Don't Miss!
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಗಂಗೂಭಾಯಿ ಕಾತ್ಯಾವಾಡಿ' ಸಿನಿಮಾ ವಿರುದ್ಧ ಕಾಂಗ್ರೆಸ್ ಶಾಸಕ ಆಕ್ಷೇಪ
ಆಲಿಯಾ ಭಟ್ ನಟಿಸಿರುವ 'ಗಂಗೂಭಾಯಿ ಕಾತ್ಯಾವಾಡಿ' ಸಿನಿಮಾಕ್ಕೆ ಒಂದಾದ ನಂತರ ಒಂದು ಅಡಚಣೆಗಳು ಎದುರಾಗುತ್ತಲೇ ಇವೆ.
ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿರುವ ವೇಳೆ ಸಿನಿಮಾದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಗೆ ಕೊರೊನಾ ಪಾಸಿಟಿವ್ ಆಗಿರುವ ಕಾರಣ ಚಿತ್ರೀಕರಣವನ್ನು ಬಂದ್ ಮಾಡಲಾಗಿದೆ.
ಅಲಿಯಾ
ಭಟ್
ನಟನೆಯ
'ಗಂಗೂಬಾಯಿ
ಕಾಥಿಯಾವಾಡಿ'
ಚಿತ್ರೀಕರಣ
ದಿಢೀರ್
ಸ್ಥಗಿತ;
ಕಾರಣವೇನು?
ಇದರ ನಡುವೆಯೇ ಮತ್ತೊಂದು ತಲೆನೋವು ತಲೆದೋರಿದೆ. ಕಾಂಗ್ರೆಸ್ ಶಾಸಕರೊಬ್ಬರು ಸಿನಿಮಾದ ಹೆಸರನ್ನು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿಯೇ ಅವರು ಈ ವಿಷಯವನ್ನು ಚರ್ಚೆ ಮಾಡಿದ್ದಾರೆ.
ಮುಂಬಾದೇವಿ ಕ್ಷೇತ್ರದ ಶಾಸಕರಾಗಿರುವ ಅಮಿನ್ ಪಟೇಲ್ ಅವರು 'ಗಂಗೂಬಾಯಿ ಕಾತ್ಯಾವಾಡಿ' ಸಿನಿಮಾದ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಈ ಸಿನಿಮಾವು ಕಾಮಾಟಿಪುರದ ಬಗ್ಗೆ ಸಮಾಜಕ್ಕೆ ತಪ್ಪು ಸಂದೇಶ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಕಾಮಾಟಿಪುರ ವು ಮುಂಬಾದೇವಿ ಕ್ಷೇತ್ರಕ್ಕೆ ಸೇರಿದ್ದಾಗಿದ್ದು, ಕಾಮಾಟಿಪುರ 1950 ರಲ್ಲಿ ಇದ್ದಂತೆ ಈಗ ಇಲ್ಲ. ಕಾಮಾಟಿಪುರದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಜನರ ಜೀವನ ಶೈಲಿ, ಉದ್ಯೋಗ ಎಲ್ಲವೂ ಬದಲಾಗಿದೆ. ಆದರೆ ಈ ಸಿನಿಮಾದಿಂದ ಕಾಮಾಟಿಪುರದ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆ ಆಗಲಿದೆ ಎಂದು ಅವರು ಹೇಳಿದ್ದಾರೆ.
ಅಲಿಯಾ
ಭಟ್
v/s
ಪ್ರಭಾಸ್;
ಬಾಕ್ಸ್
ಆಫೀಸ್
ನಲ್ಲಿ
ಮೆಗಾವಾರ್
ಸಿನಿಮಾದ ಹೆಸರು 'ಗಂಗೂಭಾಯಿ ಕಾತ್ಯಾವಾಡಿ' ಸಿನಿಮಾದ ಹೆಸರು ಕಾತ್ಯಾವಾಡ ನಗರದ ಬಗ್ಗೆಯೂ ಕೆಟ್ಟ ಸಂದೇಶ ರವಾನೆ ಮಾಡುತ್ತದೆ. ಹಾಗಾಗಿ ಸಿನಿಮಾದ ಹೆಸರು ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿರುವ ಶಾಸಕರು, ರಾಜ್ಯ ಸರ್ಕಾರವು ಈ ವಿಷಯದಲ್ಲಿ ಮಧ್ಯ ಪ್ರವೇಶ ಮಾಡಬೇಕು ಎಂದು ಶಾಸಕ ಅಮಿನ್ ಪಟೇಲ್ ಒತ್ತಾಯಿಸಿದ್ದಾರೆ.
'ಗಂಗೂಭಾಯಿ ಕಾತ್ಯಾವಾಡಿ' ಸಿನಿಮಾವು ಮುಂಬೈ ನ ಮಹಿಳಾ ಡಾನ್ಗಳಲ್ಲಿ ಒಬ್ಬರಾದ ಗಂಗೂಭಾಯಿ ಕಾತ್ಯಾವಾಡಿ ಅಲಿಯಾಸ್ ಗಂಗೂಭಾಯಿ ಕೋಟೆವಾಲಿ ಕುರಿತದ್ದಾಗಿದೆ. 1950 ರ ಕಾಲದಲ್ಲಿ ಮುಂಬೈ ನ ಎಲ್ಲ ವೇಶ್ಯಾಗೃಹಗಳು ಗಂಗೂಭಾಯಿ ಅಡಿಯಲ್ಲಿಯೇ ನಡೆಯುತ್ತಿತ್ತು. ಆ ನಂತರ ಗಂಗೂಭಾಯಿ ಅವರು ರಾಜಕೀಯಕ್ಕೆ ಬಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ಗೆದ್ದಿದ್ದರು ಅದರ ನಂತರ ವೇಶ್ಯೆಯರ ಹಾಗೂ ಅವರ ಕುಟುಂಬದವರ ಕಲ್ಯಾಣಕ್ಕಾಗಿ ದುಡಿದರು.
Recommended Video
ಆಲಿಯಾ ಭಟ್ ಅವರು ಗಂಗೂಭಾಯಿ ಪಾತ್ರವನ್ನು ನಿರ್ವಹಿಸುತ್ತಿದ್ದು, ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡಿದ್ದಾರೆ. ಸಿನಿಮಾವು ಜುಲೈ 30 ರಂದು ತೆರೆಗೆ ಬರಲಿದೆ.