twitter
    For Quick Alerts
    ALLOW NOTIFICATIONS  
    For Daily Alerts

    ಸುಹಾಸಿನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಚಿದಂಬರಂ

    By Staff
    |

    Suhasini in trouble
    ಚಿತ್ರಗಳನ್ನು ವಸ್ತುನಿಷ್ಠವಾಗಿ ವಿಮರ್ಶಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ನಟಿ ಸುಹಾಸಿನಿ ಮಣಿರತ್ನಂ. ಪ್ರಸ್ತುತ ಆಕೆ ಒಂದು ತಮಿಳು ವಾಹಿನಿಯಲ್ಲಿ 'ಹಾಸಿನಿ ಪೇಸುಮ್ ಪಡಮ್' ಎಂಬ ಕಾರ್ಯಕ್ರಮವನ್ನು ನಿರ್ವಹಿಸುತ್ತಿದ್ದಾರೆ. ಹೊಸದಾಗಿ ಬಿಡುಗಡೆಯಾದ ಚಿತ್ರಗಳನ್ನು ವಿಮರ್ಶಿಸುವುದು ಆ ಕಾರ್ಯಕ್ರಮದ ಮುಖ್ಯ ಉದ್ದೇಶ.

    ಸುಹಾಸಿನಿ ಈ ಕಾರ್ಯಕ್ರಮದ ಮೂಲಕ ತನ್ನ ಅಭಿಪ್ರಾಯಗಳನ್ನು ನಿಚ್ಚಳವಾಗಿ ಹೇಳುವುದು ಕಾರ್ಯಕ್ರಮದ ವಿಶೇಷ. ಕಳೆದ ಕೆಲ ದಿನಗಳಿಂದ ತಮಿಳು ನಿರ್ಮಾಪಕರು ಈ ಕಾರ್ಯಕ್ರಮದ ಬಗ್ಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸುಹಾಸಿನಿ ವಿಮರ್ಶೆ ಇರುಸುಮುರುಸು ಉಂಟುಮಾಡುತ್ತಿವೆ ಎಂದು ಆರೋಪಿಸಿದ್ದರು.

    ಇತ್ತೀಚೆಗೆ ಬಿಡುಗಡೆಯಾದ 'ರಾಜಾಧಿರಾಜ' ಚಿತ್ರದ ಬಗ್ಗೆ ವಿಮರ್ಶಿಸುತ್ತಾ, ಎಂಜಿಆರ್, ರಜನಿಕಾಂತ್, ವಿಜಯ್ ಚಿತ್ರಗಳ ನಕಲಿನಂತಿದೆ. ತಮಿಳು ಚಿತ್ರೋದ್ಯಮ ಇಪ್ಪತ್ತು ವರ್ಷಗಳಷ್ಟು ಹಿಂದೆ ಸರೊದಿದೆ ಎಂದಿದ್ದರು. ಈ ಹೇಳಿಕೆಯಿಂದ ಬೇಸರಗೊಂಡಿರುವ ಆ ಚಿತ್ರದ ನಿರ್ಮಾಪಕ ಶಕ್ತಿ ಚಿದಂಬರಂ ನ್ಯಾಯಲಯದ ಮೆಟ್ಟಿಲು ಹತ್ತಲು ಹೊರಟಿದ್ದಾರೆ.

    ತಮಿಳು ನಿರ್ಮಾಪಕ ಸಂಘಕ್ಕೂ ದೂರು ಸಲ್ಲಿಸಿರುವ ಚಿದಂಬರಂ ಮಾತನಾಡುತ್ತಾ, ನನ್ನ ಚಿತ್ರವನ್ನು ನಕಲು ಎನ್ನುತ್ತಿದ್ದಾರೆ.ಹಾಗಿದ್ದರೆ ಆಕೆಯ ಗಂಡ ಮಣಿರತ್ನಂ ಅವರು ರಾಮಾಯಣದ ಸ್ಪೂರ್ತಿಯಿಂದ 'ರಾವಣ' ತೆಗೆಯುತ್ತಿದ್ದಾರೆ. ಸತಿ ಸಾವಿತ್ರಿ ಕತೆಯೊಂದಿಗೆ ರೋಜಾ, ಕರ್ಣನ ಕತೆಯೊಂದಿಗೆ ದಳಪತಿ ಚಿತ್ರಗಳನ್ನು ತೆಗೆಯಲಿಲ್ಲವೇ? ಅದು ನಕಲಲ್ಲವೇ? ಎಂದು ಆರೋಪಿಸಿದ್ದಾರೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)

    Thursday, June 4, 2009, 17:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X