ಶ್ರೀದೇವಿ ಅಂತಿಮ ದರ್ಶನ ಪಡೆಯಲು ಅಭಿಮಾನಿಗಳ ಜನಸ್ತೋಮ: ಇಂದು ಅಂತ್ಯಸಂಸ್ಕಾರ
Recommended Video

ನಟಿ ಶ್ರೀದೇವಿ ಪಾರ್ಥೀವ ಶರೀರ ನಿನ್ನೆ ರಾತ್ರಿ ಸುಮಾರು 9.30ಕ್ಕೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದಾಗ, ಇಡೀ ಛತ್ರಪತಿ ಶಿವಾಜಿ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಜನ ಕಿಕ್ಕಿರಿದು ತುಂಬಿದ್ದರು.
ಶ್ರೀದೇವಿ ಪಾರ್ಥೀವ ಶರೀರದ ದರ್ಶನ ಪಡೆಯಲು, ಏರ್ ಪೋರ್ಟ್ ನಿಂದ ಗ್ರೀನ್ ಎಕರ್ಸ್ ಹೋಮ್ ಮನೆಗೆ ಸಾಗುವ ದಾರಿಯ ಇಕ್ಕೆಲಗಳಲ್ಲೂ ಜನ ಜಮಾಯಿಸಿದ್ದರು.
ಗ್ರೀನ್ ಎಕರ್ಸ್ ಹೋಮ್, ಲೋಕಂಡ್ವಾಲಾದಲ್ಲಿರುವ ಶ್ರೀದೇವಿ ನಿವಾಸದ ಮುಂದೆಯಂತೂ ಕಳೆದ ಭಾನುವಾರ ಬೆಳಗ್ಗೆಯಿಂದಲೂ ಅಭಿಮಾನಿಗಳ ಜನಸ್ತೋಮ ಇದ್ದೇ ಇದೆ.
ಸದ್ಯ ಶ್ರೀದೇವಿ ಪಾರ್ಥೀವ ಶರೀರ ಇನ್ನೂ ಗ್ರೀನ್ ಎಕರ್ಸ್ ಹೋಮ್ ನಲ್ಲಿದ್ದು, ಇನ್ನೇನು ಲೋಕಂಡ್ವಾಲಾ ದಲ್ಲೇ ಇರುವ ಸೆಲೆಬ್ರೇಷನ್ ಸ್ಪೋರ್ಟ್ಸ್ ಕ್ಲಬ್ ಗೆ ರವಾನಿಸಲಾಗುತ್ತದೆ. ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದು. ಮುಂದೆ ಓದಿರಿ...

ಶ್ರೀದೇವಿ ಆತ್ಮಕ್ಕೆ ಶಾಂತಿ ಸಿಗಲಿ
ಶ್ರೀದೇವಿ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಗುರುಗ್ರಾಮದ ಜನತೆ ಶ್ರೀದೇವಿ ಭಾವಚಿತ್ರದ ಮುಂದೆ ಕ್ಯಾಂಡಲ್ ಹತ್ತಿಸಿ ಪ್ರಾರ್ಥಿಸಿದ್ದಾರೆ.

ಶ್ರೀದೇವಿ ಮನೆ ಮುಂದೆ ಜನಸ್ತೋಮ
ಶ್ರೀದೇವಿ ಪಾರ್ಥೀವ ಶರೀರದ ದರ್ಶನ ಪಡೆಯಲು ಗ್ರೀನ್ ಎಕರ್ಸ್ ಹೋಮ್ ಮುಂದೆ ಸಾವಿರಾರು ಜನ ನೆರೆದಿದ್ದಾರೆ.

ಆಂಬುಲೆನ್ಸ್ ನಲ್ಲಿ ರವಾನೆ
ನಿನ್ನೆ ರಾತ್ರಿ ಮುಂಬೈ ಏರ್ ಪೋರ್ಟ್ ನಿಂದ ಗ್ರೀನ್ ಎಕರ್ಸ್ ಹೋಮ್ ವರೆಗೆ ಮುಂಬೈ ಪೊಲೀಸರ ಬಿಗಿ ಭದ್ರತೆಯೊಂದಿಗೆ ಆಂಬುಲೆನ್ಸ್ ನಲ್ಲಿ ಶ್ರೀದೇವಿ ಪಾರ್ಥೀವ ಶರೀರ ಸಾಗಿಸಲಾಯಿತು.

ದಾರಿಯ ಇಕ್ಕೆಲಗಳಲ್ಲೂ ಜನ
ಉದ್ಯಮಿ ಅನಿಲ್ ಅಂಬಾನಿ, ಶ್ರೀದೇವಿ ಪುತ್ರಿಯರಾದ ಜಾಹ್ನವಿ, ಖುಷಿ ಸೇರಿದಂತೆ ಇಡೀ ಕಪೂರ್ ಕುಟುಂಬದ ಸದಸ್ಯರು ಶ್ರೀದೇವಿ ಪಾರ್ಥೀವ ಶರೀರ ಆಗಮಿಸುವ ಹೊತ್ತಿಗೆ ಮುಂಬೈ ವಿಮಾನದಲ್ಲಿ ಹಾಜರಿದ್ದರು.

ಇಂದು ಅಂತ್ಯಕ್ರಿಯೆ
ಇಂದು ಬೆಳಗ್ಗೆ 9.30 ರಿಂದ ಸೆಲೆಬ್ರೇಷನ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 4 ಗಂಟೆ ಸುಮಾರಿಗೆ ವಿಲ್ಲೆ ಪಾರ್ಲೆಯ ಚಿತಾಗಾರದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.


Click it and Unblock the Notifications











