Don't Miss!
- News India weather: ಈ ಭಾಗಗಳಲ್ಲಿ ಮುಂದಿನ ಐದು ದಿನ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ಮುನ್ಸೂಚನೆ
- Technology ಇಂದು ಮತ್ತೆ ಮೊಟೊರೊಲಾ ಎಡ್ಜ್ 50 ಪ್ರೊ ಫೋನಿನ ಸ್ಪೆಷಲ್ ಸೇಲ್!..ಡಿಸ್ಕೌಂಟ್ ಎಷ್ಟು?
- Sports PBKS vs MI IPL 2024: ಮತ್ತೊಮ್ಮೆ ಕೊನೆಯ ಓವರ್ನಲ್ಲಿ ಮುಗ್ಗರಿಸಿದ ಪಂಜಾಬ್ ಕಿಂಗ್ಸ್ ಪ್ಲೇಆಫ್ ಸನ್ನಿವೇಶ ಹೇಗಿದೆ?
- Finance ಕಚ್ಚಾ ತೈಲ ಆಮದು ಗಣನೀಯ ಇಳಿಕೆ, ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಾಗುತ್ತಾ?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಾಂಗ್ರೆಸ್ ಶಾಸಕನ ಬಗ್ಗೆ ಯೂಟ್ಯೂಬರ್ ಮಾತು: ಕಿಡಿಕಾರಿದ ಬಾಲಿವುಡ್ ನಟರು
'ಪರಾಸ್ ಅಫಿಷಿಯಲ್' ಹೆಸರಿನ ಯೂಟ್ಯೂಬ್ ಚಾನೆಲ್ನಲ್ಲಿ ಕಾಂಗ್ರೆಸ್ ಶಾಸಕ ನಿನಾಂಗ್ ಎರಿಂಗ್ ಹಾಗೂ ಅರುಣಾಚಲ ಪ್ರದೇಶ ರಾಜ್ಯದ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದನ್ನು ಬಾಲಿವುಡ್ ನಟರಾದ ವರುಣ್ ಧವನ್ ಹಾಗೂ ರಾಜ್ಕುಮಾರ್ ರಾವ್ ಹಾಗೂ ಇನ್ನಿತರ ಬಾಲಿವುಡ್ ಸೆಲೆಬ್ರಿಟಿಗಳು ಖಂಡಿಸಿದ್ದಾರೆ.
ಪರಾಸ್ ಸಿಂಗ್ ಅಲಿಯಾನ್ ಬಂಟು ಎಂಬಾತ 'ಪರಾಸ್ ಅಫಿಷಿಯಲ್' ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ತನ್ನ ಚಾನೆಲ್ನಲ್ಲಿ ಅರುಣಾಚಲ ಪ್ರದೇಶದ ಕಾಂಗ್ರೆಸ್ ಶಾಸಕ ಮಾಜಿ ಕೇಂದ್ರ ಮಂತ್ರಿ ನಿನಾಂಗ್ ಎರಿಂಗ್ ಅನ್ನು ದೇಶದ್ರೋಹಿ ಎಂದಿದ್ದಲ್ಲದೆ ತೀರಾ ಕೀಳಾದ ಭಾಷೆ ಬಳಸಿ ಬೈದಿದ್ದಾರೆ.
ಅದು ಮಾತ್ರವಲ್ಲದೆ ಅರುಣಾಚಲ ಪ್ರದೇಶವು ಭಾರತಕ್ಕೆ ಸೇರಿಲ್ಲ. ಅರುಣಾಚಲ ಪ್ರದೇಶ ಚೀನಾಕ್ಕೆ ಸೇರಿದೆ ಎಂದು ಹೇಳಿ ಉದ್ಧಟತನ ಮೆರೆದಿದ್ದಾನೆ. ಪರಾಸ್ನ ಈ ವಿಡಿಯೋ ವೈರಲ್ ಆಗಿದ್ದು, ಅರುಣಾಚಲದ ಸಿಎಂ, ಅಲ್ಲಿನ ಜನರು ಸೇರಿದಂತೆ ದೇಶದ ಹಲವರಿಂದ ತೀವ್ರ ವಿರೋಧಕ್ಕೆ ಗುರಿಯಾಗಿದೆ.
