Just In
- 19 min ago
ಹಮ್ಮರ್ ಕಾರ್ ಮಾರಿದ್ದೇಕೆ ದರ್ಶನ್? ಮತ್ತೊಂದು ದುಬಾರಿ ಕಾರಿನ ಮೇಲೆ ಕಣ್ಣಿಟ್ಟ ಡಿ ಬಾಸ್
- 34 min ago
ಖರ್ಚು ಹೆಚ್ಚು, ಸಾಕಷ್ಟು ಸಾಲ ಮಾಡಿಕೊಂಡಿದ್ದೇನೆ: ದರ್ಶನ್
- 44 min ago
#MyGuru ಅಭಿಯಾನ: ನನ್ನ ಅಣ್ಣ ನನ್ನ ಗುರು ಎಂದು ಚಿರು ಸ್ಮರಿಸಿದ ಧ್ರುವ ಸರ್ಜಾ
- 1 hr ago
ಐಟಿ ಅಧಿಕಾರಿಗಳು ನನ್ನ ಮನೆಯಲ್ಲಿ ಮೂರು ವಸ್ತುಗಳಿಗಾಗಿ ಹುಡುಕಾಡಿದರು: ತಾಪ್ಸಿ
Don't Miss!
- Lifestyle
ಈ ವಿಚಾರ ಕೇಳಿದ್ರೆ ಮುಂದೆಂದೂ ನೀವು ಪಪ್ಪಾಯ ಬೀಜವನ್ನು ಬಿಸಾಡಲಾರರಿ!
- News
ತೆರೆಮರೆಯ ಸಾಧಕರಿಗೆ ಮಾ.7ರಂದು ಪ್ರಣಾಮ್ ಕಾರ್ಯಕ್ರಮ
- Sports
ಐಪಿಎಲ್ 2021: ಆರಂಭ-ಅಂತ್ಯ, ತಾಣಗಳು ಸಂಪೂರ್ಣ ಮಾಹಿತಿ
- Automobiles
ಆರ್ 15 ಬೈಕಿನ ಎಂಜಿನ್ನೊಂದಿಗೆ ಹೊಸ ಬಣ್ಣದ ಆಯ್ಕೆಯಲ್ಲಿ ಬಿಡುಗಡೆಗೊಂಡ ಯಮಹಾ ಮ್ಯಾಕ್ಸಿ ಸ್ಕೂಟರ್
- Education
WCD Ballari Recruitment 2021: ಅಂಗನವಾಡಿಯಲ್ಲಿ 170 ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಏರ್ಬ್ಯಾಗ್ ಕಡ್ಡಾಯಗೊಳಿಸಿದ ಹಿನ್ನೆಲೆ: ಹೊಸ ಕಾರುಗಳ ಬೆಲೆ ಹೆಚ್ಚಳವಾಗಲಿದೆ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಶನಿವಾರ-ಭಾನುವಾರ ರಾತ್ರಿ 9ಕ್ಕೆ ಉದಯ ಸಿಂಗರ್ ಜ್ಯೂನಿಯರ್ಸ್ ಗ್ರ್ಯಾಂಡ್ ಫಿನಾಲೆ
ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಮನೋ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ 'ಉದಯ ಸಿಂಗರ್ ಜ್ಯೂನಿಯರ್ಸ್' ಈಗ ಕೊನೆಯ ಘಟ್ಟಕ್ಕೆ ತಲುಪಿದೆ. ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ 'ಉದಯ ಸಿಂಗರ್ ಜ್ಯೂನಿಯರ್ಸ್' ಫಿನಾಲೆ ಪ್ರಸಾರವಾಗಲಿದೆ.
16 ಮಕ್ಕಳಿದ್ದ ಸಿಂಗಿಂಗ್ ಶೋ ಫಿನಾಲೆಯ ಹೊತ್ತಿಗೆ 5 ಮಕ್ಕಳಿಂದ ಕೂಡಿದ್ದು ಅದರಲ್ಲಿ ಒಬ್ಬರನ್ನು 'ಉದಯ ಸಿಂಗರ್ ಜ್ಯೂನಿಯರ್' ಎಂದು ಘೋಷಿಸಲಾಗುವುದು. ಸುಮಾರು ದಿನಗಳಿಂದ ನಡೆದು ಬಂದ ಶೋನಲ್ಲಿ ವಿಭಿನ್ನ ರೀತಿಯ ಸಂಚಿಕೆಗಳು ಪ್ರಸಾರವಾದವು.
