ಮುಂಬೈನ ಶಾರುಖ್ ಬಂಗಲೆ ಮೇಲೆ ದಾಳಿ

ಘಟನೆಯಿಂದ ಗಾಬರಿಯಾದ ಶಾರುಖ್ ಖಾನ್ ಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ದುಷ್ಕರ್ಮಿಗಳು ಎಸೆದ ಬಾಟಲಿ ಮತ್ತಿತ್ತರ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಡೆಪ್ಯುಟಿ ಕಮೀಷನರ್ ನಿಕೇಟ್ ಕೌಶಿಕ್ ತಿಳಿಸಿದ್ದಾರೆ.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ.ಘಟನೆ ಸಂಭವಿಸಿದಾಗ ಶಾರುಖ್ ಮನೆಯಲ್ಲಿರಲಿಲ್ಲ. ದುಷ್ಕರ್ಮಿಗಳನ್ನು ಹಿಡಿಯಲು ಹಿಂಬಾಲಿಸಿದ ಶಾರುಖ್ ಭದ್ರತಾ ಸಿಬ್ಬಂದಿ ವಿಫಲರಾಗಿದ್ದಾರೆ. ಶಾರುಖ್ ಖಾನ್ ರ ಹೊಸ ಚಿತ್ರ 'ಬಿಲ್ಲೂ ಬಾರ್ಬರ್' ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
(ಏಜೆನ್ಸೀಸ್)
ಕೆಟ್ಟ ಚಿತ್ರಗಳಿಗೆ ಕಲ್ಲೆಸೆದು ಪಾಠ ಕಲಿಸಿ: ರಾಜೇಶ್
mumbai ಮುಂಬೈ ಬಾಲಿವುಡ್ bollywood ವಿವಾದ shahrukh khan billu barber bandra house attack ಶಾರುಖ್ ಖಾನ್ ಬಿಲ್ಲು ಬಾರ್ಬರ್ ಬಾಂದ್ರಾ


Click it and Unblock the Notifications