Don't Miss!
- News ಕಾಂಗ್ರೆಸ್ ನೇತೃತ್ವದ ಒಕ್ಕೂಟಕ್ಕೆ ನಾಯಕನೇ ಇಲ್ಲ: ಪ್ರಧಾನಿ ಮೋದಿ!
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿ ರಮ್ಯಾ ಕೈ ಮುರಿದುಕೊಂಡ ಸುದ್ದಿ ದಿಟವೇ?
ಕನ್ನಡ ಚಿತ್ರರಂಗದಲ್ಲಿ ಒಂದು ಬಹುನಿರೀಕ್ಷಿತ ಚಿತ್ರ ಬಿಡುಗಡೆಯಾಗುವ ಸುದ್ದಿ ಹೇಗೆ ಕ್ಷಣಾರ್ಧದಲ್ಲಿ ಊರೆಲ್ಲ ತುಂಬಿಕೊಳ್ಳುತ್ತದೆಯೋ, ಒಂದು ಗಾಳಿ ಸುದ್ದಿಯೂ ಅಷ್ಟೇ ಬೇಗ ಕಿವಿಯಿಂದ ಕಿವಿಗೆ ನುಗ್ಗುತ್ತದೆ. ಈಗ ಅದೇ ಥರದ ಗಾಳಿಸುದ್ದಿಯೊಂದು ಗಲ್ಲಿ ಗಲ್ಲಿ ಸುತ್ತುತ್ತಿದೆ.
ಅದೇನಪ್ಪಾಅಂದ್ರೆ
'ನಟಿ
ರಮ್ಯಾ
ಕೈಗೆ
ಬಲವಾದ
ಪೆಟ್ಟು
ಬಿದ್ದಿದೆಯಂತೆ.
ಮೊನ್ನೆಯಷ್ಟೇ
ಗೆಳತಿಯರ
ಜತೆ
ಬೈಕ್
ರೈಡಿಂಗ್ಗೆ
ಹೋದಾಗ
ಜಾರಿ
ಬಿದ್ದಿದ್ದಾರೆ.
ಬಿದ್ದಾಗ
ಪಕ್ಕದಲ್ಲಿ
ಹೋಗುತ್ತಿದ್ದ
ಬೈಕ್
ಕೈ
ಮೇಲೆ
ಹರಿದ
ಕಾರಣ
ಬಲವಾದ
ಏಟಾಗಿದೆ.
ತುರ್ತು
ಚಿಕಿತ್ಸೆ
ಮಾಡಿಸಿಕೊಂಡು,
ಆದಷ್ಟು
ಬೇಗ
ವಾಸಿ
ಮಾಡಿಕೊಳ್ಳಲು
ಮುಂಬಯಿಗೂ
ಹೋಗಿ
ಬಂದಿದ್ದಾರೆ.
ಹಾಗಾಗಿ
ಹದಿನೈದು
ದಿನದಿಂದ
ಯಾವುದೇ
ಫೋನ್
ಕಾಲ್
ಎತ್ತುತ್ತಿಲ್ಲ.
ಕೈಗೆ
ಸಿಗುತ್ತಿಲ್ಲ..'
ಈ ಸುದ್ದಿಯನ್ನು ಯಾರು ಹುಟ್ಟುಹಾಕಿದರೋ ಗೊತ್ತಿಲ್ಲ. ಕೆಲವರ ಪ್ರಕಾರ ಅವರು ಸಂಪರ್ಕಿಸಿದ ಮೂಳೆ ತಜ್ಞರೇ ಹೇಳಿದ್ದಾರಂತೆ. ಇನ್ನು ಕೆಲವರಿಗೆ ಸುದ್ದಿ ಮುಂಬಯಿ ಟು ಬೆಂಗಳೂರು ರೈಲಿನ ಬೋಗಿಯಲ್ಲಿ ಸಿಕ್ಕಿದೆ. ಇದರಲ್ಲಿ ಯಾವುದು ಸತ್ಯ ಎಂದು ಸ್ವತಃ ರಮ್ಯಾ ಅವರನ್ನು ಕೇಳುವ ಅಂದರೆ, ಯಾರದೂರವಾಣಿಯನ್ನೂ ಎತ್ತುತ್ತಿಲ್ಲವಂತೆ.
ಮೊದಲಾದರೆ ಕೆಲವರಿಗಾದರೂ ಸಂಪರ್ಕಕ್ಕೆ ಸಿಗುತ್ತಿದ್ದರು. ಹದಿನೈದುದಿನದಿಂದೀಚೆಗೆ ಪತ್ತೆಯೇ ಇಲ್ಲ ಎನ್ನುತ್ತಿದೆ ಇನ್ನೊಂದು ಮೂಲೆ. ಆದರೆ, ಇದು ಸುಳ್ಳು ಸುದ್ದಿ ಎನ್ನುತ್ತಿದ್ದಾರೆ ನಿರ್ದೇಶಕ ನಾಗಶೇಖರ್ ಹಾಗೂ ನಿರ್ಮಾಪಕ ಸುರೇಶ್. ಮೊನ್ನೆಯಷ್ಟೇ ಅವರು ಸಂಜು ವೆಡ್ಸ್ ಗೀತಾ ಚಿತ್ರದಲ್ಲಿ ನಟಿಸಿ ಹೋಗಿದ್ದಾರೆ ಎನ್ನುವುದು ನಾಗಣ್ಣನಹೇಳಿಕೆ.
ಎರಡನೇ ಮದ್ವೆ ಚಿತ್ರವನ್ನು ತೆರೆ ಕಾಣಿಸುವ ತರಾತುರಿಯಲ್ಲಿರುವ ನಿರ್ಮಾಪಕ ಸುರೇಶ್ ಹೇಳುವಂತೆ "ರಮ್ಯಾ ಅವರು ನಮ್ಮ ಮುಂದಿನ 'ಸಿದ್ದ ಲಿಂಗು' ಚಿತ್ರಕ್ಕೆ ನಾಯಕಿ. ಮೊನ್ನೆಯಷ್ಟೇ ಸಂಪರ್ಕ ಮಾಡಿದ್ದೇನೆ. ಫೋನಿಗೆ ಸಿಗುತ್ತಿಲ್ಲ ಎನ್ನುವುದು ನಿಜವೋ ಗೊತ್ತಿಲ್ಲ. ಆದರೆ, ನಾನು ಮೂರು ದಿನದ ಮುಂಚೆ ಮೀಟ್ ಮಾಡಿ, ಮಾತನಾಡುವಾಗ ಅವರ ಕೈ ಕಾಲೆಲ್ಲ ಚೆನ್ನಾಗಿಯೇ ಇತ್ತು.. ಹಾಗಾದರೆ ಹೀಗೆ ಸುಳ್ಳು ಸುದ್ದಿ ಹಬ್ಬಿಸಿದವರು ಯಾರು ? ಇದು ರಮ್ಯಾಗೆ ಆಗದ ನಾಯಕಿಯರ ಬಣದ ಕೆಲಸವಾ? ಕೇಳೋಣ ಎಂದು ಫೋನ್ ಮಾಡಿದರೂ ಆ ಕಡೆಯಿಂದ ನೋ ರಿಪ್ಲೈ (ಸ್ನೇಹಸೇತು: ವಿಜಯ ಕರ್ನಾಟಕ)