Don't Miss!
- News Women voters: ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ತಾರಕ್ ಮೆಹ್ತಾ'ದ ಜನಪ್ರಿಯ ನಟ ಡಾ. ಹಾಥಿ ವಿಧಿವಶ
Recommended Video
ಹೆಸರಾಂತ ಹಾಸ್ಯ ನಟ ಕವಿ ಕುಮಾರ್ ಆಜಾದ್ ಇಂದು (ಸೋಮವಾರ) ನಿಧನ ಹೊಂದಿದ್ದಾರೆ. ಹೃದಯಘಾತದಿಂದ ಇಂದು ಬೆಳ್ಳಗೆ 12 ಗಂಟೆ ಸುಮಾರಿಗೆ ಅವರು ಕೊನೆ ಉಸಿರೇಳೆದಿದ್ದಾರೆ.
ನಟ ಕವಿ ಕುಮಾರ್ ಆಜಾದ್ 'Taarak Mehta Ka Ooltah Chashmah' ಎಂಬ ಶೋ ಮೂಲಕ ದೊಡ್ಡ ಜನಪ್ರಿಯತೆ ಪಡೆದಿದ್ದರು. ಈ ಕಾರ್ಯಕ್ರಮದಲ್ಲಿ ಅವರು ಡಾ. ಹನ್ಸರಾಜ್ ಹಾಥಿಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈ ಪಾತ್ರದ ಮೂಲಕ ದೊಡ್ಡ ಮಟ್ಟದ ಹೆಸರು ಅವರಿಗೆ ಸಿಕ್ಕಿತ್ತು.
'ವಠಾರ' ಧಾರಾವಾಹಿ ಖ್ಯಾತಿಯ ಹಾಸ್ಯನಟ ಮಲ್ಲೇಶ್ ಇನ್ನಿಲ್ಲ
ಈ ಹಿಂದೆ ಅನಾರೋಗ್ಯ ಇದ್ದರೂ ಕೂಡ ಈ ಕಾರ್ಯಕ್ರಮದ ಶೂಟಿಂಗ್ ನಲ್ಲಿ ಕವಿ ಕುಮಾರ್ ಆಜಾದ್ ಭಾಗಿಯಾಗುತ್ತಿದ್ದರಂತೆ. ಆದರೆ, ಇಂದು ತುಂಬ ಹುಷಾರಿಲ್ಲ ಎಂದು ಕಾರ್ಯಕ್ರಮದ ನಿರ್ಮಾಪಕರಿಗೆ ಹೇಳಿ ಶೋ ಶೂಟಿಂಗ್ ನಲ್ಲಿ ಭಾಗಿಯಾಗಲು ಆಗುತ್ತಿಲ್ಲ ಎಂದು ತಿಳಿಸಿದ್ದರಂತೆ.
ತಾರಕ್ ಮೆಹ್ತಾ ಕಾ ಉಲ್ಟಾ ಚಷ್ಮಾ ಒಂದು ದಶಕದಿಂದ ಹಿಂದಿ ಧಾರಾವಾಹಿ ಪ್ರಿಯರನ್ನು ರಂಜಿಸುತ್ತಿದೆ. ಗುಜರಾತಿ ನಾಟಕಕಾರ ತಾರಕ್ ಮೆಹ್ತಾ ಅವರ ವಾರದ ಅಂಕಣ 'ದುನಿಯಾ ನೇ ಉಂದಾ ಚಷ್ಮಾ' ಆಧಾರಿಸಿ ಈ ಹಾಸ್ಯ ಧಾರಾವಾಹಿಯನ್ನು ನಿರ್ಮಿಸಲಾಗಿದೆ. ಈ ಧಾರಾವಾಹಿಯಲ್ಲಿ ಬರುವ ಒಂದೊಂದು ಪಾತ್ರಗಳು, ಅವುಗಳ ಹೆಸರುಗಳು, ಅವರ ವಿಚಿತ್ರ ವಿಶಿಷ್ಟ ಮ್ಯಾನರಿಸಂಗಳು ನೋಡುಗರ ಮನಸ್ಸನ್ನು ಹಿಡಿದಿಟ್ಟಿವೆ. ಅಷ್ಟೊಂದು ಜನಪ್ರಿಯತೆ ಗಳಿಸಿರಿದಿದ್ದರೆ ಸತತವಾಗಿ 10 ವರ್ಷ ಈ ಧಾರಾವಾಹಿ ನಡೆಯುತ್ತಿರಲಿಲ್ಲ.
ಕವಿ ಕುಮಾರ್ ಆಜಾದ್ ಪಾಸಿಟಿವ್ ವ್ಯಕ್ತಿ ಆಗಿದ್ದು, ಒಬ್ಬ ಒಳ್ಳೆಯ ನಟ ಆಗಿದ್ದರು. ಬಹುಮುಖ್ಯವಾಗಿ ಅವರು 'Taarak Mehta Ka Ooltah Chashmah' ಕಾರ್ಯಕ್ರಮವನ್ನು ಹೆಚ್ಚು ಇಷ್ಟ ಪಟ್ಟಿದ್ದರು. ಈ ಕಾರ್ಯಕ್ರಮದ 2500 ಸಂಚಿಕೆಗಳಲ್ಲಿ ಅವರು ಕಾಣಿಸಿಕೊಂಡಿದ್ದರು.