ಲೈವ್ ಪ್ರೋಗ್ರಾಂನಲ್ಲಿ ಬೂಸಿ ಬಿಟ್ಟ ಹಂಸಲೇಖ
ಟಿವಿ ವಾಹಿನಿಯಲ್ಲಿ ರಿಯಾಲಿಟಿ ಶೋ. ತೀರ್ಪುಗಾರರ ಸಾಲಿನಲ್ಲಿ ಕೂತಿದ್ದವರು ಹಂಸಲೇಖ. ಅಲ್ಲಾದ ತಮಾಷೆ ನೋಡಿ; ಒಂದು ಮಗು ಪ್ರೀತೀನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ ಹಾಡಿತು. ಹಾಡು ಮುಗಿದ ಮೇಲೆ ಹಂಸ್ ಉದ್ದುದ್ದವಾಗಿ ಮಾತಾಡಿದರು.
ದಿನವು ನಿತ್ಯ ಉಗಾದಿನೇ ಎಂಬ ದ್ವಿರುಕ್ತಿಯನ್ನು ಸಾಹಿತಿ ಬಹಳ ಚೆನ್ನಾಗಿ ಬಳಸಿದ್ದಾರೆ ಎಂದರು. ಖುದ್ದು ಚಿ.ಉದಯಶಂಕರ್ ಹತ್ತಿರ ಅವರು ಬರೆದ ಆ ಸಾಲುಗಳ ಕುರಿತು ಚರ್ಚಿಸಿದ್ದಾಗಿ ನುಡಿದರು. ಎಲ್ಲರೂ ಚಪ್ಪಾಳೆ ಹೊಡೆದರು. ಹಂಸಲೇಖ ಮತ್ತೆಮತ್ತೆ ಹಸನ್ಮುಖಿಯಾದರು.
ತಮಾಷೆ ನೋಡಿ, ಆ ಹಾಡನ್ನು ಬರದಿರುವವರು ಉದಯಶಂಕರ್ ಅಲ್ಲ; ಹುಣಸೂರು ಕೃಷ್ಣಮೂರ್ತಿ. ಅನೇಕ ಕಡೆ ಅದು ತಮಗೆ ಇಷ್ಟವಾದ ಹಾಡು ಅಂತ ಅವರೇ ಉಲ್ಲೇಖಿಸಿದ್ದಾರೆ. ಹಾಡೇ ಬರೆಯದವರ ಹತ್ತಿರ ಅದರ ಬಗ್ಗೆ ಹಂಸಲೇಖ ಚರ್ಚೆ ನಡೆಸಿರುವ ಸಂಗತಿಯನ್ನು ಒಂಚೂರೂ ಸಂಕೋಚವಿಲ್ಲದೆ ಹೇಳಿಕೊಳ್ಳುತ್ತಾರೆ. ಹಂಸಲೇಖ ತರಹದವರು ಹೀಗೆ ಜಾಹೀರಾಗುವಂತೆ ಸುಳ್ಳುಗಳನ್ನು ಹೇಳುವುದು ತರವೇ?
More from Filmibeat
ಜೀ ಕನ್ನಡ zee kannada ಹುಣಸೂರು ಕೃಷ್ಣಮೂರ್ತಿ ಹಂಸಲೇಖ hamsalekha ಸರಿಗಮಪ ಲಿಟ್ಲ್ ಚಾಂಪ್ಸ್ sarigamapa little champs live programme chi udaya shankar hunsur krishnamurthy ಚಿ ಉದಯಶಂಕರ್


Click it and Unblock the Notifications











