Don't Miss!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Lifestyle ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರಗುಪ್ತರ ಕಿವಿಗೆ ಬಿದ್ದ ಗಾಂಧಿನಗರದ ಆಘಾತಕಾರಿ ಸುದ್ದಿ!
ಲೊಕೇಷನ್:
ಯಮಲೋಕದ
ಪಕ್ಕದ
ಬಣ್ಣದಲೋಕ!
ಸಮಯ:
ಸಾಡೇ
ಸಾತ್!
ಯಮಧರ್ಮ:
ಯಾಕೆ
ಚಿತ್ರಗುಪ್ತರೇ?
ಇಲ್ಲಿ
ಕೂತು
ಏನು
ಯೋಚಿಸುತ್ತಿರುವಿರಿ?
ಚಿತ್ರಗುಪ್ತ:
ಏನೆಂದು
ಹೇಳಲಿ
ಮಹಾಪ್ರಭು...
ಹಾಗೇ
ಒಂದು
ಸುತ್ತ
ಗಾಂಧೀನಗರಕ್ಕೆ
ಹೋಗಿದ್ದೆ...
ಅಲ್ಲಿ
ಒಂದು
ಆಘಾತಕಾರೀ
ಸುದ್ದಿ
ಕೇಳಿ
ಮನಸ್ಸು
ಪದರುಗುಟ್ಟಿಬಿಟ್ಟಿತು!
ಯಮಧರ್ಮ: ಅಂಥದ್ದೇನಾಯಿತು ಚಿತ್ರಗುಪ್ತರೇ?
ಚಿತ್ರಗುಪ್ತ: ಹೇಗೆ ಹೇಳಲಿ ಯಮದೊಂಗ ...
ಯಮಧರ್ಮ: ಬಾಯಲ್ಲೇ ಹೇಳಿ ಚಿತ್ರಗುಪ್ತಾ...
ಚಿತ್ರಗುಪ್ತ: ನಿಮಗೆ ನಿರ್ದೇಶಕ ಪ್ರೇಮ್ ಬಗ್ಗೆ ಗೊತ್ತಿರಬೇಕು ಅಲ್ಲವೇ ಯಮಧರ್ಮಾ...
ಯಮಧರ್ಮ: ಹಾ... ಕೇಳಿದ್ದೇನೆ... ಅದೇ ಜೋಗಿ ಎಂಬ ಚಿತ್ರ ಕೊಟ್ಟವರಲ್ಲವೇ... ಗೊತ್ತುಂಟು...
ಚಿತ್ರಗುಪ್ತ: ಅದೇ ಪ್ರೇಮ್ ಅವರು ಜೋಗಿ ಚಿತ್ರದಲ್ಲಿ ಒಂದು ಹಾಡು ಬರೆದಿದ್ದಾರೆ... ಏಳು ಮಲೆ ಮೇಲೇರಿ ಕುಂತಾನ್ ನಮ್ಮಾ ಮಾದೇವಾ...
ಯಮಧರ್ಮ: ಹಾ... ಎಲ್ಲೋ ಕೇಳಿದ ನೆನಪು....
ಚಿತ್ರಗುಪ್ತ: ಅಹುದು... ಅದೇ ಹಾಡನ್ನು ತಾನೇ ಕೈಯಾರೇ ಬರೆದಿದ್ದೇನೆ ಎಂದು ಪ್ರೇಮ್ ಎಲ್ಲಾ ಕಡೆ ಹೇಳಿಕೊಂಡಿದ್ದಾರೆ. ಆದರೆ, ನನಗೆ ಬಂದ ಮಾಹಿತಿಯ ಪ್ರಕಾರ ಆ ಹಾಡನ್ನು ಬರೆದದ್ದು ಪ್ರೇಮ್ ಅಲ್ಲ!
ಯಮಧರ್ಮ: ಏನು ಮಾತನಾಡುತ್ತಿರುವೆ ಚಿತ್ರಗುಪ್ತಾ? ತಮಾಷಿ ಮಾಡುವ ಹೊತ್ತೇ ಇದು?
ಚಿತ್ರಗುಪ್ತ: ಇಲ್ಲ ಯಮಾ ಮಾಮಾ... ಆ ಹಾಡನ್ನು ಬರೆದಿದ್ದು ಎರಡು ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಬರೆದಿರುವ, ರಾ ರಾ... ಹಾಡಿನ ಖ್ಯಾತಿಯ ಗೋಟೂರಿ...!!!
ಯಮಧರ್ಮ: !!!???!!!