ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಹಾಸ್ಯ ಮಾಡಿದ ಕಮಿಡಿಯನ್ ವಿರುದ್ಧ ದೂರು

ಖ್ಯಾತ ಕಮಿಡಿಯನ್ ಶಾಮ್ ರಂಗೀಲಾ ವಿರುದ್ಧ ದೂರು ದಾಖಲಾಗಿದೆ. ನರೇಂದ್ರ ಮೋದಿ ಅವರ ಇಮಿಟೇಶನ್ ಮಾಡುವುದರಿಂದ ಖ್ಯಾತಿ ಗಳಿಸಿರುವ ಶ್ಯಾಮ್ ರಂಗೀಲಾ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಹಾಸ್ಯ ವಿಡಿಯೋ ಒಂದು ಮಾಡಿದ್ದರು. ಇದರಿಂದಾಗಿ ಇಕ್ಕಟ್ಟಿಗೆ ಸಿಲುಕಿದ್ದಾರೆ ಶ್ಯಾಮ್ ರಂಗೀಲಾ.

ಶ್ಯಾಮ್ ರಂಗೀಲಾ ಅವರು ಪೆಟ್ರೋಲ್ ಬಂಕ್‌ ನಲ್ಲಿ ನಿಂತು ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಮೋದಿ ಶೈಲಿಯಲ್ಲಿ ಭಾಷಣ ಮಾಡಿ ಅದನ್ನು ಯೂಟ್ಯೂಬ್, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.

ರಾಜಸ್ಥಾನದ ಶ್ರೀಗಂಗಾನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ನಿಂತು ಶ್ಯಾಮ್ ರಂಗೀಲಾ ಈ ವಿಡಿಯೋ ಮಾಡಿದ್ದು, ಪೆಟ್ರೋಲ್ ಪಂಪ್‌ನ ಏಜೆನ್ಸಿಯವರು, ಆ ಪೆಟ್ರೋಲ್ ಪಂಪ್ ಮಾಲೀಕನಿಗೆ ರಂಗೀಲಾ ವಿರುದ್ಧ ದೂರು ನೀಡುವಂತೆ ಸೂಚಿಸಿರುವ ಕಾರಣ ಪೆಟ್ರೋಲ್ ಬಂಕ್ ಮಾಲೀಕ ಸುರೇಂದ್ರ ಅಗರ್ವಾಲ್ ಸದಾರ್ ಪೊಲೀಸ್ ಠಾಣೆಯಲ್ಲಿ ಶ್ಯಾಮ್ ರಂಗೀಲ ವಿರುದ್ಧ ದೂರು ದಾಖಲಿಸಿದ್ದಾರೆ.

Complaint Against Comedian Shyam Rangeela For Mocking Petrol Price Hike

'ಮೇರೆ ಪ್ಯಾರೆ ದೇಶ್ ವಾಸಿಯೋ, ಇಂದು ರಾಜಸ್ಥಾನದ ಶ್ರೀಗಂಗಾನಗರದ ಜನರ ಎದೆ ಹೆಮ್ಮೆಯಿಂದ ಉಬ್ಬಿದೆ, ಕಾರಣ ನಾನು ಪೆಟ್ರೋಲ್‌ಗೆ ಇಂದು ಅದರ ನಿಜವಾದ ಮೌಲ್ಯವನ್ನು ದೊರಕಿಸಿಕೊಟ್ಟಿದ್ದೇನೆ. ಇಂದು ಇಲ್ಲಿ ಪೆಟ್ರೋಲ್ ಲೀಟರ್‌ಗೆ 100 ರೂ. ಆಗಿದೆ ಇಲ್ಲಿಯವರೆಗೆ ಯಾವ ಸರ್ಕಾರವೂ ಸಹ ಪೆಟ್ರೋಲ್‌ಗೆ ಅದರ ನಿಜವಾದ ಮೌಲ್ಯವನ್ನು ಕೊಡಿಸಿರಲಿಲ್ಲ, ಪೆಟ್ರೋಲ್‌ಗೆ ಅದರ ನಿಜವಾದ ಹಕ್ಕನ್ನು ನಾವು ಕೊಡಿಸಿದ್ದೇವೆ' ಎಂದು ತಮ್ಮ ಹಾಸ್ಯ ವಿಡಿಯೋನಲ್ಲಿ ಮೋದಿ ಶೈಲಿಯಲ್ಲಿ ಹೇಳಿದ್ದಾರೆ ಶ್ಯಾಮ್ ರಂಗೀನಾ.

