Don't Miss!
- Finance mukesh ambaniಗೆ 67 ವರ್ಷ, ಅವರು ಹೊಂದಿರುವ ದುಬಾರಿ ವಸ್ತುಗಳು ಏನೇನು ಗೊತ್ತಾ?
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್, ಪುನೀತ್, ಸುದೀಪ್, ಉಪ್ಪಿ ಮಲ್ಟಿಸ್ಟಾರ್ ಚಿತ್ರ
ಇವರಿಷ್ಟು ಸ್ಟಾರ್ಗಳು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡರೆ ಹೇಗೆ? ಕನ್ನಡ ಚಿತ್ರಪ್ರೇಮಿಗಳಿಗೆ ಒಮ್ಮೆಲೆ ಯುಗಾದಿ, ಸಂಕ್ರಾಂತಿ, ದೀಪಾವಳಿ. ಇಷ್ಟು ಸ್ಟಾರ್ಗಳ ಕಾಲ್ಶೀಟ್ ಹೊಂದಿಸುವುದು ಹೇಗೆ? ಆಕ್ಷನ್ ಕಟ್ ಹೇಳುವವರು ಯಾರು? ಬಜೆಟ್ ಎಷ್ಟಾಗಬಹುದು? ನಾಯಕಿಯರು ಯಾರಾಗಬಹುದು?
ಇದೇ ರೀತಿಯ ಪ್ರಶ್ನೆಗಳು ಗಾಂಧಿನಗರದಲ್ಲಿ ತಲೆ ಕೊರೆಯುತ್ತಿವೆ. ಇದಕ್ಕೆ ಕಾರಣವಾಗಿರುವುದು ಪ್ರಚಂಡ ಕುಳ್ಳ ದ್ವಾರಕೀಶ್. 'ವಿಷ್ಣುವರ್ಧನ' ಚಿತ್ರದ ಸಕ್ಸಸ್ ಬಳಿಕ ದ್ವಾರಕೀಶ್ ಮತ್ತೊಂದು ಚಿತ್ರದ ಭಾರಿ ಸಿದ್ಧತೆಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಜೀವಮಾನದ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.
ಇಷ್ಟು ಮಂದಿ ನಾಯಕ ನಟರನ್ನು ಹಾಕಿಕೊಂಡು ಚಿತ್ರ ಮಾಡಲು ಹೊರಟಿದ್ದಾರೆ. ತಮ್ಮ ಮಹತ್ವಾಕಾಂಕ್ಷಿ ಚಿತ್ರಕ್ಕೆ 'ಕರ್ನಾಟಕ ಗತವೈಭವ' ಎಂದು ಹೆಸರಿಟ್ಟಿದ್ದಾರೆ. ಐದು ಮಂದಿ ನಿರ್ದೇಶಕರನ್ನು ಹಾಕಿಕೊಂಡು ಚಿತ್ರ ಮಾಡುವ ಮತ್ತೊಂದು ಸಾಹಸ ದ್ವಾರಕೀಶ್ ಅವರದು. ಸೂರಿ, ಯೋಗರಾಜ್ ಭಟ್, ದಿನಕರ್ ತೂಗುದೀಪ ಹಾಗೂ ಸುದೀಪ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿರುವವರು.
ಇಷ್ಟಕ್ಕೂ ಕತೆ ಏನೆಂದರೆ, ಕರ್ನಾಟಕವನ್ನು ಆಳಿದ ಐದು ರಾಜವಂಶಸ್ಥರದ್ದು. ಇದೆಲ್ಲಾ ಕೇಳೋದಕ್ಕೆ ಸೊಗಸಾಗಿಯೇ ಇದೆ. ಆದರೆ ದ್ವಾರಕೀಶ್ ಇನ್ನೂ ಯಾವೊಬ್ಬ ನಟನೊಂದಿಗೂ ಮಾತನಾಡಿಲ್ಲ. ಅವರಲ್ಲೇ ಒಂದು ಕನಸಿನ ಬೀಜ ಬಿತ್ತಿದ್ದಾರೆ. ಅದು ಇನ್ನಷ್ಟೇ ಮೊಳಕೆಯೊಡೆದು ಗಿಡವಾಗಬೇಕು. ಅಲ್ಲಿಯವರೆಗೂ 'ಕರ್ನಾಟಕ ಗತವೈಭವ' ಗೊಟಕ್ ಎಂದರೂ ಎನ್ನಬಹುದು. (ಏಜೆನ್ಸೀಸ್)