Don't Miss!
- Lifestyle ₹200 ಕೋಟಿ ಮೌಲ್ಯದ ಆಸ್ತಿ ಬಿಟ್ಟು ಸನ್ಯಾಸತ್ವ ಸ್ವೀಕರಿಸಿದ ದಂಪತಿ..! ಹಣ, ಸಂಪತ್ತು ದಾರಿಗೆ ಚೆಲ್ಲಿದ ಉದ್ಯಮಿ..!
- News Gold and Silver price: ಏಪ್ರಿಲ್ 16ರಂದು ನಿಮ್ಮ ನಗರದಲ್ಲಿ ಬಂಗಾರ ದರ ಎಷ್ಟಿದೆ?-ಅಂಕಿಅಂಶಗಳ ವಿವರ ಹೀಗಿದೆ
- Automobiles ಫ್ಯಾಮಿಲಿಯೊಂದಿಗೆ ಅರಾಮದಾಯಕ ಪ್ರಯಾಣಕ್ಕಾಗಿ ಇನ್ನೋವಾ ಹೈಕ್ರಾಸ್ ಹೊಸ ರೂಪಾಂತರ ಬಿಡುಗಡೆ
- Technology ಇನ್ನು ಕೆಲವೇ ದಿನಗಳಲ್ಲಿ ವಾಟ್ಸಾಪ್ ಸೇರಲಿದೆ ಈ ಆಕರ್ಷಕ ಫೀಚರ್!
- Finance ಮಾರಾಟ ಕುಸಿತ, ಟೆಸ್ಲಾದಿಂದ 14,000 ಉದ್ಯೋಗಿಗಳ ವಜಾ: ವರದಿ
- Sports IPL 2024: ಐಪಿಎಲ್ ಮಾತ್ರವಲ್ಲ, ಟಿ20 ಕ್ರಿಕೆಟ್ನಲ್ಲೇ ಇತಿಹಾಸ ಬರೆದ RCB vs SRH ಪಂದ್ಯ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರಣ್ ಜೋಹರ್ ವಿರುದ್ಧ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ತಡೆ
ಪ್ರಕರಣವೊಂದಕ್ಕೆ ಸಂಬಧಿಸಿದಂತೆ ಕರಣ್ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯವು ರಾಜಸ್ಥಾನ ಸರ್ಕಾರಕ್ಕೆ ಸೂಚಿಸಿದೆ.
ಕರಣ್ ಜೋಹರ್ ನಡೆಸಿಕೊಡುವ 'ಕಾಫಿ ವಿತ್ ಕರಣ್' ಕಾರ್ಯಕ್ರಮದ ಎಪಿಸೋಡ್ ಒಂದರ ವಿರುದ್ಧ ಹಲವು ತಿಂಗಳ ಹಿಂದೆ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರಣ್ ಜೋಹರ್ ವಿರುದ್ಧ ಕ್ರಮಕ್ಕೆ ರಾಜಸ್ಥಾನ ಪೊಲೀಸರು ಮುಂದಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ರಕ್ಷಣೆಗಾಗಿ ಕರಣ್ ಜೋಹರ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ರಾಜಸ್ಥಾನ ಹೈಕೋರ್ಟ್ ಕರಣ್ ಜೋಹರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ರಾಜಸ್ಥಾನ ಸರ್ಕಾರಕ್ಕೆ ಸೂಚನೆ ನೀಡಿದೆ.
ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯಾ ಹಾಗೂ ಕೆ.ಎಲ್.ರಾಹುಲ್ ಭಾಗವಹಿಸಿದ್ದ 'ಕಾಫಿ ವಿತ್ ಕರಣ್' ಕಾರ್ಯಕ್ರಮದ ಕುರಿತಂತೆ ಆ ಇಬ್ಬರು ಕ್ರಿಕೆಟಿಗರು ಹಾಗೂ ಕರಣ್ ಜೋಹರ್ ವಿರುದ್ಧ ರಾಜಸ್ಥಾನದ ಜೋಧ್ಪುರದಲ್ಲಿ ಡಿ.ಆರ್.ಮೇಘವಾಲ್ ಎಂಬುವರು ಪ್ರಕರಣ ದಾಖಲಿಸಿದ್ದರು.
Recommended Video
ಆ ಎಪಿಸೋಡ್ನಲ್ಲಿ ಹಾರ್ದಿಕ್ ಪಾಂಡ್ಯಾ ತನ್ನ 'ಲೈಂಗಿಕ ಸಾಹಸಗಳ' ಬಗ್ಗೆ ಮಾತನಾಡಿದ್ದರು. ಅಷ್ಟೇ ಅಲ್ಲದೆ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದರು. ಇದು ಭಾರಿ ವಿವಾದ ಎಬ್ಬಿಸಿತ್ತು. ಇಬ್ಬರೂ ಆಟಗಾರರನ್ನು ವಿಶೇಷವಾಗಿ ಹಾರ್ದಿಕ್ ಪಾಂಡ್ಯಾ ಅನ್ನು ತಂಡದಿಂದ ಹೊರಗೆ ಹಾಕಬೇಕು ಎನ್ನಲಾಗಿತ್ತು. ಬಿಸಿಸಿಐ, ಇಬ್ಬರೂ ಆಟಗಾರರನ್ನು ಕೆಲವು ಪಂದ್ಯಗಳಿಂದ ಅಮಾನತ್ತು ಮಾಡಿತ್ತು.