Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದಿನೇಶ್ ಗಾಂಧಿಗೆ 'ಕಿರಿಕ್ ರಾಣಿ'ಯಾಗಿ ಕಾಡಿದ ರಾಗಿಣಿ
ರಾಗಿಣಿಯನ್ನು ಯಾಕೆ ಹಿಡಿಯಲು ಹೋಗಿದ್ದರು ದಿನೇಶ್ ಗಾಂದಿ ಅಂತ ಕೇಳಬೇಡಿ. ಅವರು ಇದೀಗ ನಿರ್ಮಿಸಲು ಹೊರಟಿರುವ ರೀಮೇಕ್ ಚಿತ್ರ ಛತ್ರಪತಿಗೆ ನಾಯಕಿಯಾಗಿ ನಟಿಸಲು ರಾಗಿಣಿಗೆ ಆಫರ್ ನೀಡುವ ಸಂಬಂಧ ದಿನೇಶ್ ಗಾಂಧಿ ಆಕೆಗೆ ಫೋನ್ ಕಾಲ್ ಮಾಡಿದ್ದರಂತೆ. ಅವರ ಮಾತಿಗೆ ಕಾಟಾಚಾರಕ್ಕೋ ಎಂಬಂತೆ ಮಾತನಾಡಿದ ರಾಗಿಣಿ, ಕನ್ನಡದಲ್ಲಿ ಯಾರೂ ಕೊಡದಷ್ಟು, ಯಾರೂ ತೆಗೆದುಕೊಳ್ಳದಷ್ಟು ಸಂಭಾವನೆ ಕೇಳಿದರಂತೆ.
ಮೊದಲೇ ದಿನೇಶ್ ಗಾಂಧಿ ರಾಗಿಣಿಗಿಂತಲೂ ಕಿರಿಕ್. ಅವರು ಆಕೆಯ ಸಹವಾಸವೇ ಬೇಡವೆಂದು ಮುಂಬೈನಿಂದ ಪೂಜಾ ವರ್ಮಾ ಎಂಬ ಬೆಡಗಿಯನ್ನು ಕರೆತಂದಿದ್ದಾರೆ. ರಾಗಿಣಿಯ ಜಾಗಕ್ಕೆ ಈಗ ಪೂಜಾ ವರ್ಮಾ ಬಂದು ಕುಳಿತಿದ್ದಾರೆ. ನಾಯಕರಾಗಿ AK 56 ಚಿತ್ರದ ಹೀರೋ ಸಿದ್ಧಾಂತ್ ಆಯ್ಕೆಯಾಗಿದ್ದಾರೆ. ಅಂದಹಾಗೆ, ತೆಲುಗಿನಲ್ಲಿ ಛತ್ರಪತಿ ಚಿತ್ರವನ್ನು ರಾಜಮೌಳಿ ನಿರ್ದೇಶಿಸಿದ್ದರು, ಪ್ರಭಾಸ್ ನಟಿಸಿದ್ದರು.
ಇಲ್ಲಿಯ ಕಥೆ ಗೊತ್ತಾಯ್ತಲ್ಲ! ರಾಗಿಣಿಗೆ ಕನಿಷ್ಟ ಸೌಜನ್ಯಕ್ಕೂ ಬರಗಾಲವೇ ಎಂದು ಕೇಳುತ್ತಿದ್ದಾರೆ ಗಾಂಧಿನಗರದ ಗಲ್ಲಿಗಳಲ್ಲಿರುವ ಕೆಲವು ಪಂಡಿತರು. ಆದರೆ ಇದಕ್ಕೆ ರಾಗಿಣಿಯ ಕಡೆಯಿಂದ ಯಾವ ಉತ್ತರ ಬರುತ್ತೋ! ಏಕೆಂದರೆ ಈ ದಿನೇಶ್ ಗಾಂಧಿಯನ್ನೂ ಕೂಡ ಪೂರ್ತಿ ನಂಬುವಂತಿಲ್ಲ ಎಂಬುದೂ ಬಹಳಷ್ಟು ಜನರ ಅಂಬೋಣ. (ಒನ್ ಇಂಡಿಯಾ ಕನ್ನಡ)