Don't Miss!
- Sports ಆರ್ಸಿಬಿ ಸ್ಟಾರ್ ಶ್ರೇಯಾಂಕಾ ಪಾಟೀಲ್ ಬಗ್ಗೆ ನಿಮಗೆಷ್ಟು ಗೊತ್ತು?; ಶಿಕ್ಷಣ, ವಯಸ್ಸು, ಕೌಟುಂಬಿಕ ಹಿನ್ನೆಲೆ ಬಗ್ಗೆ ಮಾಹಿತಿ
- Finance ಲಕ್ಷ ಲಕ್ಷ ಕೋಟಿ ಇದ್ದರೂ ಇದೊಂದು ಕೊರತೆ ಈ ಶ್ರೀಮಂತನಿಗೆ ಕಾಡಿತ್ತು!
- Automobiles 28 ಲಕ್ಷದ ಬೈಕನ್ನು ಲೀಲಾಜಾಲವಾಗಿ ಓಡಿಸಿದ ಲೇಡಿ ಸೂಪರ್ಸ್ಟಾರ್: ಇಂತಹ ಗರ್ಲ್ಫ್ರೆಂಡ್ ಬೇಕೆಂದ ನೆಟ್ಟಿಗರು!
- Technology Samsung: ಸ್ಯಾಮ್ಸಂಗ್ನ ಮುಂಬರುವ ಫೋಲ್ಡಬಲ್ ಫೋನ್ ನೀವು ಊಹಿಸಲಾಗದ ಅಗ್ಗದ ಬೆಲೆಗೆ?
- News ಹನುಮಾನ್ ಚಾಲೀಸಾ ಗಲಾಟೆ: ತೇಜಸ್ವಿ ಸೂರ್ಯನಿಂದ ದ್ವೇಷ ಹರಡುವ ಯತ್ನ- ದಿನೇಶ್ ಗುಂಡೂರಾವ್
- Lifestyle ಬಾಯಲ್ಲಿ ನೀರು ತರಿಸುವ ಮಸಾಲೆ ಮೊಟ್ಟೆ ಬುರ್ಜಿ ಮಾಡೋದು ಹೇಗೆ.? ತುಂಬಾ ಸಿಂಪಲ್ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ ಕುಂದ್ರಾ ಕೇಸ್ನಲ್ಲಿ ನಟನ ಹೆಸರು ಲಿಂಕ್: ಕೋಪಗೊಂಡ ಮರಾಠಿ ನಟ
ಉದ್ಯಮಿ ರಾಜ್ ಕುಂದ್ರಾರ ಅಶ್ಲೀಲ ವಿಡಿಯೋ ನಿರ್ಮಾಣ ಪ್ರಕರಣದಲ್ಲಿ ಉಮೇಶ್ ಕಾಮತ್ ಎನ್ನುವ ಹೆಸರು ತಳುಕು ಹಾಕಿಕೊಂಡಿದೆ. ಆಶ್ಲೀಲ ವಿಡಿಯೋ ನಿರ್ಮಾಣ ಹಿನ್ನೆಲೆ ಉಮೇಶ್ ಕಾಮತ್ ಜೊತೆ ರಾಜ್ ಕುಂದ್ರಾ ವಾಟ್ಸಾಪ್ ಚಾಟ್ ನಡೆಸಿದ್ದು, ಅದರಲ್ಲಿ ಕೆಲವು ನಟಿಯರು ಹೆಸರು ಪ್ರಸ್ತಾಪವಾಗಿದೆ ಎಂಬ ಸುದ್ದಿ ವರದಿಯಾಗಿತ್ತು.
ಉಮೇಶ್ ಕಾಮತ್ ಹೆಸರು ಚರ್ಚೆಗೆ ಬಂದ ತಕ್ಷಣ ಮರಾಠಿ ನಟ ಉಮೇಶ್ ಕಾಮತ್ ಫೋಟೋಗಳು ವೈರಲ್ ಆಗಿದೆ. ಕೆಲವು ವೆಬ್ಸೈಟ್ ಹಾಗೂ ಸುದ್ದಿ ಮಾಧ್ಯಮಗಳು ಸಹ ರಾಜ್ ಕುಂದ್ರಾ ಜೊತೆಗೆ ಚಾಟ್ ಮಾಡಿರುವುದು ಮರಾಠಿ ನಟ ಉಮೇಶ್ ಕಾಮತ್ ಎನ್ನುವಂತೆ ಬಂಬಿಸಿವೆ.
