ಪೂಜಾ ಗಾಂಧಿ ಚಿತ್ರರಂಗಕ್ಕೆ ಹೇಳ್ತಾರಾ ಗುಡ್ ಬೈ?
ಯಾಕೋ ಇತ್ತೀಚಿಗೆ ನಟಿ ಪೂಜಾ ಗಾಂಧಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಮುಂಗಾರು ಮಳೆ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಭರ್ಜರಿ ಎಂಟ್ರಿ ಕೊಟ್ಟ ನಟಿ ಪೂಜಾ, ನಂತರ ಅದ್ಯಾಕೋ ಕ್ಲಿಕ್ಕಾಗಲೇ ಇಲ್ಲ. ಆಯ್ಕೆಯಲ್ಲಿ ಬುದ್ಧಿವಂತಿಕೆ ಉಪಯೋಗಿಸಿದೇ ಚಿತ್ರದ ಮೇಲೆ ಚಿತ್ರಗಳನ್ನು ಒಪ್ಪೊಕೊಂಡು ನಟಿಸಿದ ಪರಿಣಾಮವೋ ಏನೋ, ಪೂಜಾ ನಿಧಾನಕ್ಕೆ ತೆರೆಮೆರೆಗೆ ಸರಿಯತೊಡಗಿದ್ದರು.
ಅಷ್ಟರಲ್ಲಿ 'ದಂಡು ಪಾಳ್ಯ' ಎಂಬ ಚಿತ್ರದಲ್ಲಿ ಅರೆಬೆತ್ತಲಾಗಿ ಕಾಣಿಸಿಕೊಂಡು ಅನಾವಶ್ಯಕ ಸುದ್ದಿಯಾದರು. ಅದರ ಬಗ್ಗೆ ವಾದ-ವಿವಾದಗಳು ನಡೆಯುತ್ತಿರುವಾಗಲೇ ಜೆಡಿಎಸ್ ಪಕ್ಷ ಸೇರಿಕೊಂಡು ಬೆರಗು ಮೂಡಿಸಿದರು. ಇದೀಗ ಅವರು ಮತ್ತೆ ಸುದ್ದಿಯಾಗುತ್ತಿರುವ ಕಾರಣ ಪೂಜಾ ಗಾಂಧಿ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿದ್ದಾರೆ ಎಂಬ ಕಾರಣಕ್ಕೆ.
ಪೂಜಾ ಗಾಂಧಿಯೇ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲವೇ ಅಥವಾ ಅವರಿಗೆ ಆಫರ್ ಗಳೇ ಹುಡುಕಿಕೊಂಡು ಬರುತ್ತಿಲ್ಲವೇ ಅನ್ನುವ ಪ್ರಶ್ನೆ ಸ್ಪಷ್ಟವಿದ್ದರೂ ಅದಕ್ಕೆ ಉತ್ತರ ಮಾತ್ರ ಅಸ್ಪಷ್ಟ. ಆದರೆ ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿರುವುದಂತೂ ನಿಜ. ರಾಜಕೀಯವಾಗಿ ಬೆಳೆಯುವ ದೃಷ್ಟಿಕೋನವನ್ನು ಮನಸ್ಸಿನಲ್ಲಿಟ್ಟುಕೊಂಡು ಪೂಜಾ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಗಲ್ಲಿಗಲ್ಲಿಗಳಲ್ಲಿ ಹರಿದಾಡುತ್ತಿದೆ. ಮುಂದಿನ ಪುಟ ನೊಡಿ...


Click it and Unblock the Notifications











