Don't Miss!
- Sports ಟಿ20 ವಿಶ್ವಕಪ್-2024: "ಬಾಗಿಲು ಮುಚ್ಚಿದ್ದೇನೆ" ಎಂದಿದ್ದೇಕೆ ಸ್ಪಿನ್ ಮಾಂತ್ರಿಕ ನರೈನ್
- News ಡಿಕೆ ಬ್ರದರ್ಸ್ ಭದ್ರಕೋಟೆಯಲ್ಲಿ ಮೋದಿ, ಅಮಿತ್ ಶಾ, ಯೋಗಿ ಪ್ರಚಾರ: ಡಿ ಕೆ ಸುರೇಶ್ ಹೇಳಿದ್ದೇನು?
- Lifestyle ರೆಸಿಪಿ: ಮಾವಿನ ಕಾಯಿ ತುರಿದು ಮಾಡುವ ಉಪ್ಪಿನಕಾಯಿ, ಎಣ್ಣೆ ಬಳಸಿಲ್ಲ, ವರ್ಷದವರೆಗೆ ಇಡಲೂ ಬಹುದು
- Technology Google: ಗೂಗಲ್ ಪಿಕ್ಸೆಲ್ 8a ಬೆಲೆ ಮಾಹಿತಿ ಲೀಕ್! ಈ ಫೋನ್ ಫೀಚರ್ಸ್ ಏನು?
- Automobiles ಯುವಕರಿಗೆ ಸಿಹಿಸುದ್ದಿ: ಕೈಗೆಟುಕುವ ಬೆಲೆ, ಮಾಸ್ ಲುಕ್ನಲ್ಲಿ ಬರುತ್ತಿದೆ ಹೊಸ ಬಜಾಜ್ ಪಲ್ಸರ್ 400 ಬೈಕ್
- Finance ಇನ್ಮುಂದೆ ನಿಮ್ಮ ಜಮೀನಿನಲ್ಲಿ ನೀವು ಮನೆ ಕಟ್ಟೋದಕ್ಕೂ ಸರ್ಕಾರದ ಅನುಮತಿ ಅಗತ್ಯ, ಏನಿದು ಹೋಸ ನಿಯಮ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ ಅನ್ನು ಹಾಡಿಹೊಗಳಿದ ನಟಿ ಜೆನಿಲಿಯಾ ಡಿಸೋಜಾ
ಬಾಲಿವುಡ್ ನ ಮುದ್ದಾದ ಜೋಡಿ ಜೆನಿಲಿಯಾ ಹಾಗೂ ರಿತೇಶ್ ದೇಶ್ಮುಖ್ ಅವರನ್ನು ನಟ ಸುದೀಪ್ ಭೇಟಿಯಾಗಿದ್ದಾರೆ.
ಸುದೀಪ್ ಹಾಗೂ ರಿತೇಶ್ ದೇಶ್ಮುಖ್ ಬಹಳ ಹಳೆಯ ಮತ್ತು ಆತ್ಮೀಯ ಗೆಳೆಯರು ಜೆನಿಲಿಯಾ ಡಿಸೋಜಾ ಸಹ ಸುದೀಪ್ ಗೆ ಆತ್ಮಿಯರು. ಈ ಮೂವರು ಹಳೆಯ ಗೆಳೆಯರು ನಿನ್ನೆ ಭೇಟಿ ಆಗಿದ್ದಾರೆ.
ಮೂವರು ಒಟ್ಟಿಗಿರುವ ಚಿತ್ರಗಳನ್ನು ಹಂಚಿಕೊಂಡಿರುವ ಜೆನಿಲಿಯಾ ಡಿಸೋಜಾ, 'ಸುದೀಪ್ ಅಂಥಹಾ ಅದ್ಭುತ ವ್ಯಕ್ತಿಯೊಂದಿಗೆ ಅದ್ಭುತವಾಗಿ ಸಮಯ ಕಳೆದೆವು. ಒಳ್ಳೆಯ ಸಂಭಾಷಣೆ, ಒಳ್ಳೆಯ ಸಂಜೆಗೆ ಧನ್ಯವಾದ, ನಾನೂ ಹಾಗೂ ರಿತೇಶ್ ದೇಶ್ಮುಖ್ ನಿಮ್ಮ ಜೊತೆ ಕಳೆದ ಸಮಸಯವನ್ನು ಬಹುವಾಗಿ ಇಷ್ಟಪಟ್ಟೆವು' ಎಂದಿದ್ದಾರೆ.
'ಪ್ರಿಯಾ ಸುದೀಪ್ ಹಾಗೂ ಸಾನ್ವಿಯನ್ನು ಮಿಸ್ ಮಾಡಿಕೊಂಡೆವು. ಆದರೆ ಈ ಸಂಜೆ, ಮುಂಬರುವ ಇನ್ನೂ ಹಲವಾರು ಇಂಥಹಾ ಸಂಜೆಗಳಿಗೆ ಪ್ರಾರಂಭವಾಗಿದೆ. ನಿಮ್ಮ ದಿನನಿತ್ಯದ ಆಹಾರ ಅಭ್ಯಾಸವನ್ನು ಬಿಟ್ಟು ನಮಗಾಗಿ ಪೂರ್ಣ ಸಸ್ಯಹಾರ ಊಟ ಅರೇಂಜ್ ಮಾಡಿದ್ದಕ್ಕೆ ಧನ್ಯವಾದ' ಎಂದಿದ್ದಾರೆ ಜೆನಿಲಿಯಾ ಡಿಸೋಜಾ.
ರಿತೇಶ್ ದೇಶ್ಮುಖ್ ಹಾಗೂ ಸುದೀಪ್ ಬಹಳ ಸಮಯದಿಂದಲೂ ಆತ್ಮೀಯ ಗೆಳೆಯರು. ಇಬ್ಬರೂ ಒಟ್ಟಿಗೆ ಹಿಂದಿಯ 'ರಣ್' ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಸಹ ನಟಿಸಿದ್ದರು. ಈ ಸಿನಿಮಾ 2010 ರಲ್ಲಿ ಬಿಡುಗಡೆ ಆಗಿತ್ತು.
Recommended Video
ನಟ ಸುದೀಪ್ ಹಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದು, ರಿತೇಶ್ ದೇಶ್ಮುಖ್ ಮಾತ್ರವೇ ಅಲ್ಲದೆ ಸಲ್ಮಾನ್ ಖಾನ್, ಸುನಿಲ್ ಶೆಟ್ಟಿ, ಅಮಿತಾಬ್ ಬಚ್ಚನ್ ಇನ್ನೂ ಹಲವಾರು ಮಂದಿ ಬಾಲಿವುಡ್ ಸ್ಟಾರ್ಗಳೊಂದಿಗೆ ಗೆಳೆತನ ಹೊಂದಿದ್ದಾರೆ.