ಇಂಥಹ ಘಟನೆಯನ್ನು ಸಹಿಸಲಾಗದು: ವರುಣ್ ಧವನ್
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ವರುಣ್ ಧವನ್, 'ನಿನ್ನದೇ ದೇಶದ ಬಗ್ಗೆ ಮಾಹಿತಿ ಇಲ್ಲದೇ ಇರುವುದು ದಡ್ಡತನ. ಆ ದಡ್ಡತನವನ್ನು, ಮೂರ್ಖತನವನ್ನು ಪ್ರಚೋದನಾತ್ಮಕ ರೂಪದಲ್ಲಿ ಹಂಚಿಕೊಳ್ಳುವುದು ಇನ್ನೂ ವಿಷಕಾರಕ. ಈ ರೀತಿಯ ಮೂರ್ಖತನವನ್ನು ಸಹಿಸಲಾಗುವುದಿಲ್ಲ ಎಂದು ನಾವೆಲ್ಲರೂ ಒಕ್ಕೂರಲಿನಿಂದ ಹೇಳಬೇಕಿದೆ' ಎಂದಿದ್ದಾರೆ.
ರಾಜ್ಕುಮಾರ್ ರಾವ್ ಸಹ ಖಂಡಿಸಿದ್ದಾರೆ
ಮತ್ತೊಬ್ಬ ಬಾಲಿವುಡ್ ನಟ ರಾಜ್ಕುಮಾರ್ ರಾವ್ ಸಹ ಈ ಘಟನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, 'ಇಂಥಹಾ ಘಟನೆಗಳನ್ನು ಸಹಿಸಿಕೊಳ್ಳಬಾರದು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು' ಎಂದಿದ್ದಾರೆ. ಬಾಲಿವುಡ್ ನಿರ್ದೇಶಕ ಅಮರ್ ಕೌಶಿಕ್ ಸಹ ಯೂಟ್ಯೂಬರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕಿಡಿ ಕಾರಿದ್ದಾರೆ.
ಪಬ್ಜೀ ಬ್ಯಾನ್ ಮಾಡುವಂತೆ ಪತ್ರ ಬರೆದಿದ್ದ ಶಾಸಕ
ಅರುಣಾಚಲ ಪ್ರದೇಶ ಕಾಂಗ್ರೆಸ್ ಶಾಸಕ ನಿನಾಂಗ್ ಎರಿಂಗ್, ಪಬ್ಜೀಯು ಬ್ಯಾಟಲ್ ಗ್ರೌಂಡ್ಸ್ ಆಫ್ ಇಂಡಿಯಾ ಹೆಸರಿನಲ್ಲಿ ಮರಳಿ ಬರುತ್ತಿದ್ದು ಅದನ್ನೂ ಸಹ ಬ್ಯಾನ್ ಮಾಡಬೇಕು ಎಂದು ಮೋದಿಗೆ ಪತ್ರ ಬರೆದಿದ್ದರು. ಇದೇ ವಿಷಯವಾಗಿ ಮಾತನಾಡಿದ್ದ ಪರಾಸ್ ಸಿಂಗ್ ಬಹಳ ಕೆಟ್ಟ ಭಾಷೆಯಲ್ಲಿ ಶಾಸಕರನ್ನು ಬೈದಿದ್ದ ಹಾಗೂ ಅರುಣಾಚಲ ಪ್ರದೇಶ ಚೈನಾಕ್ಕೆ ಸೇರಿದ್ದು ಎಂದಿದ್ದ.
Recommended Video
ಪರಾಸ್ ಅನ್ನು ಬಂಧಿಸಿರುವ ಪಂಜಾಬ್ ಪೊಲೀಸರು
ಪರಾಸ್ ಸಿಂಗ್ ಉದ್ಧಟತನವನ್ನು ಗಂಭೀರವಾಗಿ ಪರಿಗಣಿಸಿದ ಅರುಣಾಚಲ ಪ್ರದೇಶ ಸರ್ಕಾರ ಪರಾಸ್ ವಿರುದ್ಧ ದೂರು ದಾಖಲಿಸಿತು. ಅರುಣಾಚಲ ಸಿಎಂ ಸಹ ಈ ಬಗ್ಗೆ ಹೇಳಿಕೆ ನೀಡಿದರು. ಶಾಸಕ ನಿನಾಂಗ್ ಎರಿಂಗ್ ಸಹ ಪ್ರತ್ಯೇಕ ದೂರು ದಾಖಲಿಸಿದರು. ಕೊನೆಗೆ ಪಂಜಾಬ್ನ ಲುಧಿಯಾನಾದಲ್ಲಿ ಪರಾಸ್ನ ಬಂಧನವಾಗಿದೆ. ಪರಾಸ್ ಬಂಧನದ ಬಗ್ಗೆ ಕೇಂದ್ರ ಕ್ರೀಡಾ ಮಂತ್ರಿ ಕಿರಣ್ ರಿಜುಜು ಮಾಹಿತಿ ಹಂಚಿಕೊಂಡಿದ್ದಾರೆ. ಬಂಧನಕ್ಕೊಳಗಾಗುವ ಮುನ್ನ ಪರಾಸ್ ಸಿಂಗ್ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಕ್ಷಮೆ ಕೇಳಿದ.