Don't Miss!
- Sports
ಕಿರಿಯ ಮಹಿಳಾ ತಂಡದ ಟಿ20 ವಿಶ್ವಕಪ್ ಗೆಲುವು ನಮಗೆ ದೊಡ್ಡ ಸ್ಫೂರ್ತಿ ನೀಡಿದೆ; ಹರ್ಮನ್ಪ್ರೀತ್ ಕೌರ್
- News
ಆರ್ಥಿಕ ಸಂಕಷ್ಟದ ನಡುವೆಯೇ ಪಾಕಿಸ್ತಾನದಲ್ಲಿ ಮತ್ತೊಂದು ದುರಂತ: ಮಸೀದಿಯಲ್ಲಿ ಆತ್ಮಹುತಿ ದಾಳಿ- 46 ಸಾವು, 150 ಮಂದಿಗೆ ಗಾಯ
- Lifestyle
ಜನವರಿ 30ಕ್ಕೆ ಶನಿ ಅಸ್ತ: 35 ದಿನದವರೆಗೆ ಈ 6 ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Technology
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್, ಪುನೀತ್, ಸುದೀಪ್, ಉಪ್ಪಿ ಮಲ್ಟಿಸ್ಟಾರ್ ಚಿತ್ರ
ಇವರಿಷ್ಟು ಸ್ಟಾರ್ಗಳು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡರೆ ಹೇಗೆ? ಕನ್ನಡ ಚಿತ್ರಪ್ರೇಮಿಗಳಿಗೆ ಒಮ್ಮೆಲೆ ಯುಗಾದಿ, ಸಂಕ್ರಾಂತಿ, ದೀಪಾವಳಿ. ಇಷ್ಟು ಸ್ಟಾರ್ಗಳ ಕಾಲ್ಶೀಟ್ ಹೊಂದಿಸುವುದು ಹೇಗೆ? ಆಕ್ಷನ್ ಕಟ್ ಹೇಳುವವರು ಯಾರು? ಬಜೆಟ್ ಎಷ್ಟಾಗಬಹುದು? ನಾಯಕಿಯರು ಯಾರಾಗಬಹುದು?
ಇದೇ ರೀತಿಯ ಪ್ರಶ್ನೆಗಳು ಗಾಂಧಿನಗರದಲ್ಲಿ ತಲೆ ಕೊರೆಯುತ್ತಿವೆ. ಇದಕ್ಕೆ ಕಾರಣವಾಗಿರುವುದು ಪ್ರಚಂಡ ಕುಳ್ಳ ದ್ವಾರಕೀಶ್. 'ವಿಷ್ಣುವರ್ಧನ' ಚಿತ್ರದ ಸಕ್ಸಸ್ ಬಳಿಕ ದ್ವಾರಕೀಶ್ ಮತ್ತೊಂದು ಚಿತ್ರದ ಭಾರಿ ಸಿದ್ಧತೆಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಜೀವಮಾನದ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.
ಇಷ್ಟು ಮಂದಿ ನಾಯಕ ನಟರನ್ನು ಹಾಕಿಕೊಂಡು ಚಿತ್ರ ಮಾಡಲು ಹೊರಟಿದ್ದಾರೆ. ತಮ್ಮ ಮಹತ್ವಾಕಾಂಕ್ಷಿ ಚಿತ್ರಕ್ಕೆ 'ಕರ್ನಾಟಕ ಗತವೈಭವ' ಎಂದು ಹೆಸರಿಟ್ಟಿದ್ದಾರೆ. ಐದು ಮಂದಿ ನಿರ್ದೇಶಕರನ್ನು ಹಾಕಿಕೊಂಡು ಚಿತ್ರ ಮಾಡುವ ಮತ್ತೊಂದು ಸಾಹಸ ದ್ವಾರಕೀಶ್ ಅವರದು. ಸೂರಿ, ಯೋಗರಾಜ್ ಭಟ್, ದಿನಕರ್ ತೂಗುದೀಪ ಹಾಗೂ ಸುದೀಪ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವವರು.
ಇಷ್ಟಕ್ಕೂ ಕತೆ ಏನೆಂದರೆ, ಕರ್ನಾಟಕವನ್ನು ಆಳಿದ ಐದು ರಾಜವಂಶಸ್ಥರದ್ದು. ಇದೆಲ್ಲಾ ಕೇಳೋದಕ್ಕೆ ಸೊಗಸಾಗಿಯೇ ಇದೆ. ಆದರೆ ದ್ವಾರಕೀಶ್ ಇನ್ನೂ ಯಾವೊಬ್ಬ ನಟನೊಂದಿಗೂ ಮಾತನಾಡಿಲ್ಲ. ಅವರಲ್ಲೇ ಒಂದು ಕನಸಿನ ಬೀಜ ಬಿತ್ತಿದ್ದಾರೆ. ಅದು ಇನ್ನಷ್ಟೇ ಮೊಳಕೆಯೊಡೆದು ಗಿಡವಾಗಬೇಕು. ಅಲ್ಲಿಯವರೆಗೂ 'ಕರ್ನಾಟಕ ಗತವೈಭವ' ಗೊಟಕ್ ಎಂದರೂ ಎನ್ನಬಹುದು. (ಏಜೆನ್ಸೀಸ್)