Just In
- 9 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- 9 hrs ago
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- 10 hrs ago
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- 12 hrs ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
Don't Miss!
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಲಾರಾ ದತ್ತ ಜೊತೆ ಮಹೇಶ್ ಭೂಪತಿ ಎರಡನೆ ಮದುವೆ
ಖ್ಯಾತ ಟೆನ್ನಿಸ್ ತಾರೆ ಮಹೇಶ್ ಭೂಪತಿ ಎರಡನೆ ಮದುವೆ ಬಾಲಿವುಡ್ ತಾರೆ ಲಾರಾ ದತ್ತ ಜೊತೆ ನಡೆಯಲಿದೆ. ಗೋವಾದ ಚರ್ಚ್ವೊಂದರಲ್ಲಿ ಇವರಿಬ್ಬರು ಸರಳವಾಗಿ ಮದುವೆ ಮಾಡಿಕೊಂಡು ಬಳಿಕ ಫೆಬ್ರವರಿಯಲ್ಲಿ ಸಾಂಪ್ರಾದಾಯಿಕ ರೀತಿಯಲ್ಲಿ ಮದುವೆ ನಡೆಯಲಿದೆ ಎನ್ನುತ್ತವೆ ಮೂಲಗಳು.
ತಾರೆ ಲಾರಾ ದತ್ತ ಅವರ ವಕ್ತಾರರ ಪ್ರಕಾರ, ಮದುವೆಗೆ ಮಾತುಕತೆ ನಡೆಯುತ್ತಿದ್ದು ದಿನಾಂಕ ಇನ್ನೂ ಅಂತಿಮವಾಗಿಲ್ಲ ಎಂದಿದ್ದಾರೆ. ಫೆಬ್ರವರಿ ತಿಂಗಳವರೆಗೂ ಕಾದರೆ ಎಲ್ಲ ವಿವರಗಳು ಲಭ್ಯವಾಗುತ್ತವೆ ಎನ್ನುತ್ತಾರೆ ಅವರು.
ಅಕ್ಟೋಬರ್ 2009ರಲ್ಲಿ ಶ್ವೇತಾ ಜೈಶಂಕರ್ ರನ್ನು ಮದುವೆಯಾಗಿದ್ದ ಟೆನ್ನಿಸ್ ಪಟು ಮಹೇಶ್ ಭೂಪತಿ, ವಿವಾಹ ವಿಚ್ಛೇದನವನ್ನು ಬಯಸಿದ್ದರು. ಆದರೆ, ಪರಸ್ಪರ ಒಪ್ಪಿಗೆ ಸಿಗದೇ ಕೇಸ್ ವಿಳಂಬವಾಗಿತ್ತು. ಆಗಲೇ ಮಹೇಶ್ ಭೂಪತಿ ಹೆಸರು ನಟಿ ಲಾರಾ ದತ್ತಾರ ಜೊತೆ ಕೇಳಿಬಂದಿತ್ತು.
ಮಹೇಶ್ ಹಾಗೂ ಶ್ವೇತಾ ವಿಚ್ಛೇದನ ಕೋರಿ ಕಳೆದ ವರ್ಷವೇ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಬಾಂದ್ರಾ ಕುಟುಂಬ ನ್ಯಾಯಲಯ ಪರಸ್ಪರ ಒಪ್ಪಿಗೆ ಇರುವುದು ಕಂಡ ಬಂದ ನಂತರ ಜುಲೈ 15, 2010ರಲ್ಲಿ ವಿವಾಹ ವಿಚ್ಛೇದನಕ್ಕೆ ಅನುಮತಿ ನೀಡಿತ್ತು. ವಿಚ್ಛೇದನ ಪಡೆದ ಸಂದರ್ಭದಲ್ಲಿ ಭೂಪತಿ ಮೇಲೆ ಶ್ವೇತಾ ಆಕ್ರೋಶ ವ್ಯಕ್ತಪಡಿಸಿದ್ದರು.
"ನನ್ನನ್ನು ವಂಚಿಸಿದಂತೆ ಒಂದು ದಿನ ಲಾರಾಳನ್ನು ಮಹೇಶ್ ವಂಚಿಸುತ್ತಾನೆ. ಆಗಷ್ಟೆ ಅವನ ಬಣ್ಣ ಬಯಲಾಗುತ್ತದೆ. ಮಹೇಶ್ ನನ್ನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿರಲಿಲ್ಲ. ಆತನ ಜೀವನದಲ್ಲಿ ನಾನು ಮತ್ತೊಂದು ಟ್ರೋಫಿಯಾಗಿ ಉಳಿದೆ ಅಷ್ಟೆ" ಎಂದು ಶ್ವೇತಾ ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ.