Don't Miss!
- Finance Bengaluru Suburban Rail Project: ದೊಡ್ಡಜಾಲದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ರೈಲು ಸಂಪರ್ಕ, ವಿವರ
- Automobiles Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೂರೈವತ್ತು ಕೋಟಿ ಹಣ ನಿರಾಕರಿಸಿದ ಅಮೀರ್ ಖಾನ್
ಹೌದು, ಅಮೀರ್ ಖಾನ್ ಅವರಿಗೆ ಮೊದಲಿನಿಂದಲೂ ಸಾಮಾಜಿಕ ಜಾಗೃತಿ ಹಾಗೂ ಕಾಳಜಿ ಬಗ್ಗೆ ಯೋಚನೆ ಹೆಚ್ಚು. ಅದು ಈಗೀಗ ಇನ್ನೂ ಹೆಚ್ಚಾಗುತ್ತಿದೆ. ಅದಕ್ಕೂ ಉದಾಹರಣೆ ಇಲ್ಲಿದೆ. ಇತ್ತೀಚಿಗೆ ತಮ್ಮ 'ಸತ್ಯಮೇವ ಜಯತೆ' ಕಾರ್ಯಕ್ರಮವನ್ನು ನ್ಯಾಷನಲ್ ಕಮೀಷನ್ ಮೂಲಕ ಹಿಂದುಳಿದ ವರ್ಗಗಳಿಗೆ ತಲುಪಿಸಿದ ಅಮೀರ್, ಈ ಮೂಲಕ ಸಾಮಾಜಿಕ ಕಾಳಜಿ ಮೆರೆದಿದ್ದಾರೆ. ಬಳಿಕ ತಮಗೆ ಬಂದಿದ್ದ ರು. 150 ಕೋಟಿ ಜಾಹೀರಾತು ಒಪ್ಪಂದವನ್ನು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲ, ಸದ್ಯದಲ್ಲೇ 'ಸತ್ಯಮೇವ ಜಯತೆ' ಎರಡನೇ ಕಂತನ್ನು ಪ್ರಾರಂಭಿಸಲಿದ್ದಾರೆ ಅಮೀರ್ ಖಾನ್.
ಸುದ್ದಿಮೂಲಗಳ ಪ್ರಕಾರ, ನಮ್ಮ ಅಮೀರ್ ಖಾನ್ ಈ ನಡುವೆ ಸಾಮಾಜಿಕ ಪ್ರಜ್ಞೆ, ಜಾಗೃತಿ ಹಾಗೂ ಸೇವೆಯ ಬಗ್ಗೆ ಹೆಚ್ಚು ಮಾತನಾಡತೊಡಗಿದ್ದಾರೆ. ಅಷ್ಟೇ ಅಲ್ಲ, ಇಂತಹ ವಿಷಯಗಳಲ್ಲಿ ಭಾರಿ ಆಸಕ್ತಿ ತೋರಿಸುತ್ತಿರುವ ಅಮೀರ್, ನೊಂದವರಿಗೆ ತಮ್ಮ ಸಹಾಯಹಸ್ತವನ್ನೂ ಚಾಚುತ್ತಿದ್ದಾರೆ. ಹಿಂದುಳಿದ ಪ್ರದೇಶ ಹಾಗೂ ಜನಾಂಗಗಳಿಗೆ ಬೇಟಿ ನೀಡುತ್ತಿರುವ ಅಮೀರ್, ಈ ಬಗ್ಗೆ ಜನರಿಗೆ ತಿಳುವಳಿಕೆ ನೀಡುವ ಕಾಯಕದಲ್ಲೂ ನಿರತರಾಗಿದ್ದಾರೆ.
ಇದೀಗ ತಮ್ಮ ತಾಯಿಯೊಂದಿಗೆ ಹಜ್ ಯಾತ್ರೆಯನ್ನು ಕೈಗೊಂಡಿರುವ ಅಮೀರ್, ಹಿಂದೊಮ್ಮೆ ಈ ಬಗ್ಗೆ ತಮ್ಮ ತಾಯಿಗೆ ವಚನ ನೀಡಿದ್ದರಂತೆ. ಹೀಗಾಗಿ ಈಗ ತಾಯಿಯೊಂದಿಗೆ ಹಜ್ ಯಾತ್ರೆಯಲ್ಲಿರುವ ಅಮೀರ್ ಅವರಿಗೆ ಕೇವಲ ಸಾಮಾಜಿಕ ಕಾಳಜಿ ಮಾತ್ರವಲ್ಲ, ಕೌಟುಂಬಿಕ ಕಾಳಜಿಯೂ ಇದೆ ಎಂಬುದನ್ನು ಗಮನಿಸಬಹುದು. ಒಟ್ಟಿನಲ್ಲಿ ಈಗಾಗಲೇ ಮಿ ಪರ್ಫೆಕ್ಟ್ ಪಟ್ಟ ಗಳಿಸಿರುವ ಅಮೀರ್ ಇನ್ನೂ ಏನೇನು ಹೆಸರನ್ನು ಸಂಪಾದಿಸುತ್ತಾರೋ! (ಏಜೆನ್ಸೀಸ್)