'ಪೆಟ್ರೋಲ್ ಬೆಲೆಯನ್ನು ನೋಡಿ ಹೆಮ್ಮೆ ಪಡುವ ಅವಕಾಶ ಶ್ರೀಗಂಗಾನಗರಕ್ಕೆ ಮಾತ್ರವಲ್ಲ ದೇಶದ ಎಲ್ಲ ನಗರಗಳಿಗೂ ಕಲ್ಪಿಸುತ್ತೇನೆ. ದೇಶದ ಏಳಿಗೆಗಾಗಿ ನಾನು ಪೆಟ್ರೋಲ್ ಬೆಲೆ ಏರಿಸಿದ್ದೇನೆ, ಇದಕ್ಕೆ ನಿಮ್ಮ ಬೆಂಬಲ ಬೇಕಿದೆ. ಈ ಬಾರಿ ನೀವು ಬೆಂಬಲ ಕೊಟ್ಟಿರೆಂದರೆ ಮುಂದೆ ಡೀಸೆಲ್ ಅನ್ನೂ ದೇಶದ ಹಿತಕ್ಕಾಗಿ ನೂರು ರೂಪಾಯಿಗೆ ಸಿಗುವಂತೆ ನಾನು ಮಾಡುತ್ತೇನೆ' ಎಂದು ತಮಾಷೆಯಾಗಿ ಹೇಳಿದ್ದಾರೆ ಶ್ಯಾಮ್ ರಂಗೀಲಾ.

ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಮೋದಿ ಶೈಲಿಯ ಭಾಷಣ ಮಾಡಿದ ಶ್ಯಾಮ್ ರಂಗೀಲಾ ವಿಡಿಯೋದ ಅಂತ್ಯದಲ್ಲಿ ಸೈಕಲ್ ಏರಿ, ಮೋದಿ ಶೈಲಿಯಲ್ಲಿ ಕೈ ಬೀಸುತ್ತಾ ಹೋಗುತ್ತಾರೆ. ಈ ಹಾಸ್ಯಮಯ ವಿಡಿಯೋ ವಿರುದ್ಧ ಈಗ ದೂರು ದಾಖಲಾಗಿದೆ. ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶ್ಯಾಮ್ ರಂಗೀಲಾ, 'ನಾನು ಸುಳ್ಳು ಹೇಳಿಲ್ಲ' ಎಂದಿದ್ದಾರೆ.

ಇತ್ತೀಚೆಗೆ ಸಾಕಷ್ಟು ಕಮಿಡಿಯನ್‌ಗಳ ಮೇಲೆ ವಿವಿಧ ರೀತಿಯ ಪ್ರಕರಣಗಳು ದಾಖಲಾಗಿವೆ. ಕೆಲವೇ ದಿನಗಳ ಹಿಂದೆ ಸ್ಟ್ಯಾಂಡಪ್ ಕಮಿಡಿಯನ್ ಮುನಾವರ್ ಫಾರುಖಿಯನ್ನು ಪೊಲೀಸರು ಬಂಧಿಸಿದ್ದರು. ಹಲವು ದಿನಗಳ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.

Recommended Video

D BOSS ಲುಕ್ ನೋಡಿ ಹುಚ್ಚರಾದ ಅಭಿಮಾನಿಗಳು | Roberrt | Filmibeat Kannada

ಕುನಾಲ್ ಕಾಮ್ರಾ, ವೀರ್ ದಾಸ್, ಕೆನ್ನಿ ಸೆಬಾಸ್ಟಿಯನ್, ವರುಣ್ ಗ್ರೋವರ್‌ ಅವರುಗಳ ವಿರದ್ದವೂ ಪ್ರಕರಣಗಳು ದಾಖಲಾಗಿವೆ. ವಿಮಾನದಲ್ಲಿ ಅರ್ನಬ್ ಗೋಸ್ವಾಮಿಯನ್ನು ಪ್ರಶ್ನೆ ಮಾಡಿದ್ದಕ್ಕೆ ಕುನಾಲ್ ಕಾಮ್ರಾ ಅನ್ನು ಹಲವು ವಿಮಾನಯಾನ ಸಂಸ್ಥೆಗಳು ಬ್ಯಾನ್ ಮಾಡಿದ ಘಟನೆಯೂ ನಡೆದಿದೆ.

More from Filmibeat

English summary
Complaint given against Comedian Shyam Rangeela in Rajasthan for mocking petrol price hike.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X