Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಶ್ವರ್ಯ ಮೇಲೆ ಬಚ್ಚನ್ ಫ್ಯಾಮಿಲಿಗ್ಯಾಕೆ ಅಷ್ಟೊಂದು ಕೋಪ
ಬಾಲಿವುಡ್ ನ ಆದರ್ಶ ದಂಪತಿಗಳಾದ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಅವರ ನಡುವೆ ಏನೋ ಸರಿ ಇಲ್ವಂತೆ, ಹಾಗೆ-ಹೀಗೆ ಅಂತ ಮೊನ್ನೆ-ಮೊನ್ನೆ ಬಾಲಿವುಡ್ ಅಂಗಳದಲ್ಲಿ ಗುಸು-ಗುಸು ಕೂಡ ಶುರುವಾಗಿತ್ತು.
ಇದೀಗ ಅದಕ್ಕೆ ತಕ್ಕಂತೆ ಮತ್ತೊಂದು ಸುದ್ದಿ ಬಂದಿದೆ. ಬಚ್ಚನ್ ಕುಟುಂಬದ ಸೊಸೆ ನಟಿ ಐಶ್ವರ್ಯ ರೈ ಅವರ ಮೇಲೆ ಬಿಗ್ ಬಿ ಫ್ಯಾಮಿಲಿಯವರಿಗೆ ಒಂಥರಾ ಅಸಮಾಧಾನ ಇದೆ ಅನ್ನೋ ಗುಮಾನಿ ಬಿಟೌನ್ ನಲ್ಲಿ ಅಲ್ಲಲ್ಲಿ ಕೇಳಿಬರುತ್ತಿದೆ.[ವಿಸ್ಮಯ: ಐಶ್ ಗೆ ಅಭಿ ಮೇಲೆ ಯಾವತ್ತೂ ಕ್ರಷ್ ಆಗಿಲ್ವಂತೆ.!]
ಮದುವೆ-ಮಗು ಅಂತಾದ ಮೇಲೆ ಐಶ್ವರ್ಯ ರೈ ಅವರು 'ಜಸ್ಬಾ' ಸಿನಿಮಾ ಮಾಡಿದರು. ತದನಂತರ ಒಪ್ಪಿಕೊಂಡಿದ್ದು, ರಣಬೀರ್ ಕಪೂರ್ ಅವರ ಜೊತೆ 'ಏ ದಿಲ್ ಹೈ ಮುಷ್ಕಿಲ್'.
ಈ ಚಿತ್ರಕ್ಕೆ ನಿರ್ದೇಶಕ ಕರಣ್ ಜೋಹರ್ ಅವರು ಆಕ್ಷನ್-ಕಟ್ ಹೇಳಿದ್ದು, ನಟಿ ಅನುಷ್ಕಾ ಶರ್ಮಾ ಅವರು ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ.[ದಾಂಪತ್ಯದ ಬಿರುಕಿನ ಬಗ್ಗೆ ಸ್ಪಷ್ಟನೆ ನೀಡಿದ ಅಭಿಷೇಕ್ ಬಚ್ಚನ್]
ಅಂದಹಾಗೆ ಐಶ್ ಅವರ ಹೊಸ ಸಿನಿಮಾಗೂ ಇವರಿಬ್ಬರ ಸಂಸಾರದಲ್ಲಿ ಅಪಸ್ವರ ಏಳೋದಕ್ಕೂ ಒಂದು ಕಾರಣ ಇದೆ. 'ಏ ದಿಲ್ ಹೈ ಮುಷ್ಕಿಲ್' ಚಿತ್ರದಲ್ಲಿ ಐಶ್ ಅವರು ನಟಿಸುತ್ತಿದ್ದು, ಈ ಚಿತ್ರದಲ್ಲಿ ಕೊಂಚ ಹಸಿ-ಬಿಸಿ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋದು ಬಿಗ್ ಫ್ಯಾಮಿಲಿಯ ಕಣ್ಣು ಕೆಂಪಾಗಿಸಿದೆ.[ರಣಬೀರ್ ಜೊತೆ ಲಿಪ್ ಲಾಕ್ ನೋ ಎಂದ ಐಶ್ ಗೆ ಕರಣ್ ಮಾಡಿದ್ದೇನು?]
ಈ ಚಿತ್ರದಲ್ಲಿ ಐಶ್ವರ್ಯ ಮತ್ತು ರಣಬೀರ್ ಕಪೂರ್ ಅವರ ನಡುವೆ ಲಿಪ್ ಲಾಕ್ ದೃಶ್ಯವನ್ನು ಕರಣ್ ಜೋಹರ್ ಕ್ರಿಯೇಟ್ ಮಾಡಿದ್ದರು. ಆದರೆ ಅದಕ್ಕೆ ಐಶ್ ಒಪ್ಪದ ಕಾರಣ, ರೋಮ್ಯಾಂಟಿಕ್ ಆಗಿ ಚಾಕಲೇಟು ತಿನ್ನುವ ದೃಶ್ಯವನ್ನು ಸೇರಿಸಿದ್ದರು. ಇದೀಗ ಆ ದೃಶ್ಯ ಕೂಡ ಐಶ್ ಫ್ಯಾಮಿಲಿಗೆ ಹಿಡಿಸಲಿಲ್ಲವಂತೆ.[ಛೇ ಮುದ್ದು ಪತ್ನಿ ಐಶ್ವರ್ಯ ರೈಗೆ ಅಭಿಷೇಕ್ ಹೀಗೆ ಮಾಡಬಾರದಿತ್ತು]
ಯಾಕೋ ಆ ದೃಶ್ಯ ಕೂಡ ಸರಿ ಕಾಣುತ್ತಿಲ್ಲ ಎಂಬ ಕಾರಣಕ್ಕೆ ಕರಣ್ ಜೋಹರ್ ಅವರ ಬಳಿ ಆ ದೃಶ್ಯಕ್ಕೆ ಕತ್ತರಿ ಹಾಕುವಂತೆ ಬಚ್ಚನ್ ಫ್ಯಾಮಿಲಿ ತಿಳಿಸಿದ್ದಾರೆ ಎನ್ನಲಾಗುತ್ತಿದೆ. ಮೊದಲು ಒಪ್ಪದ ಕರಣ್ ನಂತರ ಬಿಗ್ ಬಿ ಅಮಿತಾಭ್ ಅವರ ಮಾತಿನ ಮೇರೆಗೆ ಆ ದೃಶ್ಯಕ್ಕೆ ಕತ್ತರಿ ಪ್ರಯೋಗ ಮಾಡಿದ್ದಾರೆ.