Don't Miss!
- News ಆಕ್ಸಿಸ್ ಬ್ಯಾಂಕ್ಗೆ ಬರೋಬ್ಬರಿ 7,129 ಕೋಟಿ ರೂಪಾಯಿ ಲಾಭ!
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಹಾಸಿನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಚಿದಂಬರಂ
ಸುಹಾಸಿನಿ ಈ ಕಾರ್ಯಕ್ರಮದ ಮೂಲಕ ತನ್ನ ಅಭಿಪ್ರಾಯಗಳನ್ನು ನಿಚ್ಚಳವಾಗಿ ಹೇಳುವುದು ಕಾರ್ಯಕ್ರಮದ ವಿಶೇಷ. ಕಳೆದ ಕೆಲ ದಿನಗಳಿಂದ ತಮಿಳು ನಿರ್ಮಾಪಕರು ಈ ಕಾರ್ಯಕ್ರಮದ ಬಗ್ಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸುಹಾಸಿನಿ ವಿಮರ್ಶೆ ಇರುಸುಮುರುಸು ಉಂಟುಮಾಡುತ್ತಿವೆ ಎಂದು ಆರೋಪಿಸಿದ್ದರು.
ಇತ್ತೀಚೆಗೆ ಬಿಡುಗಡೆಯಾದ 'ರಾಜಾಧಿರಾಜ' ಚಿತ್ರದ ಬಗ್ಗೆ ವಿಮರ್ಶಿಸುತ್ತಾ, ಎಂಜಿಆರ್, ರಜನಿಕಾಂತ್, ವಿಜಯ್ ಚಿತ್ರಗಳ ನಕಲಿನಂತಿದೆ. ತಮಿಳು ಚಿತ್ರೋದ್ಯಮ ಇಪ್ಪತ್ತು ವರ್ಷಗಳಷ್ಟು ಹಿಂದೆ ಸರೊದಿದೆ ಎಂದಿದ್ದರು. ಈ ಹೇಳಿಕೆಯಿಂದ ಬೇಸರಗೊಂಡಿರುವ ಆ ಚಿತ್ರದ ನಿರ್ಮಾಪಕ ಶಕ್ತಿ ಚಿದಂಬರಂ ನ್ಯಾಯಲಯದ ಮೆಟ್ಟಿಲು ಹತ್ತಲು ಹೊರಟಿದ್ದಾರೆ.
ತಮಿಳು ನಿರ್ಮಾಪಕ ಸಂಘಕ್ಕೂ ದೂರು ಸಲ್ಲಿಸಿರುವ ಚಿದಂಬರಂ ಮಾತನಾಡುತ್ತಾ, ನನ್ನ ಚಿತ್ರವನ್ನು ನಕಲು ಎನ್ನುತ್ತಿದ್ದಾರೆ.ಹಾಗಿದ್ದರೆ ಆಕೆಯ ಗಂಡ ಮಣಿರತ್ನಂ ಅವರು ರಾಮಾಯಣದ ಸ್ಪೂರ್ತಿಯಿಂದ 'ರಾವಣ' ತೆಗೆಯುತ್ತಿದ್ದಾರೆ. ಸತಿ ಸಾವಿತ್ರಿ ಕತೆಯೊಂದಿಗೆ ರೋಜಾ, ಕರ್ಣನ ಕತೆಯೊಂದಿಗೆ ದಳಪತಿ ಚಿತ್ರಗಳನ್ನು ತೆಗೆಯಲಿಲ್ಲವೇ? ಅದು ನಕಲಲ್ಲವೇ? ಎಂದು ಆರೋಪಿಸಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)