Don't Miss!
- News ಹಾಸನದ ಬೀದಿಗಳಲ್ಲಿ ಚೆಲ್ಲಾಡುತ್ತಿರುವ ಪೆನ್ಡ್ರೈವ್ ಬಗ್ಗೆ ಹೇಳಿ? ಹೆಚ್ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ಪ್ರಶ್ನೆ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಶ್ಮಿಗೆ ಗೇಟ್ ಪಾಸ್ : ದುಡ್ಡು ಓಕೆ, ಜಂಭ ಯಾಕೆ?
ಮಸಾಲ ಪಾತ್ರಗಳಿಗೆ ಸೈ ಎಂದ ಮೇಲೆ ತಂಗಿ ಪಾತ್ರ ಮಾಡೋದನ್ನು ರಾಧಿಕಾ ನಿಲ್ಲಿಸಿದರು. ಈಗ ಸ್ಯಾಂಡಲ್ ವುಡ್ ನಲ್ಲಿ ತಂಗಿ ಪಾತ್ರ ಮಾಡೋರಿಗೆ ಕೊರತೆಯಾಗಿದೆ. ತಂಗಿ ಪಾತ್ರ ಮಾಡೋರು ಲಕ್ಷಲಕ್ಷ ಹಣ ಕೇಳ್ತಾರೆ ಅನ್ನೋದು ನಿರ್ಮಾಪಕರ ಗೋಳು. ಕೇಳಬಾರದೇ ಎನ್ನುವುದು ನಟಿಮಣಿಯರ ಪ್ರಶ್ನೆ.
'ಬಂಧು ಬಳಗ'ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರಿಗೆ ತಂಗಿಯಾಗಿ ನಟಿಸಬೇಕಾಗಿದ್ದ ದುನಿಯಾ ಚಿತ್ರದ ನಾಯಕಿ ರಶ್ಮಿ, ಈಗ ಆ ಪಾತ್ರ ಮಾಡುತ್ತಿಲ್ಲ. ಕಾರಣ ಏನು ಅಂದರೆ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಹೇಳುವುದು ಇಷ್ಟು : ಹತ್ತರಿಂದ ಹದಿನೈದು ದಿನಗಳ ಶೂಟಿಂಗ್ ಗೆ ಆಯಮ್ಮ ಹತ್ತು ಲಕ್ಷ ರೂಪಾಯಿ ಸಂಭಾವನೆ ಕೇಳಿದಳು. ಚೌಕಾಶಿ ಮಾಡಿ ಏಳು ಲಕ್ಷಕ್ಕೆ ಒಪ್ಪಿಸಿದ್ದೆವು. ಆಮೇಲೆ ಕತೆ ಹೇಳಲು ನಾನು, ಕಮಲಾಕರ್ ಮತ್ತು ಕತೆ ಬರೆದ ಜನಾರ್ದನ ಮಹರ್ಷಿ ಹೋದೆವು. ರಶ್ಮಿಯ ಅಮ್ಮ ಮತ್ತು ಆಕೆಯ ಸೆಕ್ರೇಟರಿ ತಮಗೇ ಕತೆ ಹೇಳಬೇಕು ಎಂದರು. ಪಾತ್ರ ಮಾಡುವವರಿಗೆ ಕತೆ ಹೇಳದೆ ಇವರಿಗೆ ಹೇಳಿ ಏನು ಉಪಯೋಗ ಎಂದು ಅನ್ನಿಸಿದರೂ ಹೇಳಿದೆವು. ಅದರಲ್ಲಿ ಕೊಂಚ ಬದಲಾವಣೆ ಮಾಡಲು ಹೇಳಿದರು. ಇದ್ಯಾಕೋ ಅತಿ ಆಯಿತು ಅನ್ನಿಸಿ ಅವಳನ್ನು ಕೈಬಿಟ್ಟೆವು. ಆಕೆಯ ಜಾಗಕ್ಕೆ ತೇಜಸ್ವಿನಿ ಬಂದಿದ್ದಾರೆ.
ಮೊನ್ನೆಮೊನ್ನೆ ತೆರೆಕಂಡ 'ಕೃಷ್ಣ 'ಚಿತ್ರದಲ್ಲಿ ಗಣೇಶ್ ಜೊತೆ ಕೆಲವು ಕ್ಷಣಗಳ ಮಟ್ಟಿಗೆ ಕುಣಿದು ಮಾಯವಾಗುವ ಪಾತ್ರದಲ್ಲಿ ರಶ್ಮಿ ನಟಿಸಿದ್ದಳು. ಅದು ಯಾವ ಖನಂದಾರಿ ಪಾತ್ರ ಎಂದು ತಿಳಿದು ಒಪ್ಪಿದ್ದಳೋ ಗೊತ್ತಿಲ್ಲ. ಒಂದು ಚಿತ್ರದಲ್ಲಿ ನಟಿಸಿದಾಗಲೇ ಇಷ್ಟು, ಮುಂದೆ ಎಷ್ಟೆಷ್ಟೋ..?
ನವೆಂಬರ್ 7ರಂದು ಚಿತ್ರದ ಮುಹೂರ್ತ ನಡೆಯಲಿದೆ. ತೇಜಸ್ವಿನಿ ಈಗಾಗಲೇ 'ಸವಿಸವಿ ನೆನಪು' ಚಿತ್ರದಲ್ಲಿ ಎರಡನೇ ನಾಯಕಿಯಾಗಿ, 'ಮಾತಾಡ್ ಮಾತಾಡು ಮಲ್ಲಿಗೆ'ಯಲ್ಲಿ ವಿಷ್ಟು ಮಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
(ದಟ್ಸ್ ಕನ್ನಡ ಸಿನಿವಾರ್ತೆ)