Don't Miss!
- Lifestyle ಗಾಯ ಗುಣವಾಗಲು, ದೃಷ್ಟಿ ಸುಧಾರಣೆ ಸೇರಿ ಕೀವಿ ಹಣ್ಣಿನ ಲಾಭ ಎಷ್ಟಿದೆ ಗೊತ್ತಾ?
- News ಕುಡಿಯುವ ನೀರಿಲ್ಲದೇ ಜನ ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ: ಆರ್.ಅಶೋಕ್
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ ಚಿತ್ರದಿಂದ ಧೂದ್ ಪೇಡ ಔಟ್
ಕನ್ನಡ ಚಿತ್ರರಂಗದಲ್ಲಿ 'ಬರ್ಫಿ' ತಿನ್ನುತ್ತಿರುವ ಧೂದ್ ಪೇಡ ಅಲಿಯಾಸ್ ದಿಂಗತ್ ಗೆ ಅವರ ಬಾಲಿವುಡ್ ಎಂಟ್ರಿ ಯಾಕೋ ಕೈ ಕೊಟ್ಟಿದೆ. 'ದಿಗಂತ'ದಷ್ಟು ಆಸೆ ಇಟ್ಟು ಕೊಂಡು ಮುಂಬೈಗೆ ಹಾರಿದ್ದ ತೀರ್ಥಹಳ್ಳಿ ಹುಡುಗ ಈಗ ಕನ್ನಡ ನೆಲಕ್ಕೆ ಮರಳಿದ್ದಾನೆ.
ಕಳೆದ ಏಪ್ರಿಲ್ ನಲ್ಲೇ ಆರಂಭವಾಗಬೇಕಿದ್ದ ಬಾಲಿವುಡ್ ಚಿತ್ರದ ಶೂಟಿಂಗ್ ಇನ್ನೂ ಶುರುವಾಗಿಲ್ಲ. ಬರ್ಫಿ ಚಿತ್ರದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಸ್ವತಃ ದಿಗಂತ್ ಹೇಳಿಕೊಂಡಿದ್ದು ಕೇಳಿದ ಮೇಲೆ ಅಯ್ಯೋ ಪಾಪ ಎನ್ನಲಡ್ಡಿಯಿಲ್ಲ.
1920
ಹೆಸರಿನ
ಚಿತ್ರ
ಏಪ್ರಿಲ್
ನಲ್ಲಿ
ಸೆಟ್ಟೇರಿತ್ತು.
ಆಗಸ್ಟ್
ನಲ್ಲಿ
ಶೂಟಿಂಗ್
ಶುರು
ಎನ್ನಲಾಗಿತ್ತು.
ವಿಕ್ರಮ್
ಭಟ್
ಅವರ
ನಿರ್ಮಾಣದ
ಈ
ಚಿತ್ರ
ಈ
ಹಿಂದೆ
ಹಿಟ್
ಆದ
1920
ಹೆಸರಿನ
ಚಿತ್ರದ
ಎರಡನೇ
ಭಾಗವಾಗಿತ್ತು.
ಆದರೆ,
ಶೂಟಿಂಗ್
ನಿಂತಿದೆ.
ಯಾವಾಗ
ಮತ್ತೆ
ಆರಂಭವೋ
ಗೊತ್ತಿಲ್ಲ.
ದಿಗಂತ್
ಅಂತೂ
ಚಿತ್ರದಿಂದ
ಹೊರ
ಬಂದಿದ್ದಾರೆ.
ಈ ಮಧ್ಯೆ ದಿಗಂತ್ ಅವರು ದಿನಕರ್ ತೂಗುದೀಪ ಅವರ ಹೊಸ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಮುಂದಿನ ತಿಂಗಳು ಈ ಚಿತ್ರ ಸೆಟ್ಟೇರಲಿದೆಯಂತೆ. 1920 ಯಾಕೆ ವಿಳಂಬವಾಯಿತೋ ನನಗೆ ಗೊತ್ತಿಲ್ಲ. ನಾನು ತುಂಬಾ ತಿಂಗಳು ಕಾದೆ. ಆದರೆ, ದಿನಕರ್ ತೂಗುದೀಪ ಅವರ ಚಿತ್ರಕ್ಕೆ ಈಗಾಗಲೇ ಸಹಿ ಹಾಕಿದ್ದೇನೆ.ಹಾಗಾಗಿ ನಾನು ಮತ್ತೆ 1920 ಚಿತ್ರದ ತಾರಾಗಣದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ದಿಗಂತ್ ಸ್ಪಷ್ಟಪಡಿಸಿದ್ದಾರೆ.
ಇದರ ಜೊತೆಗೆ ನಟಿ ಪ್ರಾಚಿ ದೇಸಾಯಿ ಕೂಡಾ 1920 ಚಿತ್ರದಿಂದ ಹೊರಬಿದ್ದಿದ್ದಾರೆ. ದಿಗಂತ್ ಹಾಗೂ ಪ್ರಾಚಿ ಜೋಡಿಯಾಗಿ ನಟಿಸಬೇಕಿದ್ದ 1920 ಚಿತ್ರಕ್ಕೆ ಈಗ ಹೊಸ ಮುಖಗಳನ್ನು ಹಾಕಿಕೊಳ್ಳಲಾಗಿದೆ ಎಂಬ ಸುದ್ದಿ ಬಂದಿದೆ. ಒಟ್ಟಾರೆ, ದಿಗಂತ್ ಬಾಲಿವುಡ್ ಎಂಟ್ರಿ ವಿಳಂಬವಾಗಿದೆ ಬಾಲಿವುಡ್ ಬಾಗಿಲು ಬಂದ್ ಆಗಿಲ್ಲ.