Don't Miss!
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದೇವಸ್ಥಾನಗಳಿಗೆ ಇನ್ನು ಮುಂದೆ ಹೋಗಲ್ಲ: ನಟ ಅಕ್ಕಿ
"ನಾನು ಪ್ರತಿಯೊಬ್ಬರಿಗೂ ಒಂದು ಪ್ರಶ್ನೆ ಕೇಳಬೇಕು ಎಂದಿದ್ದೇನೆ. ಇಷ್ಟಕ್ಕೂ 'ಮಂದಿರ' ಎಂದರೆ ಏನು ಅರ್ಥ ಎಂದು ಹೇಳಿ? ಮಂದಿರ ಎಂದರೆ ಮನಸ್ಸಿನ ಒಳಗೆ (ಮನ್ ಕಾ ಅಂದರ್) ಎಂದರ್ಥ. ಅಂದರೆ ದೇವರು ಎಲ್ಲೋ ಇಲ್ಲ. ನಮ್ಮ ಮನಸ್ಸಿನಲ್ಲೇ ಇದ್ದಾರೆ..."
"ಹಾಗಾಗಿ ತಾನು ಇನ್ನು ಮುಂದೆ ಮಂದಿರಗಳಿಗೆ ಭೇಟಿ ನೀಡಲ್ಲ. ಈ ಒಂದು ಸತ್ಯ ನನ್ನ ಅರಿವಿಗೆ ಬಂದದ್ದು ತೀರಾ ಇತ್ತೀಚೆಗೆ. ಅದೂ 'ಕಾಂಜಿ ವಿರುದ್ಧ್ ಕಾಂಜಿ' (ಓ ಮೈ ಗಾಡ್ ಹೆಸರಿನಲ್ಲಿ ರೀಮೇಕ್ ಆಗುತ್ತಿದೆ) ಎಂಬ ಚಿತ್ರ ನೋಡಬೇಕಾದರೆ ಈ ಸತ್ಯ ತನ್ನರಿಗೆ ಬಂತು ಎಂದಿದ್ದಾರೆ.
ಆ ಚಿತ್ರ ನೋಡಿದಷ್ಟು ಹೊತ್ತು ನಾನು ನಕ್ಕು ನಕ್ಕು ಸುಸ್ತಾದೆ. ಚಿತ್ರದ ಅಂತ್ಯ ಮಾತ್ರ ಅನಿರೀಕ್ಷಿತವಾಗಿದ್ದು ಚಕಿತಗೊಳಿಸಿತು. ಈ ಮುಂಚೆ ನಾನು ದೇವಾಲಗಳು ಹಾಗೂ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುತ್ತಿದೆ. ಇದಕ್ಕಾಗಿ ದೇಶದಾದ್ಯಂತ ಸಂಚರಿಸಿದ್ದೇನೆ.
ಪ್ರತಿ ಬಾರಿ ತೀರ್ಥಕ್ಷೇತ್ರಗಳಿಗೆ ಹೋದಾಗಲೂ ಏನಿಲ್ಲವೆಂದರೂ ರು.4 ರಿಂದ 5 ಲಕ್ಷ ಖರ್ಚಾಗುತ್ತಿತ್ತು. ಪ್ರಥಮ ದರ್ಜೆಯಲ್ಲಿ ಪ್ರಯಾಣಿಸುತ್ತಿದ್ದೆ, ಜೊತೆಗೆ ಸೆಕ್ಯುರಿಟಿ ಬೇರೆ ಇರುತ್ತಿತ್ತು. ಹೋದ ಕಡೆಗೆಲ್ಲಾ ಸಿಕ್ಕಾಪಟ್ಟೆ ದೇಣಿಗೆ ನೀಡುತ್ತಿದ್ದೆ. ಉಳಿದುಕೊಳ್ಳುತ್ತಿದ್ದದ್ದು ಐಶಾರಾಮಿ ಹೋಟೆಲ್ ಗಳಲ್ಲಿ.
ದೇವರು ಬೇರೆಲ್ಲೂ ಇಲ್ಲ. ನಮ್ಮಲ್ಲೇ ಇದ್ದಾನೆ, ಎಂಬ ಸತ್ಯ ಈಗ ನನಗೆ ಅರಿವಾಗಿದೆ. ಹಾಗಾಗಿ ದೇವಸ್ಥಾನಗಳಿಗೆ ಹೋಗುವುದನ್ನು ಬಿಟ್ಟಿದ್ದೇನೆ. ಅದೇ ಹಣವನ್ನು ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ನೀಡುತ್ತಿದ್ದೇನೆ. ತಮ್ಮ ನಿರ್ಮಾಣದ ಓ ಮೈ ಗಾಡ್ ಚಿತ್ರ ದೇವರ ಮಹತ್ವವನ್ನು ತಿಳಿಸುತ್ತದೆ. ನಾನೀಗ ಬದಲಾಗಿದ್ದೇನೆ ಎಂದಿದ್ದಾರೆ ಅಕ್ಷಯ್ ಕುಮಾರ್. ಅದಕ್ಕೆ ತಾನೆ ಹೇಳುವುದು ಮನೆಯೇ ಮಂತ್ರಾಲಯ...ಮನಸ್ಸೇ ದೇವಾಲಯ... (ಏಜೆನ್ಸೀಸ್)