ರಾಜ್ ಕುಂದ್ರಾ ಕೇಸ್ನಲ್ಲಿ ಮತ್ತೊಬ್ಬ ನಟಿಯ ಹೆಸರು, ಕನ್ನಡದಲ್ಲೂ ನಟನೆ
ಮಾಧ್ಯಮಗಳಲ್ಲಿ ಹಾಗು ಸೋಶಿಯಲ್ ಮಿಡಿಯಾದಲ್ಲಿ ತನ್ನ ಹೆಸರು ಮತ್ತು ಫೋಟೋಗಳನ್ನು ದುರ್ಬಳಕೆ ಮಾಡಲಾಗಿದೆ. ಅನಗತ್ಯವಾಗಿ ಈ ಕೇಸ್ನಲ್ಲಿ ನನ್ನ ಹೆಸರು ತಳುಕು ಹಾಕಲಾಗುತ್ತಿದೆ. ಪ್ರಕರಣದಲ್ಲಿ ಕೇಳಿ ಬರುತ್ತಿರುವ ಉಮೇಶ್ ಕಾಮತ್ ನಾನಲ್ಲ ಎಂದು ಮರಾಠಿ ನಟ ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಉಮೇಶ್ ಕಾಮತ್ ಮಾಧ್ಯಮಗಳ ಜವಾಬ್ದಾರಿಯನ್ನು ಪ್ರಶ್ನಿಸಿದ್ದಾರೆ. ''ಸುದ್ದಿ ವಾಹಿನಿಗಳು, ಮಾಧ್ಯಮಗಳು ಸಂಪೂರ್ಣವಾಗಿ ಬೇಜವಾಬ್ದಾರಿಯಿಂದ ನಡೆದುಕೊಂಡಿದೆ. ಈ ಘಟನೆಗೆ ಸಂಬಧಿಸಿದಂತೆ ಯಾವುದೇ ಪರಿಶೀಲನೆ ಮಾಡಿಲ್ಲ'' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ರಾಜ್ ಕುಂದ್ರಾ ಪ್ರಕರಣದೊಂದಿಗೆ ನನ್ನ ಹೆಸರು ತಳುಕು ಹಾಕಿ, ನನ್ನ ಫೋಟೋಗಳನ್ನು ಪ್ರಸಾರ ಮಾಡಿರುವುದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಅಪಾರ ಅವಮಾನ ಆಗಿದೆ. ಅನಗತ್ಯ ಊಹಾಪೋಹಗಳನ್ನು ಉಂಟು ಮಾಡಿದೆ. ರಾಜ್ ಕುಂದ್ರಾ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಹೆಸರು ಸಾಮಾನ್ಯವಾಗಿರುವುದರಿಂದ ಈ ರೀತಿ ಆಗಿದೆ'' ಎಂದು ಉಮೇಶ್ ಸ್ಪಷ್ಟನೆ ನೀಡಿದ್ದಾರೆ.
''ಎರಡು ದಶಕಗಳಿಂದ ಉದ್ಯಮದಲ್ಲಿದ್ದೇನೆ, ಇಷ್ಟು ವರ್ಷದ ನನ್ನ ವೃತ್ತಿ ಜೀವನದಲ್ಲಿ ಬಹಳ ಕಷ್ಟಪಟ್ಟು ಹೆಸರು ಪಡೆದಿದ್ದೇನೆ. ಈ ವಿಚಾರದಲ್ಲಿ ಮಾಧ್ಯಮಗಳು ಯಾವುದೇ ಪರಿಶೀಲನೆ ನಡೆಸದೆ ತೇಜೋವಧೆ ಮಾಡಿರುವುದರಿಂದ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ನಾನು ನಿರ್ಧರಿಸಿದ್ದೇನೆ.'' ಎಂದು ತಿಳಿಸಿದರು.
'ಅಸಂಭವ್', 'ಏಕ್ ಲಗ್ನಾಚಿ ತೀಸ್ರಾ ಗೋಷ್ಠ' ಅಂತಹ ಕಾರ್ಯಕ್ರಮಗಳಲ್ಲಿ ಉಮೇಶ್ ಕಾಮತ್ ಕಾಣಿಸಿಕೊಂಡಿದ್ದರು.