Don't Miss!
- News ಮೋದಿ ಯಾರ ಪರ; ಪ್ರಧಾನಿಯಾಗಿ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದು ಯಾರದ್ದು? ಸಿದ್ದರಾಮಯ್ಯ
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Technology ಡೇಟಾ ಬಳಕೆಯಲ್ಲಿ ಚೀನಾ ಮೊಬೈಲ್ ಹಿಂದಿಕ್ಕಿದ ಜಿಯೋ, ಈಗ ವಿಶ್ವದಲ್ಲೇ ದೊಡ್ಡಣ್ಣ!
- Automobiles ಕ್ರ್ಯಾಶ್ಟೆಸ್ಟ್ನಲ್ಲಿ ಈ ಹೋಂಡಾ ಕಾರಿಗೆ ಕೇವಲ 2 ಸ್ಟಾರ್: ಆದರೂ ಭಾರತೀಯರಿಗೆ ಈ ಕಾರು ಅಚ್ಚುಮೆಚ್ಚು!
- Lifestyle Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- Sports ಟಿ20 ವಿಶ್ವಕಪ್ಗಾಗಿ ಭಾರತದ ಟಾಪ್ 3 ಆಯ್ಕೆ ಮಾಡಿದ ಇರ್ಫಾನ್ ಪಠಾಣ್; ವಿರಾಟ್ ಕೊಹ್ಲಿ ಸ್ಥಾನವೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಲ್ಮಾನ್ ಖಾನ್ ತಂಗಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ದರೋಡೆ!
ಇದು ಯಾವುದೋ ಸಿನಿಮಾದ ಶೂಟಿಂಗ್ ಇರಬಹುದು ಅಂತ ಭಾವಿಸಬೇಡಿ. ಇದು 100% ರಿಯಲ್ ಸುದ್ದಿ. ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಶರ್ಮ ಮನೆಯಲ್ಲಿ ನಿಜವಾಗ್ಲೂ ಕಳ್ಳತನ ಆಗಿದೆ.
ರಜಾ ದಿನಗಳಲ್ಲಿ ಮಸ್ತಿ ಮಾಡಿ, ವಾಪಸ್ ಬಂದ ಮೇಲೆ ಮನೆಯಲ್ಲಿ ದರೋಡೆ ಆಗಿರುವ ವಿಷಯ ಅರ್ಪಿತಾಗೆ ಗೊತ್ತಾಗಿದೆ. ವಿಚಾರ ತಿಳಿದು ಸಲ್ಮಾನ್ ಖಾನ್ ಅಕ್ಷರಶಃ ಶಾಕ್ ಆಗಿದ್ದಾರೆ. [ಪ್ರೀತಿಯ ತಂಗಿಗೆ ಆತ್ಮೀಯ ಉಡುಗೊರೆ ಕೊಟ್ಟ ಸಲ್ಮಾನ್]
ಲಕ್ಷಾಂತರ ರೂಪಾಯಿ ಹಣ, ಒಡವೆ ಹಾಗೂ ಉಡುಪುಗಳು ಕಳ್ಳತನ ಆಗಿರುವುದು ಒಂದೆಡೆ ಆಗಿದ್ದರೆ, ಇನ್ನೊಂದ್ಕಡೆ ಅರ್ಪಿತಾ ಮನೆಯಲ್ಲಿ ಒಂದುವರೆ ವರ್ಷದಿಂದ ಕೆಲಸ ಮಾಡುತ್ತಿದ್ದ ಅಫ್ಸಾ ಕೂಡ ನಾಪತ್ತೆ ಆಗಿದ್ದಾರೆ. ಮುಂದೆ ಓದಿ....
ಅರ್ಪಿತಾ ಖಾನ್ ಶರ್ಮ ಮನೆ ಇರುವುದು ಎಲ್ಲಿ?
ಮುಂಬೈನ ಬಾಂದ್ರಾದಲ್ಲಿ ಇರುವ ಪೆಸಿಫಿಕ್ ಹೈಟ್ಸ್ ಅಪಾರ್ಟ್ ಮೆಂಟ್ ನಲ್ಲಿ ಅರ್ಪಿತಾ ಖಾನ್ ಶರ್ಮ ಮತ್ತು ಪತಿ ಆಯುಷ್ ಶರ್ಮ ವಾಸವಿದ್ದಾರೆ. [ಸಲ್ಮಾನ್ ಖಾನ್ ಗೆ ಅರ್ಪಿತಾ ಒಡಹುಟ್ಟಿದ ತಂಗಿ ಅಲ್ಲ]
ಲಕ್ಷ ಲಕ್ಷ ಲೂಟಿ
ಅರ್ಪಿತಾ ಮನೆಯಲ್ಲಿದ್ದ ಬರೋಬ್ಬರಿ 2.25 ಲಕ್ಷ ರೂಪಾಯಿ ಹಣ, ಒಡವೆ, ಡಿಸೈನರ್ ಉಡುಪುಗಳು ಹಾಗು ಅತ್ಯಮೂಲ್ಯ ವಸ್ತುಗಳು ಕಳ್ಳತನ ಆಗಿದೆ.
ಟ್ರಿಪ್ ಮುಗಿಸಿ ಬಂದ್ಮೇಲೆ ಗೊತ್ತಾಗಿದ್ದು!
ರಕ್ಷಾ ಬಂಧನ ಹಬ್ಬ ಆಚರಿಸಿ, ಹಾಲಿಡೇ ಟ್ರಿಪ್ ಮುಗಿಸಿ ಭಾನುವಾರ (ಆಗಸ್ಟ್ 21) ಸಂಜೆ ಅರ್ಪಿತಾ ಹಾಗೂ ಆಯುಷ್ ತಮ್ಮ ಮನೆಗೆ ವಾಪಸ್ ಆದರು. ಆಗ್ಲೇ ಕಳ್ಳತನ ಆಗಿರುವ ವಿಷಯ ಗೊತ್ತಾಗಿದೆ.
ಕೆಲಸದಾಕೆ ಕಾಣುತ್ತಿಲ್ಲ.!
ಅರ್ಪಿತಾ ಮನೆಯಲ್ಲಿ ಒಂದುವರೆ ವರ್ಷದಿಂದ ಕೆಲಸ ಮಾಡುತ್ತಿದ್ದ ಅಫ್ಸಾ ಎನ್ನುವಾಕೆ ಜುಲೈ 30ನೇ ತಾರೀಖಿನಿಂದ ನಾಪತ್ತೆ ಆಗಿದ್ದಾರೆ. ಹೀಗಾಗಿ, ಆಕೆಯ ಮೇಲೆ ಪೊಲೀಸರಿಗೆ ಗುಮಾನಿ ಇದೆ.
ಪ್ರಕರಣ ದಾಖಲಾಗಿದೆ
ಐ.ಪಿ.ಸಿ ಸೆಕ್ಷನ್ 381 ಅಡಿಯಲ್ಲಿ ಖಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.