ಮದುವೆ ಬಳಿಕ ಬೆಂಗಳೂರಿಗೆ ಆಗಮಿಸಿದ ದೀಪಿಕಾ - ರಣ್ವೀರ್ ಜೋಡಿ
Recommended Video

ನಟ ರಣ್ವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ವಿವಾಹ ಕಳೆದ ಗುರುವಾರದಂದು ಇಟಲಿಯ ಲೇಕ್ ಕೋಮೊದಲ್ಲಿ ನಡೆದಿತ್ತು.
ಮದುವೆಯ ಬಳಿಕ ಈ ನವ ಜೋಡಿ ಇದೀಗ ಬೆಂಗಳೂರಿಗೆ ಬಂದಿದ್ದಾರೆ. ಇಂದು ಬೆಳಗ್ಗೆ ದೀಪಿಕಾ ತಮ್ಮ ಪತಿ ಜೊತೆಗೆ ತವರೂರಿಗೆ ಆಗಮಿಸಿದ್ದಾರೆ.
ನಾಳೆ ಈ ನವ ಜೋಡಿಯ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದ್ದು, ಇಂದು ಈ ಜೋಡಿ ಗಾರ್ಡನ್ ಸಿಟಿಗೆ ಆಗಮಿಸಿದೆ. ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ರಣ್ವೀರ್ ಸಿಂಗ್ ಹಾಗೂ ನಟಿ ದೀಪಿಕಾ ಪಡುಕೋಣೆ ತಲುಪಿದ ಫೋಟೋಗಳು ಈಗ ಲಭ್ಯವಾಗಿವೆ. ರಾಯಲ್ ಲುಕ್ ನಲ್ಲಿ ನವ ದಂಪತಿಗಳು ಮಿಂಚಿದ್ದಾರೆ.

ನಾಳೆ ಬೆಂಗಳೂರಿನ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಭಾರತ ಚಿತ್ರರಂಗದ ಹಾಗೂ ಸೌತ್ ಚಿತ್ರರಂಗದ ಅನೇಕ ದಿಗ್ಗಜರು ಸೇರಿದಂತೆ ಅನೇಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೂಲತಃ ದೀಪಿಕಾ ಕುಟುಂಬ ಕರ್ನಾಟಕದವರಾಗಿದ್ದು, ಅವರ ಇಡೀ ಕುಟುಂಬ ಹಾಗೂ ಸ್ನೇಹಿತರು ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ.
ಬೆಂಗಳೂರಿನ ನಂತರ ಮುಂದಿನ ತಿಂಗಳ 28 ರಂದು ಮುಂಬೈನಲ್ಲಿ ಒಂದು ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆಯಂತೆ.

ಅಂದಹಾಗೆ, ದೀಪಿಕಾ ಮೂಲತಃ ಕೊಂಕಣಿ. ಇನ್ನೂ ರಣ್ವೀರ್ ಸಿಂಗ್ 'ಸಿಖ್' ಸಮುದಾಯಕ್ಕೆ ಸೇರಿದವರು. ಹೀಗಾಗಿ, ಎರಡೂ ಸಂಪ್ರದಾಯಗಳಂತೆ ವಿವಾಹ ಶಾಸ್ತ್ರೋಕ್ತವಾಗಿ ನಡೆದಿದೆ.


Click it and Unblock the Notifications











