Don't Miss!
- News Tulsi Gowda: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿ ಗೌಡ ಆರೋಗ್ಯದಲ್ಲಿ ಏರುಪೇರು: ಐಸಿಯುಗೆ ದಾಖಲು
- Finance ಎವರೆಸ್ಟ್ ಮಾತ್ರವಲ್ಲ ಎಂಡಿಎಚ್ನ ಉತ್ಪನ್ನದಲ್ಲೂ ಕೀಟನಾಟಕ ಪತ್ತೆ
- Sports ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿಗೆ ಬ್ಯಾಟಿಂಗ್ ಕ್ರಮಾಂಕ ನೀಡಿದ ಆರೋನ್ ಫಿಂಚ್
- Lifestyle ರಾಜ್ಯದಲ್ಲಿ ಮುಂದಿನ 1 ವಾರ ಹವಾಮಾನ ಹೇಗಿರಲಿದೆ? ಎಲ್ಲೆಲ್ಲಿ ಮಳೆಯಾಗಲಿದೆ?
- Technology ಲಾವಾ ಅಗ್ನಿ 2 5G ಮೊಬೈಲ್ ಬೆಲೆಯಲ್ಲಿ ದಿಢೀರ್ ಇಳಿಕೆ; ಗ್ರಾಹಕರಿಗೆ ಖುಷಿ!
- Automobiles ಮಾರುಕಟ್ಟೆಯಲ್ಲಿ ಸುನಾಮಿ ಎಬ್ಬಿಸಲು ಹೊಸ ಟೊಯೊಟಾ ಫಾರ್ಚುನರ್ ಲೀಡರ್ ಎಡಿಷನ್ ಅನಾವರಣ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಮ್ಯಾ 'ಚಂದ್ರ'ನಿಂದ ಹೊರನಡೆದ ಗುಟ್ಟು ಬಹಿರಂಗ
ರೂಪಾ ಅಯ್ಯರ್ ಚಂದ್ರ ಚಿತ್ರ ತಿರುವನಂತಪುರ ರಾಯಲ್ ಫ್ಯಾಮಿಲಿ ಕಥೆ ಹೊಂದಿದೆ. ಪ್ರಾರಂಬದಲ್ಲಿ ನಾಯಕಿ ರಮ್ಯಾ ಚಿತ್ರದಿಂದ ಹೊರನಡೆದು ವಿಘ್ನ ಎದುರಾಗಿದೆ. ಆದರೆ ಅದನ್ನು ಚಿತ್ರತಂಡ ಅದನ್ನು ತೊಂದರೆ ಅಂದುಕೊಂಡಿಲ್ಲ.ಕಾರಣ ಚಿತ್ರಕ್ಕೆ ಕಥೆ ಮುಖ್ಯವೇ ಹೊರತು ನಾಯಕಿಯಲ್ಲ, ಅಷ್ಟಕ್ಕೂ ಈ ಚಿತ್ರದಲ್ಲಿ ನಾಯಕನೇ ಮುಖ್ಯ ಅಂತ ನಿರ್ಮಾಪಕರು ನಿರ್ಧರಿಸಿದ್ದಾರೆ.
'ಚಂದ್ರ' ಚಿತ್ರದ ನಿರ್ದೇಶಕಿ ರೂಪಾ ಅಯ್ಯರ್ ಒಬ್ಬರೇ. ಆದರೆ ನಿರ್ಮಾಪಕರು ಒಬ್ಬರಲ್ಲ, ಒಂದಷ್ಟು ಸಮಾನ ಮನಸ್ಕರು ಸೇರಿ ನಿರ್ಮಿಸುತ್ತಿರುವ ಚಿತ್ರವಿದು. ಹಾಗಾಗಿ ಅವರು ಎಲ್ಲೂ ರಾಜಿಯಾಗುತ್ತಿಲ್ಲ. ಕಥೆ ಒಪ್ಪಿಕೊಂಡು ನಟಿಸುವವರಷ್ಟೇ ಬೇಕು ಎಂದು ಸ್ಪಷ್ಟವಾಗಿಯೇ ಹೇಳಿದ್ದಾರೆ. ಇದಕ್ಕೆ ಬದ್ಧರಾಗಿ ಲವ್ಲಿ ಸ್ಟಾರ್ ಪ್ರೇಮ್ ನಟಿಸುತ್ತಿದ್ದಾರೆ. ಆದರೆ ರಮ್ಯಾ ಅದಕ್ಕೆ ವಿರುದ್ಧ ನಡೆ ಅನುಸರಿಸಿದ್ದಾರೆ.
ಚಿತ್ರರಂಗದಲ್ಲಿ ನಾಯಕ-ನಾಯಕಿಯರು ಹೆಸರು ಮಾಡಿದ ಮೇಲೆ ನಿರ್ದೇಶಕರ ಮೇಲೆ ಒತ್ತಡ ಹಾಕುವುದು ಹೊಸ ವಿಷಯವೇನಲ್ಲ. ಕಥೆ ಬದಲಾಯಿಸಬೇಕು, ತನ್ನ ಪಾತ್ರಕ್ಕೆ ಹೆಚ್ಚು ಸ್ಕೋಪು ನೀಡಬೇಕು, ಹಾಡು ಬೇಕು, ಅದು ಇದು ಅಂತ ಹಲವು ಬದಲಾವಣೆಗಳಿಗೆ ಬಲವಂತ ಮಾಡುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ನಿರ್ದೇಶಕರು ಮಾಡುತ್ತಾರೆ ಕೂಡ. ಆದರೆ ಆದರೆ 'ಚಂದ್ರ' ಟೀಮ್ ಮಾಡಿಲ್ಲ, ರಮ್ಯಾ ಹೊರಬಂದಿದ್ದಾರೆ. ಹಾಗಾದರೆ ರಮ್ಯಾ ಮಾಡಿದ್ದೇನೆ? ಮುಂದಿನ ಪುಟ ನೋಡಿ...