ಅಲ್ಲದೆ ಚಿತ್ರರಂಗದ ಹೆಸರಾಂತ ನಟ ನಟಿಯರಾದ ಮಾಲಾಶ್ರೀ, ಪ್ರೇಮಾ, ಚೇತನ್, ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್, ಕಾರುಣ್ಯಾ ರಾಮ್ ಮತ್ತು ಸಂಗೀತ ಕ್ಷೇತ್ರದ ಅರ್ಚನಾ ಉಡುಪ, ಪ್ರವೀಣ್.ಡಿ ರಾವ್, ಕೆ.ಕಲ್ಯಾಣ್, ಅನುರಾಧಾ ಭಟ್, ಶ್ರೀಧರ್ ಸಂಭ್ರಮ್, ಹೆಸರಾಂತ ನಿರ್ದೇಶಕರುಗಳಾದ ಭಾರ್ಗವ ಮತ್ತು ಯೋಗರಾಜ್ ಭಟ್ ಭಾಗವಹಿಸಿ ಮಕ್ಕಳಿಗೆ ಶುಭ ಕೋರಿದ್ದನ್ನು ಇಲ್ಲಿ ಸ್ಮರಿಸಬಹುದು.
ಹೀಗೆ ನಡೆದುಕೊಂಡು ಈ ಸಿಂಗಿಂಗ್ ರಿಯಾಲಿಟಿ ಶೋ ಈಗ ಫೈನಲ್ ಹಂತ ತಲುಪಿದ್ದು ಗುರುಕಿರಣ್, ತನುಶ್ ರಾಜ್, ನಿಹಾರಿಕಾ, ಸಿರಿ ಮತ್ತು ವೀಕ್ಷಣ್ ಪಿನಾಲೆ ಲಿಸ್ಟ್ ನಲ್ಲಿದ್ದಾರೆ.
ಈ ಫಿನಾಲೆಯ ನಿಯಮದ ಪ್ರಕಾರ ಶಾಸ್ತ್ರೀಯ ಸಂಗೀತ, ಹೆಸರಾಂತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮತ್ತು ಡಾ.ರಾಜಕುಮಾರ್ ಹಿಟ್ಸ್ ಎಂದು 3 ಸುತ್ತಗಳಿದ್ದು ಪ್ರತಿಯೊಂದು ಸುತ್ತಿನಲ್ಲಿ ಒಬ್ಬೊಬ್ಬರು ಎಲಿಮಿನೇಟ್ ಅಗುತ್ತಾರೆ. ಆದರೆ ಇಲ್ಲಿ ರವಿಚಂದ್ರನ್ ಮತ್ತೊಂದು ಸುತ್ತಾಗಿ ಜುಗಲ್ ಬಂದಿಯನ್ನು ಆಯ್ಕೆ ಮಾಡುತ್ತಾರೆ. ಅದು ಯಾಕೆ.? ಎಂಬುದನ್ನು ಕಾದು ನೋಡಬೇಕಾಗಿದೆ. ಹಾಗಾದರೆ ಈ ಐವರಲ್ಲಿ ಯಾರಿಗೆ ದೊರೆಯುತ್ತದೆ ಉದಯ ಸಿಂಗರ್ ಪಟ್ಟ?
ಈ ಗ್ರ್ಯಾಂಡ್ ಫಿನಾಲೆಯಲ್ಲಿ ವಿಕ್ಟರಿ ಸ್ಟಾರ್ ಶರಣ್ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. 'ರ್ಯಾಂಬೋ' ಚಿತ್ರದ ''ಕಣ್ಣಾ ಮುಚ್ಚೆ ಕಾಡೆ ಗೂಡೆ.." ಹಾಡು ಹಾಡಿ ಎಲ್ಲರನ್ನು ರಂಜಿಸಿದ್ದಾರೆ.
'ಉದಯ ಸಿಂಗರ್ ಜ್ಯೂನಿಯರ್ಸ್' ಗ್ರ್ಯಾಂಡ್ ಫಿನಾಲೆ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.