Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಾಲೇಂಜಿಂಗ್ ಸ್ಟಾರ್ ಕಿವಿ ಹಿಂಡಿದ ನಮ್ಮ ಓದುಗರು
ಮಧು ಎಂಬುವವರ ಪ್ರತಿಕ್ರಿಯೆ ಹೀಗಿದೆ ನೋಡಿ, "ಜೈಲಿನಲ್ಲಿದ್ದಾಗ ದರ್ಶನ್ ಇಲಿ ಮರಿ, ಹೊರಗೆ ಬಂದ ಮೇಲೆ ಹುಲಿ ಮರಿ. ಹೀರೊ ಮಕ್ಕಳು ಎಲ್ಲಾ ಕಡೆಯೂ ಹೀರೋಗಳೇ. ವಿಲನ್ ಮಕ್ಕಳು ಸಿನಿಮಾದಲ್ಲಿ ಮಾತ್ರ ಹೀರೊ, ನಿಜ ಜೀವನದಲ್ಲಿ ವಿಲನ್ ಅಂತಾ ದರ್ಶನ್ ಸಾಹೇಬರು ನಿರೂಪಿಸಿದ್ದಾರೆ."
ತನ್ನ ಹೆಂಡತಿ ವಿಜಯಲಕ್ಷ್ಮಿಯನ್ನು ಸಾಯುವ ಹಾಗೆ ಹೊಡೆದಿದ್ದನ್ನು ಇಡೀ ಕನ್ನಡ ನಾಡಿನ ಜನತೆಯೇ ನೋಡಿದ್ದಾರೆ. ತಾವು ಕೂಡ ತಪ್ಪೊಪ್ಪಿಕೊಂಡು ಜನತೆಯ ಮುಂದೆ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಇನ್ನು ಮುಂದಾದರೂ ತಾಳ್ಮೆಯಿಂದ, ಕಾಮನ್ ಸೆನ್ಸ್ ಬಳಸಿಕೊಂಡು ಸುಖಮಯ ದಾಂಪತ್ಯ ನಡೆಸಿಕೊಂಡು ಹೋಗುವ ಬದಲು ಮತ್ತೆ ಈ ಪ್ರಕರಣವನ್ನು ಕೆಣಕುತ್ತಿರುವುದ್ಯಾಕೆ ಎಂದು ಪ್ರಶ್ನಿಸಿದ್ದಾರೆ.
ತಾವು ಮಾಡಿದ ತಪ್ಪಿಗೆ ಬೇರೆಯವರ ಮೇಲೆ ಗೂಬೆ ಕೂಡಿಸುವುದ್ಯಾಕೆ. ದರ್ಶನ್ ತಾವು ಹಿಂದೆ ಪಡೆದ ಸಹಾಯಗಳನ್ನೆಲ್ಲ ಮರೆತಿದ್ದಾರೆ ಅಂತ ಕಾಣುತ್ತದೆ. ಹಣ ಕಣ್ಣ ಮುಂದೆ ತಾಂಡವವಾಡುವಾಗ ಮಾನವೀಯತೆ ಎಲ್ಲ ಮರೆತುಹೋಗಬಾರದು. ತಮ್ಮ ತಂದೆಗೆ ಮಾಡಿದ ಸಹಾಯವನ್ನು ಮತ್ತೆ ನೆನೆಸಿಕೊಂಡು ಎಚ್ಚರಿಕೆಯಿಂದ ಜೀವನ ನಡೆಸಬೇಕು ಎಂದು ನಟರಾಜ್ ಕಿವಿಮಾತು ಹೇಳಿ, ದರ್ಶನ್ ಕಿವಿ ಹಿಂಡಿದ್ದಾರೆ.