕಿರುತೆರೆ ವೀಕ್ಷಕರಿಗೆ ಸಖತ್ ಮನರಂಜನೆ ಕೊಟ್ಟಿದ್ದರು. ಈಗ ಬಿಗ್ ಬಾಸ್ 2ಗೆ ಕೇಳಿಬಂದಿರುವ ಸ್ವಾಮೀಜಿ ಹೆಸರು ಬಿಡದಿಯ ನಿತ್ಯಾನಂದ. ['ಬಿಗ್ ಬಾಸ್ 2' ಶೋನಲ್ಲಿ ಇವರೆಲ್ಲಾ ಇರ್ತಾರಾ?]
ಹಲವಾರು ಆರೋಪ, ಅನೇಕ ಅನಿರೀಕ್ಷಿತ ಘಟನೆಗಳ ಕಾರಣ ಸ್ವಾಮಿ ನಿತ್ಯಾನಂದ ಅವರು ವಿವಾದಾಸ್ಪದ ಸ್ವಾಮಿ ಎನ್ನಿಸಿಕೊಂಡಿದ್ದಾರೆ. ಈಗ ಅವರು ಅಷ್ಟೋ ಇಷ್ಟೋ ರಿಲ್ಯಾಕ್ಸ್ ಆಗಲು 'ಬಿಗ್ ಬಾಸ್' ಶೋ ಅವರ ಪಾಲಿಗೆ ಹೇಳಿ ಮಾಡಿಸಿದಂತಿದೆ.
ಬಿಗ್ ಬಾಸ್ 2 ಶೋನಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್, ರಾಗಿಣಿ, ಜಗ್ಗೇಶ್, ರೇಣುಕಾಚಾರ್ಯ, ಪ್ರೇಮಕುಮಾರಿ (ರಾಮದಾಸ್ ಪ್ರಕರಣ), ಮಾಸ್ಟರ್ ಆನಂದ್, ರಾಧಿಕಾ ಕುಮಾರಸ್ವಾಮಿ, ಸುಮನ್ ರಂಗನಾಥ್ ಮುಂತಾದವರ ಹೆಸರುಗಳು ಕೇಳಿಬಂದಿವೆ.