ತಾರೆ ಜಮೀನ್ ಪರ್ ಡಬ್ಬಿಂಗ್ ಕೈಬಿಟ್ಟ ಸರ್ಕಾರ

ಹಿಂದಿ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡುವುದನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಸರ್ಕಾರದ ಈ ಕ್ರಮವನ್ನು ಖಂಡಿಸುತ್ತಿರುವುದಾಗಿ ಅಶೋಕ್ ತಿಳಿಸಿದರು. ಈ ಹಿಂದೆ ಕರ್ನಾಟಕ ಸರ್ಕಾರ ರಮಾನಂದ ಸಾಗರ್ ಅವರ ರಾಮಾಯಣ ಹಾಗೆಯೇ ಟಿಪ್ಪು ಸುಲ್ತಾನ್ ಟಿವಿ ಧಾರಾವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಲು ನಿರ್ಧರಿಸಿತ್ತು. ಆದರೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ಯೋಜನೆಗಳಿಂದ ಹಿಂದೆ ಸರಿದಿತ್ತು.
ತಾರೆ ಜಮೀನ್ ಪರ್ ತರಹದ ಚಿತ್ರಕಥೆ ನನ್ನ ತಲೆಯಲ್ಲೂಇತ್ತು. ಆದರೆ ಬಜೆಟ್ ಕೊರತೆಯ ಕಾರಣ ಆ ಚಿತ್ರವನ್ನು ಕನ್ನಡಲ್ಲಿ ಮಾಡಲು ಸಾಧ್ಯವಾಗಲಿಲ್ಲ ಎಂದು ಹಾಸ್ಯ ನಟ ಕೋಮಲ್ ಈ ಹಿಂದೆ ಹೇಳಿಕೊಂಡಿದ್ದರು. ತಾರೆ ಜಮೀನ್ ಪರ್ ಚಿತ್ರಕ್ಕಿಂತಲೂ ಕೆಲವೊಂದು ಉತ್ತಮ ಮಕ್ಕಳ ಚಿತ್ರಗಳು ಕನ್ನಡಲ್ಲೂ ಬಂದಿವೆ. ಅಂತಹ ಚಿತ್ರಗಳಿಗೆ ಕರ್ನಾಟಕ ಸರ್ಕಾರ ಪ್ರೋತ್ಸಾಹ ಕೊಡಬೇಕಾಗಿರುವುದು ಧರ್ಮ ಅಲ್ಲವೆ?
(ದಟ್ಸ್ ಕನ್ನಡ ಚಿತ್ರವಾರ್ತೆ)
ಸಿಡಿ ಮುಖಾಂತರಎಲ್ಲಾ ಶಾಲೆಗಳಲ್ಲಿ 'ಸತ್ಯಹರಿಶ್ಚಂದ್ರ'
kannada movies ಅಮೀರ್ ಖಾನ್ amir khan ತಾರೆ ಜಮೀನ್ ಪರ್ ವಿವಾದ ramayana taare zameen par ಅಶೋಕ್ ರಾಮಾಯಣ ಟಿಪ್ಪುಸುಲ್ತಾನ್ ರಮಾನಂದ ಸಾಗರ್ ಕರ್ನಾಟಕ ಸರ್ಕಾರ kannada dubbing tippu sultan serial


Click it and Unblock the Notifications